Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

Cinema

Bigg Boss Kannada- ಅದೊಂದು ನೋವು ಕಾಡುತ್ತಿದೆ: ವಿನಯ್ ಬಿಚ್ಚಿಟ್ಟ ಹೃದಯಂತರಾಳ

Public TV
Last updated: February 1, 2024 9:01 am
Public TV
Share
3 Min Read
Vinay Gowda 3
SHARE

ವಿನಯ್ (Vinay) ಮೊದಲ ಬಾರಿ ಮನಸಿನ ಮಾತನ್ನು ಹಂಚಿಕೊಂಡಿದ್ದಾರೆ. ಬಿಗ್‌ ಬಾಸ್‌ನಿಂದ (Bigg Boss Kannada) ಹೊರ ಬಂದ ಮೇಲೆ ಒಳಗಿದ್ದ ಸಂತಸ, ನೋವು, ಎಲ್ಲವನ್ನು ಹರವಿಟ್ಟಿದ್ದಾರೆ. ಗೆಲ್ಲಲೇಬೇಕೆಂದು ಅಖಾಡಕ್ಕೆ ಇಳಿದಿದ್ದ ಆನೆ ಈಗ ಏನನ್ನು ಹೇಳಿದ್ದಾರೆ ? ಯಾರನ್ನು ದೂರಿದ್ದಾರೆ ? ಯಾರನ್ನು ಹತ್ತಿರ ಬಿಟ್ಟುಕೊಂಡಿದ್ದಾರೆ ? ಸುದೀಪ್, ಸಂಗೀತಾ ಸೇರಿದಂತೆ ಎಲ್ಲರ ಬಗ್ಗೆ ಏನೇನು ಅನಿಸಿಕೆ ಹರವಿಟ್ಟಿದ್ದಾರೆ ? ಅದರ ಎಕ್ಸ್ ಕ್ಲ್ಯೂಸಿವ್  ಮಾಹಿತಿ ಇಲ್ಲಿದೆ.

Vinay 3
ಆನೆ ಘೀಳಿಟ್ಟಿದೆ. ಅಫ್‌ಕೋರ್ಸ್ ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಆನೆ ಸುಮ್ಮನಿರಲಿಲ್ಲ. ಆಟ ಆಡುತ್ತಾ ಆಡುತ್ತಾ ರೊಚ್ಚೆಗೇಳುತ್ತಿದ್ದರು. ಸೇಮ್ ಟೈಮ್ ಇನ್ನೊಬ್ಬರನ್ನು ಅದೇ ರೀತಿ ಕೆಣಕುತ್ತಿದ್ದರು. ಅದನ್ನು ಉದ್ದೇಶ ಪೂರ್ವಕವಾಗಿ ಮಾಡಿರಲಿಲ್ಲ. ಆದರೆ ಕೆಲವರು ಹಾಗಂದುಕೊಂಡರು. ಏನಾದರೂ ಆಗಲಿ, ಕೊನೆಗೂ ಬಿಗ್‌ ಬಾಸ್ ಟಾಪ್ ಫೈವ್ ಸ್ಪರ್ಧಿಗಳಲ್ಲಿ ಒಬ್ಬರಾದರು. ಕರುನಾಡಿನಿಂದ ಶಬ್ಬಾಶ ಎನಿಸಿಕೊಂಡರು. ದಟ್ ಈಸ್ ವಿನಯ್ ಪವರ್.

