ಮಡಿಕೇರಿ: ರಭಸದಿಂದ ಬಂದ ಲಾರಿಯೊಂದು ಅರಣ್ಯ ತಪಾಸಣಾ ಗೇಟ್ ಗೆ ಡಿಕ್ಕಿ ಹೊಡೆದು ಆ ಗೇಟ್ ಪಾಲಕನಿಗೆ ಬಡಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ ನಡೆದಿದೆ.
ರಾಜಪ್ಪ ಗಂಭೀರವಾಗಿ ಗಾಯಗೊಂಡಿದ್ದ ಗೇಟ್ ಪಾಲಕ. ರಾಜಪ್ಪ ಅರಣ್ಯ ಇಲಾಖೆಯ ಹಂಗಾಮಿ ನೌಕರನಾಗಿದ್ದು ಗೇಟ್ ಹಾಕುವ ಕೆಲಸ ಮಾಡುತ್ತಿದ್ದರು. ಈ ವೇಳೆ ಲಾರಿಯೊಂದು ರಭಸದಿಂದ ಬಂದು ಗೇಟ್ಗೆ ಡಿಕ್ಕಿ ಹೊಡೆದಿದೆ. ಆ ಗೇಟ್ ಪಾಲಕನಿಗೆ ಎರಡು ಬಾರಿ ಹೊಡೆದಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಏಪ್ರಿಲ್ 6ರ ಬೆಳಿಗ್ಗೆ 10.50 ಕ್ಕೆ ಘಟನೆ ನಡೆದಿದ್ದು, ರಾಜಪ್ಪ ಗೇಟ್ ಹಾಕುವ ಕೆಲಸ ಮಾಡುತ್ತಿದ್ದರು. ಮಡಿಕೇರಿ ಕಡೆಯಿಂದ ಬಂದ ಲಾರಿ ಏಕಾಏಕಿ ಗೇಟ್ ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಗೇಟ್ ರಸ್ತೆ ಬದಿ ನಿಲ್ಲಿಸಿದ ಇಕೋ ವಾಹನಕ್ಕೆ ಸೇರಿಸಿ ರಾಜಪ್ಪ ಅವರಿಗೆ ಎರಡು ಬಾರಿ ಅಪ್ಪಳಿಸಿದೆ.
ಲಾರಿಯ ಬ್ರೇಕ್ ವಿಫಲಗೊಂಡ ಪರಿಣಾಮ ರಾಜಿ ಸಂಧಾನ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸದ್ಯ ರಾಜಪ್ಪ ಅವರನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
https://www.youtube.com/watch?v=wgpKi3w4EeU&feature=youtu.be