ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಎಲ್ಲಿದ್ದಾರೆ ಎಂಬುದನ್ನು ತಮ್ಮ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆಯಿರಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಬೇಳೂರು ವಿರುದ್ಧ ಕಿಡಿಕಾರಿದ್ದಾರೆ.
ಮಾಟ ಮಾಡಿಸಲು ಬಿಎಸ್ವೈ ಕೇರಳಕ್ಕೆ ಹೋಗಿದ್ದಾರೆ ಎನ್ನುವ ಬೇಳೂರು ಗೋಪಾಲಕೃಷ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ಬೇಳೂರು ಒಬ್ಬ ಹಗುರ ಮಾತಿನ ವ್ಯಕ್ತಿ. ಹೀಗಾಗಿ ಅವರ ಹೇಳಿಕೆಗೆ ಯಾವುದೇ ಉತ್ತರ ನೀಡಲ್ಲ. ಯಡಿಯೂರಪ್ಪನವರ ಕೇರಳದ ಭೇಟಿ ಬಗ್ಗೆ ಇಂಟೆಲಿಜೆನ್ಸ್ ಮೂಲಕ ಮಾಹಿತಿ ಪಡೆದುಕೊಳ್ಳಿ. ಅಲ್ಲದೇ ನಿಮ್ಮ ಸರ್ಕಾರದ ಪೊಲೀಸರು ಸಹ ಅವರ ಜೊತೆಯಲ್ಲಿದ್ದಾರೆ. ಅವರನ್ನೇ ಕೇಳಿ ತಿಳಿದುಕೊಳ್ಳಿ ಎಂದು ಹೇಳಿದರು.
ಕೇರಳದಲ್ಲಿ ನಿಮ್ಮ ಮಹಾಘಟಬಂಧನ ಸರ್ಕಾರವಿದೆ. ಯಡಿಯೂರಪ್ಪ ಎಲ್ಲಿದ್ದಾರೆ? ಯಾವ ವಿಮಾನದಲ್ಲಿ ಹೊರಟರು? ಎಲ್ಲಿಗೆ ಹೋಗಿದ್ದಾರೆ ಎನ್ನುವ ಬಗ್ಗೆ ಇಂಟೆಲಿಜೆನ್ಸ್ ಮೂಲಕ ತನಿಖೆ ಮಾಡಿಸಿ ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv