ಮಂಡ್ಯ: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿರುವ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಅಂಬುಲೆನ್ಸ್ ಅಭಾವ ಎದುರಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಸಮಾಜ ಸೇವಕ ಬಿ.ರೇವಣ್ಣ ಅವರು ಮೂರು ಅಂಬುಲೆನ್ಸ್ ಗಳನ್ನು ಮೇಲುಕೋಟೆ ಕ್ಷೇತ್ರದಲ್ಲಿ 24 ಗಂಟೆ ಸಂಚಾರ ಮಾಡಲು ನಿಯೋಜನೆ ಮಾಡಿದ್ದಾರೆ.
- Advertisement 2
ಇಂದು ಮೂರು ಅಂಬುಲೆನ್ಸ್ ಗಳಿಗೆ ಪಾಂಡವಪುರ ತಾಲೂಕು ಕಚೇರಿ ಎದುರು ಚಾಲನೆ ನೀಡಲಾಯಿತು. ಈ ಮೂರು ಅಂಬುಲೆನ್ಸ್ ಗಳಲ್ಲಿ ಆಕ್ಸಿಜನ್ ಹಾಗೂ ತುರ್ತು ಸೇವೆಗಳು ಒಳಗೊಂಡಿವೆ. ಅಂಬುಲೆನ್ಸ್ ಗಳ ಮೇಲೆ ಹಾಗೂ ಪಾಂಡವಪುರ ತಾಲೂಕಿನ ವ್ಯಾಪ್ತಿಯ ಸರ್ಕಲ್ ಗಳಲ್ಲಿ ನಂಬರ್ ನ್ನು ಹಾಕಲಾಗಿದೆ. ಆ ನಂಬರ್ ಗೆ ಕರೆ ಮಾಡಿದರೆ ಅಂಬುಲೆನ್ಸ್ ತಕ್ಷಣ ಬರುವ ವ್ಯವಸ್ಥೆ ಮಾಡಲಾಗಿದೆ.
- Advertisement 3
- Advertisement 4
ಇದಲ್ಲದೇ ಪಾಂಡವಪುರ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಉತ್ಪಾದನೆ ಮಾಡುವ ಐದು ಯಂತ್ರಗಳನ್ನು ನೀಡಿದ್ದು, ಜೊತೆ ಜನರಿಗೆ ಮೆಡಿಸಿನ್ ಕಿಟ್ನ್ನು ಸಹ ವಿತರಣೆ ಮಾಡಿದ್ದಾರೆ.