ದೊಡ್ಮನೆಯ ಅಸಲಿ ಆಟ ಜೋರಾಗಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಬಿಗ್ ಬಾಸ್ (Bigg Boss Kannada) ಆಟ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹುಲಿ ಉಗುರಿನ ಕೇಸ್ಗೆ ಬೇಲ್ ಸಿಕ್ಕ ಮೇಲೆ ಮತ್ತೆ ದೊಡ್ಮನೆಗೆ ವರ್ತೂರು ಸಂತೋಷ್ ಎಂಟ್ರಿ ಕೊಟ್ಟಿದ್ದು, ಒಂದು ವಾರ ಎಲ್ಲಿದ್ರಿ ಅಂತ ಪ್ರಶ್ನೆಗಳ ಸುರಿಮಳೆಯನ್ನ ಸಹ ಸ್ಪರ್ಧಿಗಳು ಮುಂದಿಟ್ಟಿದ್ದಾರೆ.
ವರ್ತೂರು ಸಂತೋಷ್ (Varthur Santhosh) ಆಗಮನ ಕೆಲ ಮಂದಿಗೆ ಖುಷಿ ಕೊಟ್ಟಿದ್ರೆ, ಇನ್ನೂ ಕೆಲವರು ಒಂದು ವಾರ ಎಲ್ಲಿದ್ರೂ? ಈಗ ಯಾಕೆ ಬಂದ್ರು ಅಂತ ತಲೆ ಕೆಡಿಸಿಕೊಂಡಿದ್ದಾರೆ. ಸಂತೋಷ್ಗೆ ಬಿಸಿನೆಸ್ ಮೇಲೆ ಹೋಗಿದ್ರಾ ಅಥವಾ ಏನಾದರೂ ಸಮಸ್ಯೆ ಆಗಿತ್ತಾ ಅಂತಾ ವಿನಯ್ ಕೇಳಿದ್ದಾರೆ. ಏನಾಗಿತ್ತು ಎಂದು ಹಲವರು ಕೇಳಿದ್ರೂ ಕೂಡ ವೈಯಕ್ತಿಕ ಕಾರಣ ಹೇಳುವಂತಿಲ್ಲ ಎಂದು ವರ್ತೂರು ಸಂತೋಷ್ ಪ್ರತಿಕ್ರಿಯೆ ನೀಡಿದ್ದರು. ಬಳಿಕ ಮೌನವಾಗಿ ಬಿಟ್ಟರು.
- Advertisement 2
- Advertisement 3
ನಮ್ರತಾ ಗೌಡ, ನಿಮ್ಮ ಗೋಲ್ಡ್ ಎಲ್ಲಾ ಎಲ್ಲಿ ಅಂತ ಕೇಳಿದ್ರೆ, ಸಂತೋಷ್ ಸೈಲೆಂಟ್ ಆಗಿಯೇ ಇದ್ದರು. ಹೊರಗೆ ನಡೆದ ಯಾವೊಂದು ವಿಚಾರವು ತಿಳಿಸದೇ ಸುಮ್ಮನಾದರು. ಇದನ್ನೂ ಓದಿ:ದರ್ಶನ್ ವಿರುದ್ಧ ದೂರು ದಾಖಲಿಸಿದ್ದ ಮಹಿಳೆಗೆ ಪೊಲೀಸರಿಂದ ನೋಟಿಸ್
- Advertisement 4
ಇನ್ನೂ ನಾಮಿನೇಷನ್ ಪ್ರಕ್ರಿಯೆಯಲ್ಲಿ, ವರ್ತೂರು ಸಂತೋಷ್ ಅವರನ್ನೇ ಟಾರ್ಗೆಟ್ ಮಾಡಿ ಸಹಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಬಿಗ್ ಬಾಸ್ನಲ್ಲಿ ಒಂದು ವಾರ ಸಂತೋಷ್ ಇಲ್ಲದೇ ಇರುವುದನ್ನೇ ಕಾರಣ ಕೊಟ್ಟು ನಾಮಿನೇಟ್ ಮಾಡಿದ್ದಾರೆ.