ಮೈಸೂರು: ಜಮೀನು ವಿಚಾರದಲ್ಲಿ ರೈತರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಂಜನಗೂಡು ತಾಲೂಕು ಇಮ್ಮಾವು ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ 5ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಂದ್ರಶೇಖರ್ ಮತ್ತು ಬೆಂಬಲಿಗರು ಹಾಗೂ ರಘು ಬೆಂಬಲಿಗರ ನಡುವೆ ಹೊಡೆದಾಟ ನಡೆದಿದೆ.
- Advertisement 2
- Advertisement 3
ರಘು ಹೆಸರಿನಲ್ಲಿದ್ದ ಅರ್ಧ ಎಕರೆ ಜಮೀನನ್ನು ಚಂದ್ರಶೇಖರ್ ಉಳುಮೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಜಮೀನು ಬಿಡಿಸಿಕೊಳ್ಳಲು ರಘು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯ ರಘು ಪರ ತೀರ್ಪು ನೀಡಿತ್ತು. ಆದರೆ ತೆರವುಗೊಳಿಸುವ ಆದೇಶ ಇನ್ನೂ ನೀಡಿರಲಿಲ್ಲ.
- Advertisement 4
ಇತ್ತ ತೀರ್ಪಿನ ಅನ್ವಯದಂತೆ ರಘು ಜಮೀನು ತೆರುವುಗೊಳಿಸುವಂತೆ ಒತ್ತಡ ಹೇರಿದ್ದ. ಹೀಗಾಗಿ ಕೆಲವು ರೈತರನ್ನ ಕರೆದುಕೊಂಡು ಹೋಗಿ ಜಮೀನು ಬಿಟ್ಟುಕೊಡುವಂತೆ ತಾಕೀತು ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತಾರಕಕ್ಕೆ ಹೋಗಿ ರೈತರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.