ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆಯಷ್ಟೇ ನರೇಶ್ ಅವರ ಮೂರನೇ ಪತ್ನಿ ಬೆಂಗಳೂರು ಮೂಲದ ರಮ್ಯಾ, ಪತಿಯ ಬಗ್ಗೆ ನಾನಾ ಆರೋಪಗಳನ್ನು ಮಾಡಿದ್ದರು. ಈ ಆರೋಪಗಳಿಗೆ ಉತ್ತರ ಕೊಡಲೆಂದೇ ನರೇಶ್ ಇಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಆಯೋಜನೆ ಮಾಡಿದ್ದರು. ಆದರೆ, ದಿಢೀರ್ ಅಂತ ಪತ್ರಿಕಾಗೋಷ್ಠಿಯನ್ನೇ ರದ್ದು ಮಾಡಿದ್ದಾರೆ ನರೇಶ್.
ಪಬ್ಲಿಕ್ ಟಿವಿಯ ಎಕ್ಸಕ್ಲೂಸಿವ್ ಸಂದರ್ಶನಕ್ಕಾಗಿ ಕಚೇರಿಗೆ ಬಂದಿದ್ದ ನರೇಶ್, ಹತ್ತು ಹಲವು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ರಮ್ಯಾ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ರಮ್ಯಾ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಪವಿತ್ರಾ ಲೋಕೇಶ್ ನನ್ನ ಆತ್ಮೀಯರು, ವೆಲ್ ವಿಶರ್. ನಮ್ಮಿಬ್ಬರ ಸಂಬಂಧ ಬಗ್ಗೆ ರಮ್ಯಾ ಅವರಿಗೆ ಮಾತನಾಡಲು ಯಾವುದೇ ಹಕ್ಕಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ
ಅಲ್ಲದೇ, ತಮ್ಮ ಕುಟುಂಬದ ಹೆಸರಿನಲ್ಲಿ ರಮ್ಯಾ ಹಣ ಮಾಡುತ್ತಿದ್ದಾರೆ ಎಂದೂ ಆರೋಪಿಸಿರುವ ನರೇಶ್, ತಮ್ಮ ಹೆಸರಿನಲ್ಲೂ ರಮ್ಯಾ ಸಾಲ ಪಡೆದಿದ್ದಾರೆ ಎಂದಿದ್ದಾರೆ. ನಮ್ಮ ಕುಟುಂಬದ ಹೆಸರನ್ನು ಹೇಳಿಕೊಂಡು ರಮ್ಯಾ ದುಡ್ಡು ಕೇಳಿದರೆ, ಯಾರೂ ಕೊಡದಂತೆ ಮನವಿಯನ್ನೂ ಮಾಡಿದ್ದಾರೆ. ನಾನು ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ರಮ್ಯಾ ಅವರು ನನ್ನಿಂದ ದೂರವಾಗಿ ಚೆನ್ನಾಗಿರಲಿ ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.