– ಹಣಕ್ಕಾಗಿ ಅಪ್ಪನ ಕೊಲೆ
ಪಾಟ್ನಾ: ಕೈಮೂರ್ ಡುಮರ್ಕೋನ್ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನ ಪೊಲೀಸರು ಭೇದಿಸಿದ್ದು, ತಂದೆಯನ್ನ ಕೊಂದ ಮಗನನ್ನ ಬಂಧಿಸಿದ್ದಾರೆ. ಅಕ್ಟೋಬರ್ 19ರಂದು ಈ ಕೊಲೆ ನಡೆದಿತ್ತು.
ಅಕ್ಟೋಬರ್ 19ರಂದು ರುಂಡ- ಮುಂಡ ಬೇರ್ಪಡೆಯಾದ ಶವ ಪತ್ತೆಯಾಗಿತ್ತು. ಚೈನಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡ ತನಿಖೆ ಆರಂಭಿಸಿದ್ದರು. ಸಾವನ್ನಪ್ಪಿದ ವ್ಯಕ್ತಿಯ ಗುರುತು ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆಯನ್ನ ಚುರುಕುಗೊಳಿಸಿದ್ದರು. ಮೊದಲಿಗೆ ಮೃತ ಯಾರೊಂದಿಗಾದ್ರೂ ಜಗಳ ಮಾಡಿಕೊಂಡಿರುವ ಕುರಿತು ಮಾಹಿತಿ ಕಲೆ ಹಾಕಲಾರಂಭಿಸಿದ್ದರು. ಮೃತ ಅಪರಾಧ ಹಿನ್ನೆಲೆಯುಳ್ಳವನಾಗಿದ್ದರಿಂದ ಗ್ರಾಮದಲ್ಲಿ ಬಹುತೇಕರೊಂದಿಗೆ ಶತೃತ್ವ ಹೊಂದಿದ್ದನು.
ಪೊಲೀಸರು ಅನುಮಾನದ ಮೇರೆಗೆ ಮೃತನ ಪುತ್ರನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ ಪುತ್ರ ಮೊದಲಿಗೆ ಸುಳ್ಳು ಹೇಳಿ ಬಚಾವ್ ಆಗಲು ಪ್ರಯತ್ನಿಸಿದ್ದಾನೆ. ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ತಂದೆ ಮತ್ತು ಮಗನ ನಡುವೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗಿತ್ತು. ಇದೇ ವಿಚಾರಕ್ಕೆ ಅಕ್ಟೋಬರ್ 19ರಂದು ಜಗಳ ನಡೆದಿದ್ದು, ಕೋಪದಲ್ಲಿ ಕೊಡಲಿಯಿಂದ ತಂದೆಯ ರುಂಡವನ್ನ ಕಡಿದಿದ್ದಾನೆ. ನಂತರ ಶವವನ್ನ ನಿರ್ಜನ ಪ್ರದೇಶದಲ್ಲಿ ಎಸೆದಿದ್ದನು ಎಂದು ಎಸ್.ಪಿ. ದಿಲನ್ವಾಜ್ ಅಹ್ಮದ್ ಹೇಳಿದ್ದಾರೆ.