ಮಂಡ್ಯ: ಕೊರೊನಾಗೆ ಹೆದರಿ ಊರಲ್ಲಿ ಇದ್ದ ಮನೆಯನ್ನು ಬಿಟ್ಟು, ಜಮೀನಿನಲ್ಲಿ ಗುಡಿಸಲು ನಿರ್ಮಿಸಿಕೊಂಡು ಕುಟುಂಬವೊಂದು ವಾಸ ಮಾಡುತ್ತಿರುವುದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಕಂಡು ಬಂದಿದೆ.
- Advertisement 2
ಪಾಲಹಳ್ಳಿ ಗ್ರಾಮದ ಕುಮಾರ್ ಕೊರೊನಾ ಮಹಾ ಮಾರಿಗೆ ಹೆದರಿ ಮನೆಯನ್ನು ತೊರೆದು ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಾರೆ. ಕುಮಾರ್ ಮನೆಯ ಅಕ್ಕ-ಪಕ್ಕ ಐದಾರು ಮಂದಿಗೆ ಕೊರೊನಾ ಸೋಂಕು ತಗುಲಿತ್ತು. ಇವರಿಂದ ನಮಗೂ ಕೊರೊನಾ ತಗುಲುತ್ತದೆ ಎಂದು ಕುಮಾರ್ ಗಾಬರಿಗೊಂಡಿದ್ದಾರೆ. ಇದನ್ನೂ ಓದಿ: ಕುಡಿಯಲು ನೀರು ಸಿಗದೆ ಬಾಲಕಿ ಸಾವು
- Advertisement 3
- Advertisement 4
ತನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಊರಿನ ಹೊರ ಭಾಗವಿರುವ ತಮ್ಮ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಕಳೆದ 20 ದಿನಗಳಿಂದ ವಾಸವಿದ್ದಾರೆ. ಊರಲ್ಲಿ ಸ್ವಂತ ಮನೆಯನ್ನು ಬಿಟ್ಟು ಬಂದಿರುವ ಕುಮಾರ್, ಮನೆಯಲ್ಲೇ ಇದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗದುಕೊಂಡು ಇರಬಹುದಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಇದನ್ನೂ ಓದಿ: ವೀಡಿಯೋ- ತನ್ನದೇ ನೆರಳು ನೋಡಿ ಹಾಯ್ ಅನ್ನುತ್ತಾ ಖುಪಿ ಪಟ್ಟಿದ್ದ ಐರಾ..!