– ಯಾದಗಿರಿಯಲ್ಲಿ ಮತಾಂತರ ದಂಧೆ
– ಕುಟುಂಬದ 10 ಜನರ ಮತಾಂತರಕ್ಕೆ ನಡೆದಿತ್ತು ಪ್ಲ್ಯಾನ್
ಯಾದಗಿರಿ: ನಾವು ಹಿಂದೂಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತೇವೆ ಏನು ಮಾಡ್ಕೊಳ್ತೀರಾ ಮಾಡ್ಕೊಳಿ ಎಂದು ಚರ್ಚ್ ಫಾದರ್ ಅವಾಜ್ ಹಾಕಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ಮತಾಂತರ ದಂಧೆ ಹೆಚ್ಚಾಗಿದೆ. ಆಸೆ ತೋರಿಸಿ ಬಡವರನ್ನು ಮತಾಂತರ ಮಾಡಲಾಗುತ್ತಿದೆ. ಇಂದು ಸಹ ಯಾದಗಿರಿ ಜಿಲ್ಲೆಯ ಸೈದಾಪುರ ಸಮೀಪದ ನೀಲಹಳ್ಳಿಯಲ್ಲಿನ ಮನೆಯಲ್ಲಿ ಸುಮಾರು 10 ಜನರ ಮತಾಂತರಕ್ಕೆ ಪ್ಲ್ಯಾನ್ ನಡೆದಿತ್ತು ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಕ್ರಿಯಾ ಸಮಾಧಿಯಲ್ಲಿ ಕುಪ್ಪೂರು ಶ್ರೀ ಲೀನ
ಮತಾಂತರದ ಕುರಿತು ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಪಾದ್ರಿಗಳು ದರ್ಪ ತೋರಿದ್ದಾರೆ. ಮಾದವಾರ ಗ್ರಾಮದ ಚರ್ಚ್ ಫಾದರ್ ಜೆಮ್ಸ್ ಎಂಬಾತ ದರ್ಪತೋರಿದ್ದು, ನಾವು ಮತಾಂತರ ಮಾಡೇ ಮಾಡುತ್ತೇವೆ ಏನು ಮಾಡಕೊಳ್ಳುತ್ತೀರಿ ಮಾಡಿಕೊಳ್ಳಿ ಎಂದು ಅವಾಜ್ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.