ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಒಂದೇ ವಾರದಲ್ಲಿ ಎರಡು ಬಾರ್ನಲ್ಲಿ ಕಳ್ಳತನದ ಘಟನೆ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆಯಷ್ಟೇ ನಗರದ ತೇಜಸ್ವಿನಗರದಲ್ಲಿ ಎಂಎಸ್ಐಎಲ್ ನಲ್ಲಿ ಕಳ್ಳತನ ಮಾಡಿದ್ದರು. ಎಂಎಸ್ಐಎಲ್ ನಲ್ಲಿದ್ದ 65 ಸಾವಿರ ನಗದು ಹಾಗೂ ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿದ್ದರು. ಈಗ ಮತ್ತೇ ಧಾರವಾಡ ನಗರದ ಸಪ್ತಾಪೂರದಲ್ಲಿ ತ್ರಿವೇಣಿ ಎಂಬ ಬಾರ್ ನಲ್ಲಿಯೂ ಕಳ್ಳತನ ಮಾಡಲಾಗಿದೆ. ಇದನ್ನೂ ಓದಿ: ಅಡವಿಡುವಾಗ ಅಸಲಿ, ತೆಗೆಯುವಾಗ ನಕಲಿ – ಗ್ರಾಮಸ್ಥರಿಂದ ಬ್ಯಾಂಕಿಗೆ ಮುತ್ತಿಗೆ
ಬಾರ್ ನ ಶಟರ್ ಮುರಿದು ಚಾಲಾಕಿ ಕಳ್ಳರು ತಮ್ಮ ಕೈಚಳಕ ತೋರಿಸಿ, ಬಾರ್ ನಲ್ಲಿದ ಬಾಟಲ್, ನಗದು ಹಣದ ಜೊತೆಗೆ ಸಿಸಿಟಿವಿ ಡಿವಿಆರ್ನ್ನು ಕದ್ದು ಪರಾರಿಯಾಗಿದ್ದಾರೆ. ಕ್ಯಾಮೆರಾಗಳನ್ನು ಡ್ಯಾಮೆಜ್ ಮಾಡಿರುವ ಕಳ್ಳರು, ಬಾರ್ ಕೌಂಟರ್ ನಲ್ಲಿದ್ದ 40 ಸಾವಿರಕ್ಕೂ ಹೆಚ್ಚು ನಗದು ಹಣ ಹಾಗೂ ಮದ್ಯದ ಬಾಟಲ್ ಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.