Vinay Gowda 2

ಬಿಗ್‌ ಬಾಸ್ ಮನೆಯಲ್ಲಿ ವಿನಯ್ ಕೊನೇವರೆಗೂ ಇದ್ದರು. ಆರಂಭದಲ್ಲಿ ಇವರು ಅಷ್ಟು ದಿನ ಇರುವುದಿಲ್ಲ ಎಂದು ಎಲ್ಲರೂ ತಿಳಿದಿದ್ದರು. ಆದರೆ ಆ ನಂಬಿಕೆಯನ್ನು ಆನೆ ಸುಳ್ಳು ಮಾಡಿತು. ದಿನ ದಿನಕ್ಕೆ ಇವರು ಜನರ ಮೆಚ್ಚುಗೆ ಪಡೆಯುತ್ತಾ ಹೋದರು. ಉಳಿದ ಸ್ಪರ್ಧಿಗಳನ್ನು ಹಿಂದಿಕ್ಕಿದರು. ಅಷ್ಟೇ ಅಲ್ಲ, ಇನ್ನೇನು ಟ್ರೋಫಿ ಇವರ ಕೈಗೆ ಕಿಚ್ಚ ಕೊಡುತ್ತಾರೆ ಎಂದು ಅಂದುಕೊಂಡಿದ್ದರು ಜನರು. ಆದರೆ ಹಾಗಾಗಲಿಲ್ಲ. ಅದಕ್ಕೆ ವಿನಯ್‌ಗೆ ಬೇಸರ ಅಗುಳಿನಷ್ಟೂ ಇಲ್ಲ. ಕಾರಣ ನಾಡಿನ ತುಂಬಾ ಸಿಕ್ಕ ಪ್ರೀತಿ ಹಾಗೂ ಗೌರವ.

Vinay Gowda 1 1

ವಿನಯ್ ಮೊದಲಿಂದಲೂ ಯಾರ ಮುಲಾಜಿಗೂ ಬೀಳಲಿಲ್ಲ. ಯಾರ ಜೊತೆಯೂ ಹೀಗೆ ಇರಬೇಕೆಂದು ನಾಟಕ ಮಾಡಲಿಲ್ಲ. ನಾನು ಇರುವುದೇ ಹೀಗೆ. ಇದೇ ರೀತಿ ಆಡುತ್ತೇನೆ ಎನ್ನುತ್ತಲೇ ಎಲ್ಲರ ಮನಸನ್ನು ಗೆದ್ದರು. ಅಫ್‌ಕೋರ್ಸ್ ಇದನ್ನೇ ಸ್ಪರ್ಧಿಗಳಿಗೆ ಹೇಳಲು ಬರುವುದಿಲ್ಲ. ಯಾಕೆಂದರೆ ಸಂಗೀತಾ ಹಾಗೂ ವಿನಯ್ ಬಿಗ್‌ಬಾಸ್‌ಗೆ ಬರುವ ಮುನ್ನವೇ ಜತೆಯಾಗಿ ಕೆಲಸ ಮಾಡಿದ್ದರು. ಆದರೆ ಮನೆ ಒಳಗೆ ಕಾಲಿಟ್ಟಾಗ ಇಬ್ಬರೂ ವೈರಿಗಳು ಅನ್ನೋ ರೀತಿ ವರ್ತಿಸಲು ಆರಂಭಿಸಿದರು. ಅದಕ್ಕೆ ಕಾರಣ ಏನು?

