ರಾಯಚೂರು: ನಗರದ 97 ವರ್ಷದ ವೃದ್ದೆಯೊಬ್ಬರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ನಗುಮೊಗದಿಂದ ಮನೆಗೆ ಹಿಂದಿರುಗಿದ್ದು, ಬೇರೆಯವರಿಗೂ ಆತ್ಮವಿಶ್ವಾಸ ತುಂಬಿದ್ದಾರೆ.
- Advertisement 2
ನಗರದ ಮಹಾವೀರ ಚೌಕ್ ಪ್ರದೇಶದ ವೃದ್ದೆ ಸಜನಿಬಾಯಿ ಜೈನ್ ಈಗ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಏಪ್ರಿಲ್ 21 ರಂದು ಕೊರೊನಾಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಏಪ್ರಿಲ್ 28 ರಂದು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
- Advertisement 3
- Advertisement 4
ರಾಯಚೂರಿನ ಬಸವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ವೃದ್ದೆ ಈಗ ಸೋಂಕಿನಿಂದ ದೂರಾಗಿ ಆರೋಗ್ಯವಾಗಿದ್ದಾರೆ. ಆತ್ಮಸ್ಥರ್ಯ, ಭಯವಿಲ್ಲದಿದ್ದರೆ ರೋಗಿಗಳು ಬೇಗ ಗುಣಮುಖರಾಗುತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ. ಕೊರೊನಾಕ್ಕೆ ಭಯ ಪಡುವುದು ಬೇಡ ಲಕ್ಷಣಗಳು ಕಂಡುಬಂದ ಕೂಡಲೇ ಚಿಕಿತ್ಸೆ ತೆಗೆದುಕೊಳ್ಳಬೇಕು, ಮುನ್ನೆಚ್ಚರಿಕೆಯಾಗಿ ಕೋವಿಡ್ ನಿಯಮಗಳನ್ನ ಪಾಲಿಸಬೇಕು ಅಂತ ಆಸ್ಪತ್ರೆ ವೈದ್ಯ ಡಾ.ಬಸವರಾಜ್ ಎಂ ಪಾಟೀಲ್ ಹೇಳಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುವ ಜೊತೆಗೆ ಅಜ್ಜಿ ಧೈರ್ಯವಾಗಿದ್ದು ಬೇಗ ಗುಣಮುಖರಾಗಿರುವುದಕ್ಕೆ ಆಸ್ಪತ್ರೆ ಸಿಬ್ಬಂದಿ ಹರ್ಷವ್ಯಕ್ತಪಡಿಸಿದ್ದಾರೆ.