ಬಳ್ಳಾರಿ: ಸಾಲದ (Loan) ಕಾಟಕ್ಕೆ ಬೇಸತ್ತು, ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯ (Bellary) ಬಂಡಿಹಟ್ಟಿಯಲ್ಲಿ ನಡೆದಿದೆ.
ನಗರದ ಆಂಜನೇಯ ದೇವಸ್ಥಾನ ಬಳಿ ನಿವಾಸಿಗಳಾದ ಈರಣ್ಣ (28) ತನ್ನ ಪತ್ನಿ ದುರ್ಗಮ್ಮಳನ್ನ (25) ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ. ಈರಣ್ಣನ ಈ ಕೆಟ್ಟ ನಿರ್ಧಾರದಿಂದ ರಾಕೇಶ್ ಎಂಬ 16 ತಿಂಗಳ ಮಗು ಅನಾಥವಾಗಿದೆ. ಇದನ್ನೂ ಓದಿ: ಕುಡಿದು ದೇಗುಲದ ಗೋಡೆಗೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಆಕ್ಸಿಡೆಂಟ್ ಮಾಡಿ ಬಾಲಕನ ಕೊಲೆ
ಮೃತ ಈರಣ್ಣನಿಗೆ ಕುಡಿಯುವ ಚಟ ಇತ್ತು. ಅದಕ್ಕಾಗಿ ಪತ್ನಿ ಬಳಿ ಪದೇ ಪದೇ ಹಣ ಕೇಳುತ್ತಿದ್ದ. ಪತ್ನಿ ಅಲಲ್ಲಿ ಸಾಲ ಮಾಡಿ ಪತಿಗೆ ಹಣ ನೀಡಿದ್ದಳು. ಆದ್ರೆ ಹೆಂಡತಿ ಬಳಿ ಹಣ ಪಡೆದ ಪತಿ, ಈರಣ್ಣಾ ಕುಡಿದು ಹಾಳು ಮಾಡಿದ್ದಾನೆ. ಕೊನೆಗೆ ಸಾಲಗಾರರು ಮನೆಗೆ ಬಂದು ಹಣ ಕೇಳುತ್ತಾರೆ, ಎಲ್ಲಿಂದ ಹಣ ತಂದು ಕೊಡುತ್ತೀಯಾ ಎಂದು ಪತ್ನಿ ದುರ್ಗಮ್ಮ, ಪತಿಯ ಜೊತೆ ಜಗಳ ಮಾಡಿದ್ದಾಳೆ. ಇದರಿಂದ ಭಯಪಟ್ಟು ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಪತ್ನಿಯನ್ನ ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಭಂದ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ (Cowl Bazar Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗ್ಯಾಂಗ್ ರೇಪ್ಗೆ ಒಳಗಾಗಿ ತಪ್ಪಿಸಿಕೊಂಡ ಮಹಿಳೆ- ಬೆತ್ತಲಾಗಿ ಸಹಾಯಕ್ಕೆ ಅಂಗಲಾಚಿದ್ರೂ ಹುಚ್ಚಿ ಎಂದುಕೊಂಡ ಜನ
Web Stories