vinay gowda

ಸಂಗೀತಾ ಹಾಗೂ ವಿನಯ್ ಒಂದು ಮನೆಯಲ್ಲಿ ಅಲ್ಲ. ಒಂದು ಊರಿನಲ್ಲಿ ಇರಲೂ ಸಾಧ್ಯ ಇಲ್ಲ. ಆ ಮಟ್ಟಕ್ಕೆ ಇಬ್ಬರೂ ಹಲ್ಲಲ್ಲು ಕಡಿಯುತ್ತಿದ್ದರು. ಟಾಸ್ಕ್ಗಳಲ್ಲಿ ಇಬ್ಬರೂ ಅದು ಯಾವ ರೀತಿ ಹಾಕ್ಯಾಟಕ್ಕೆ ಬಿದ್ದಿದ್ದರೆಂದು ಎಲ್ಲರಿಗೂ ಗೊತ್ತು. ಬಳೆ ಟಾಸ್ಕ್ನಲ್ಲಂತೂ ಅದು ತಾರಕಕ್ಕೆ ಮುಟ್ಟಿತ್ತು. ಸುದೀಪ್ ಕೂಡ ಇವರ ನಡುವೆ ಎಂಟ್ರಿ ಕೊಡಬೇಕಾಯಿತು. ಸಂಗೀತ ವರ್ತನೆಯೇ ನನ್ನ ಹಾಗೂ ಅವರ ನಡುವೆ ಜಗಳಕ್ಕೆ ಬುನಾದಿ ಹಾಕಿತು ಎಂದು ಸತ್ಯವನ್ನು ಒಪ್ಪಿಕೊಂಡಿದ್ದಾರೆ ವಿನಯ್. ಆನೆ.. ಇದು ಬಿಗ್‌ಬಾಸ್ ಮನೆಗೆ ಹೋದ ಮೇಲೆ ವಿನಯ್‌ಗೆ ಸಿಕ್ಕ ಬಿರುದು. ಮೊದಮೊದಲು ಅದನ್ನು ಪಾಸಿಟಿವ್ ಆಗಿಯೇ ಉಳಿದ ಸ್ಪರ್ಧಿಗಳು ಬಳಸಿಕೊಂಡರು. ವಿನಯ್ ಕೂಡ ಆನೆ ಪದವನ್ನು ಹೆಮ್ಮೆಯಿಂದ ಹೆಗಲ ಮೇಲೆ ಹೊತ್ತುಕೊಂಡರು. ಆದರೆ ದಿನ ಕಳೆದಂತೆ ಸ್ಪರ್ಧಿಗಳು ಆನೆಯನ್ನೇ ಟಾರ್ಗೆಟ್ ಮಾಡಿದರು. ಆ ಪದದಿಂದಲೇ ವಿನಯ್‌ರನ್ನು ಹಣಿಯಲು ಸಜ್ಜಾದರು. ಅದ್ಯಾಕೆ ಹಾಗಾಯಿತು? ಏನಾಯಿತು ? ಅದರಿಂದ ಒಳ್ಳೆಯದಾಯಿತಾ?

vinay gowda 3

ಇದೆಲ್ಲದರ ನಡುವೆ ವಿನಯ್ ಅದೊಂದು ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಇವರನ್ನೇನೊ ಆನೆ ಎಂದು ಕರೆದು ಬಿಟ್ಟರು. ಇದನ್ನು ಜೀವನದ ಕೊನೆವರೆಗೂ ಉಳಿಸಿಕೊಳ್ಳುತ್ತೇನೆ ಎಂದೂ ವಿನಯ್ ಹೇಳಿದ್ದಾರೆ. ಆದರೆ ಈ ಆನೆಗೆ ನಿಜವಾದ ಮಾವುತ ಯಾರು? ಯಾರಿಂದ ವಿನಯ್ ಕೊನೇವರೆಗೂ ಆಟದಲ್ಲಿ ಉಳಿದರು, ಬೆಳೆದರು, ತಪ್ಪಿದ್ದಲ್ಲಿ ತಿದ್ದಿಕೊಂಡರು? ಅದಕ್ಕೆ ಉತ್ತರ ಒಂದೇ. ಅದೇ ಕಿಚ್ಚ ಸುದೀಪ್. ಆ ಮಹಾ ಮಾವುತ ಇದ್ದದ್ದಕ್ಕಾಗಿಯೇ ನಾನು ಕರುನಾಡನ್ನು ಗೆದ್ದಿದ್ದೇನೆ ಎನ್ನುತ್ತಾರೆ ವಿನಯ್.

