ತಿರುವನಂತಪುರಂ: ಅಂಗಡಿಯೊಂದಕ್ಕೆ ದರೋಡೆ ಮಾಡಲು ಬಂದಿದ್ದ ಕಳ್ಳನೊಬ್ಬ ಏನು ಸಿಗದೇ ಬರಿಗೈಯಲ್ಲಿ ಹೋಗುವಾಗ ‘ಹಣ ಇಲ್ಲದಿದ್ದರೂ ಯಾಕೆ ಬೀಗ ಹಾಕಿದ್ದಿರಾ’ ಎಂದು ಅಂಗಡಿ ಮಾಲೀಕನಿಗೆ ಪ್ರಶ್ನಿಸಿ ಪತ್ರ ಬರೆದಿರುವ ವಿಲಕ್ಷಣ ಘಟನೆ ಕೇರಳದ ಕುಂದಂಕುಲಂನಲ್ಲಿ ನಡೆದಿದೆ.
ಪುಲ್ಪಳ್ಳಿ ಮೂಲದ ವಿಶ್ವರಾಜ್(40) ಬಂಧಿತ ಆರೋಪಿ. ವಿಶ್ವರಾಜ್ ಕುಂದಂಕುಲಂನ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ 3 ಅಂಗಡಿಗಳನ್ನು ದರೋಡೆ ಮಾಡಲು ಹೋಗಿದ್ದ. ಅದರಲ್ಲಿ ಮೊದಲನೇ ಅಂಗಡಿಯಿಂದ 12,000 ರೂ., ಎರಡನೇ ಅಂಗಡಿಯಿಂದ 500 ರೂ.ಗಳನ್ನು ಕದ್ದಿದ್ದ.
ಇದಾದ ಬಳಿಕ ಮೂರನೇ ಅಂಗಡಿಯಲ್ಲೂ ಕಳ್ಳತನ ಮಾಡಲು ಹೋಗಿದ್ದ. ಆದರೆ ಆತನಿಗೆ ಹಣ ಸಿಗದೆ ಬರಿಗೈಯಲ್ಲಿ ವಾಪಸ್ ಹೋಗಬೇಕಾಗಿ ಬಂದಿದೆ. ಇದರಿಂದಾಗಿ ಕೋಪಗೊಂಡ ಆತ ಹೋಗುವಾಗ ಅಲ್ಲಿಯ ಮಾಲೀಕನಿಗೆ ಒಂದು ಚೀಟಿಯನ್ನು ಬರೆದು ಹೋಗಿದ್ದಾನೆ. ಅದರಲ್ಲಿ ಹಣವಿಲ್ಲದಿದ್ದರೂ ಬಾಗಿಲಿಗೆ ಬೀಗ ಹಾಕಿದ್ದು ಏಕೆ ಎಂದು ಪ್ರಶ್ನಿಸಿ ಹೋಗಿದ್ದಾನೆ. ಪ್ರಕರಣ ಸಂಬಂಧಿಸಿ ಕ್ರಮ ಕೈಗೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನೂಪುರ್ ಶರ್ಮಾರನ್ನು ಬಿಜೆಪಿ ದೆಹಲಿ ಸಿಎಂ ಅಭ್ಯರ್ಥಿಯನ್ನಾಗಿ ಮಾಡುತ್ತೆ: ಓವೈಸಿ
ಈ ಹಿಂದೆಯೂ ವಿಶ್ವರಾಜ್ ಕಲ್ಪೆಟ್ಟಾದಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ಸಂದರ್ಭದಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಅಷ್ಟೇ ಅಲ್ಲದೇ ಈತ ಕೇರಳದ ವಿವಿಧ ಜಿಲ್ಲೆಗಳಲ್ಲಿ ಸುಮಾರು 53 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಇದನ್ನೂ ಓದಿ: `ಅಗ್ನಿಪಥ್’ ಪ್ರತಿಭಟನೆ – ಸಿಕಂದರಾಬಾದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಅರೆಸ್ಟ್