ವಿಡಿಯೋ: ಮಹಿಳಾ ಸಿಬ್ಬಂದಿಗೆ ಕಾಲಿನಿಂದ ಒದ್ದ ನಗರಸಭೆ ನೌಕರ

Public TV
1 Min Read
CTD

ರಾಯಚೂರು: ಜಿಲ್ಲೆಯ ಸಿಂಧನೂರು ನಗರಸಭೆ ಕಚೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಸಹೋದ್ಯೋಗಿಯೇ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

ಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿರುವ ದಿನಗೂಲಿ ನೌಕರ ಶರಣಪ್ಪ, ಎಸ್‍ಡಿಎ ನಸ್ರಿನಾ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ನೌಕರನ್ನು ಜಿಲ್ಲಾಧಿಕಾರಿ ಕೆಲಸದಿಂದ ವಜಾ ಮಾಡಿದ್ದಾರೆ.

ಈ ಘಟನೆ ಜೂನ್. 10ರಂದು ನಡೆದಿದೆ. ಕಚೇರಿಗೆ ತಡವಾಗಿ ಬಂದು ಕೆಲಸವನ್ನೂ ಮಾಡುತ್ತಿಲ್ಲ ಅಂತ ಆರೋಪಿ ಮಹಿಳಾ ಸಹೋದ್ಯೋಗಿ ಮೇಲೆ ಕಾಲಿನಿಂದ ಒದ್ದಿದ್ದಾನೆ. ಹಲ್ಲೆ ಬಳಿಕವೂ ಬೆದರಿಕೆ ಹಾಕಿದ್ದಾನೆ. ಮಹಿಳಾ ಸಿಬ್ಬಂದಿ ಮೇಲೆ ನಡೆದ ಹಲ್ಲೆಯ ಸಿಸಿ ಟಿವಿಯ ಎಕ್ಸಕ್ಲೂಸಿವ್ ದೃಶ್ಯಗಳು ಇದೀಗ ಪಬ್ಲಿಕ್ ಟಿಗೆ ಲಭಿಸಿದೆ.

ಈಗಾಗಲೇ ಆರೋಪಿ ಶರಣಪ್ಪನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

https://www.youtube.com/watch?v=APkIRhw-4YU

Share This Article
Leave a Comment

Leave a Reply

Your email address will not be published. Required fields are marked *