Vinay Gowda 3

ಈ ಎಲ್ಲ ಕಿತ್ತಾಟ, ಜಗಳಾಟದ ನಡುವೆ ಅದೊಂದು ನೋವು ಇವರನ್ನು ಕಾಡುತ್ತಿದೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೂ ಜೀವವನ್ನು ಹಿಂಡುತ್ತಿದೆ. ಅದೇನು ಗೊತ್ತೆ? ಬಿಗ್‌ ಬಾಸ್‌ನ ಟಾಪ್ 2 ಸ್ಥಾನದಲ್ಲಿ ನಾನೂ ಒಬ್ಬನಾಗಿರಬೇಕಿತ್ತು. ಅದೊಂದು ಕನಸು ಕಂಡಿದ್ದೆ. ಅದ್ಯಾಕೆ ಹಾಗಾಯಿತೊ ಗೊತ್ತಾಗಲಿಲ್ಲ. ಇದು ವಿನಯ್‌ರನ್ನು ಕಾಡುತ್ತಿರುವ ನೋವು. ಕೊನೇ ಇಬ್ಬರು ಸ್ಪರ್ಧಿಗಳಲ್ಲಿ ವಿನಯ್ ಖಂಡಿತ ಇರುತ್ತಾರೆ ಎಂದೇ ಜನರು ತಿಳಿದಿದ್ದರು. ಆದರೆ ಹಾಗಾಗಲಿಲ್ಲ.

 

ಇದು ವಿನಯ್ ಬಿಗ್‌ ಬಾಸ್ ಸೀಸನ್ 10ರ ಪಯಣ. ಇಲ್ಲಿಗೆ ಇದು ಮುಗಿದಿದೆ. ಆದರೆ ಈ ಅರಮನೆಯಿಂದ ವಿನಯ್ ಅನೇಕ ಸಂಗತಿಗಳನ್ನು ಹೊತ್ತುಕೊಂಡು ಹೊರ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಕಿಚ್ಚನ ಜೊತೆ ಬೆಳ್ಳಿ ತೆರೆ ಮೇಲೆ ಮೆರವಣಿಗೆ ಹೊರಟರೂ ಅಚ್ಚರಿ ಇಲ್ಲ. ಅದೊಂದು ಕನಸು ಈಗಲೂ ಇವರನ್ನು ನಿದ್ದೆ ಮಾಡಲು ಬಿಡುತ್ತಿಲ್ಲ. ಏನಾದರಾಗಲಿ ಬಿಗ್ ಆನೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಹೊಸ ಸಾಹಸ ಮಾಡಲಿ. ಕರುನಾಡನ್ನು ಬೇರೊಂದು ರೀತಿ ಗೆದ್ದು ಬೀಗಲಿ.

TAGGED:Bigg Boss Kannadainterviewsudeepvinayಬಿಗ್ ಬಾಸ್ ಕನ್ನಡವಿನಯ್ಸಂದರ್ಶನಸುದೀಪ್
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Gill
Cricket

ತವರಿನಲ್ಲೇ ತಿಣುಕಾಡಿ ಗೆದ್ದ ಗುಜರಾತ್‌ – ಕೆಕೆಆರ್‌ಗೆ ಡಬಲ್‌ ಹ್ಯಾಟ್ರಿಕ್‌ ಸೋಲು

Public TV
By Public TV
2 hours ago
Drugs
Crime

38 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಎನ್‌ಸಿಬಿ

Public TV
By Public TV
2 hours ago
Leopard 1
Districts

ಮೈಸೂರು | ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮನೆ ಹೊಕ್ಕಿದ್ದ ಚಿರತೆ ಸೆರೆ

Public TV
By Public TV
3 hours ago
Mandya Youth Death
Districts

ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಯುವಕ ಸಾವು

Public TV
By Public TV
3 hours ago
Fruits
Bengaluru City

ಮಾವು, ಬಾಳೆಹಣ್ಣು, ಪಪ್ಪಾಯ ಹಣ್ಣಿಗೆ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆ – ಕ್ರಮ ಕೈಗೊಳ್ಳಲು FSSAI ಸೂಚನೆ

Public TV
By Public TV
3 hours ago
Electricity
Bengaluru City

ಗೃಹಬಳಕೆ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್ – ಯೂನಿಟ್‌ಗೆ 56 ಪೈಸೆ ಹೆಚ್ಚಳ

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?