ಮಡಿಕೇರಿ: ಕೊಡಗಿನ ಗಡಿ ಭಾಗ ಕಾರ್ಮಾಡುವಿನಲ್ಲಿ ವನವಾಸಿ ಜನರು ಗಿರಿ ಜನೋತ್ಸವದ ಅದ್ಧೂರಿ ಕಾರ್ಯಕ್ರಮ ನಡೆಸಿದರು.
ಗಿರಿಜನರನ್ನು ಒಂದು ಕಡೆ ಸೇರಿಸುವ ಉದ್ದೇಶದಿಂದ ಮತ್ತು ಗಿರಿ ಜನರ ಕಲೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಮೈಸೂರಿನ ರಂಗಯಣ ಮತ್ತು ವನವಾಸಿ ಕಲ್ಯಾಣ ಕೇಂದ್ರ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಪೋನ್ನಪೇಟೆ ತಾಲೂಕಿನ ಕಾರ್ಮಾಡು ಗ್ರಾಮದಲ್ಲಿ ರಾಜ್ಯಮಟ್ಟದ ಗಿರಿಜನೊತ್ಸವ ಕಾರ್ಯಕ್ರಮ ನಡೆಸಿದರು. ವನವಾಸಿಗಳು ಕಾಡಿನಲ್ಲಿ ಪ್ರಕೃತಿಯನ್ನು ಪೂಜಿಸಿತ್ತಾ ಕಾಡಿನಲ್ಲೇ ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.
ಅವರ ಆಚಾರ, ವಿಚಾರ, ಕಲೆ, ಸಂಸ್ಕೃತಿ ಶ್ರೀಮಂತವಾಗಿದ್ದು ಆಧುನಿಕ ಯುಗದಲ್ಲಿ ಕಲೆಯನ್ನು ಉಳಿಸಲು ಯುವ ಪೀಳಿಗೆಯಲ್ಲಿ ಕಲೆಯನ್ನು ಬೆಳೆಸುವ ಉದ್ದೇಶದಿಂದ ಹಲವಾರು ಕಲಾ ತಂಡಗಳನ್ನು ಒಂದು ಕಡೆ ಸೇರಿಸಿ 10ಕ್ಕೂ ಹೆಚ್ಚು ಕಲಾ ತಂಡಗಳು ಜಾನಪದ ನೃತ್ಯಗಳನ್ನು ಪ್ರದರ್ಶನ ಮಾಡಿದರು. ರಂಗಾಯಣ ನಡೆ ಗಿರಿಜನರೆಡೆಗೆ ಎಂದು ಘೋಷ ವಾಖ್ಯಾ ಇಟ್ಟುಕೊಂಡು ಗಿರಿ ಜನರ ಕಡೆಗೆ ಹೋಗುತ್ತಿದ್ದೇವೆ ಎಂದು ರಂಗಾಯಣ ನಿರ್ದೇಶಕ ಅಡಂಡ್ಡ ಕಾರ್ಯಪ್ಪ ಎಂದರು.
ಕೊಡಗು ಜಿಲ್ಲೆಯ ಕಾಡು ಕುರುಬ. ಮಲೆಕುಡಿಯ ಯರವ ಜನಾಂಗದ ಆದಿವಾಸಿಗಳು ಸೇರಿದಂತೆ ಮೈಸೂರು, ಚಾಮರಾಜನಗರ, ದಕ್ಷಿಣಕನ್ನಡ, ಮಂಡ್ಯ, ರಾಮನಗರದ ಗಿರಿಜನ ಕಲಾ ತಂಡಗಳು ಅವರ ಸಂಸ್ಕೃತಿ ಬಿಂಬಿಸುವ ಉಡುಪು ತೊಟ್ಟು ನೃತ್ಯ ಮಾಡಿದರು. ಪೂಜಕುಣಿತ, ಯರವರಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಯರವ ಕುಣಿತ ಪರೆಕೊಟ್ ಹೀಗೆ ಮುಂತಾದ ನೃತ್ಯಗಳನ್ನು ಕಾಡಿನಲ್ಲಿ ಸಿಕ್ಕುವ ಪರಿಕರಗಳನ್ನು ಬಳಸಿಕೊಂಡು ಹಾಡು ಹಾಡುತ್ತಾ ನೃತ್ಯ ಮಾಡುತ್ತಾ ನೆರೆದಿದ್ದ ಪ್ರೇಕ್ಷಕರಿಗೆ ಕಲಾರುಚಿಯನ್ನು ಉಣಬಡಿಸಿದರೆ ಪ್ರೇಕ್ಷಕರು ಸಿಳ್ಳೆ ಚಪ್ಪಾಳೆ ತಟ್ಟಿ ಕಲಾವಿದರಿಗೆ ಪ್ರೋತ್ಸಾಹ ನೀಡಿದರು.
ಒಟ್ಟಿನಲ್ಲಿ ಆಧುನಿಕ ನೃತ್ಯಗಳನ್ನು ನೋಡಿ ಬೇಸತ್ತಿದ್ದ ಜನರು ಹಲವು ಜಿಲ್ಲೆಯ ಕಲಾತಂಡಗಳ ಸಂಸ್ಕøತಿಯನ್ನು ಬಿಂಬಿಸುವ ಜಾನಪದ ನೃತ್ಯಗಳನ್ನು ನೋಡಿ ಸಖತ್ ಎಂಜಾಯ್ ಮಾಡಿದರು. ಇನ್ನೂ ಕಲಾವಿದರಂತೂ ಬೇರೆ ಸಂಸ್ಕೃತಿ ಬಿಂಬಿಸುವ ಕಲೆಗಳನ್ನು ನೋಡಿ ಖುಷಿಪಟ್ಟರು.