– ಪ್ರಮುಖ ರಸ್ತೆಗಳಲ್ಲಿ ಮೈಕ್ ಹಿಡಿದು ಜನರಲ್ಲಿ ಜಾಗೃತಿ
ಕೋಲಾರ: ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಸ್ತೆಗಿಳಿದು ಜನರಿಗೆ ಕೊರೊನಾ ಜಾಗೃತಿ ಮೂಡಿಸಿದ್ದಾರೆ.
- Advertisement 2
ಎಸ್.ಎನ್.ನಾರಾಯಣಸ್ವಾಮಿ, ಖುದ್ದು ನಗರದಲ್ಲಿ ಮೈಕ್ ಹಿಡಿದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಿ ಕೋಲಾರ ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಿಂದ ಸೋಂಕಿನ ಪ್ರಕರಣ ಹೆಚ್ಚಾಗುತ್ತಿದೆ. ಹಾಗಾಗಿ ಯಾರೋ ಕೂಡ ನಿರ್ಲಕ್ಷ್ಯವಹಿಸುವುದು ಬೇಡ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾದಿಂದ ಮುಕ್ತರಾಗುವಂತೆ ಸಲಹೆ ನೀಡಿದರು.
- Advertisement 3
- Advertisement 4
ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ತಹಶೀಲ್ದಾರ್ ದಯಾನಂದ್, ಸಿಪಿಐ ಸುನಿಲ್ ಕುಮಾರ್, ಸೇರಿದಂತೆ ಅರೋಗ್ಯ ಇಲಾಖೆ ಅಧಿಕಾರಿಗಳು, ಪೊಲೀಸರು, ಪುರಸಭೆ ಸದಸ್ಯರು ಕೊರೊನಾ ಜಾಗೃತಿ ಮೂಡಿಸಲು ಸಾಥ್ ನೀಡಿದರು.