ಚಿತ್ರದುರ್ಗ: ಜಿಲ್ಲೆಯಲ್ಲಿರುವ ಕಿರು ಮೃಗಾಲಯದಲ್ಲಿ ಪಕ್ಷಿಗಳ ಮೊಟ್ಟೆ ಹಾಗು ಪಾರಿವಾಳ ನುಂಗುತಿದ್ದ ನಾಗರಹಾವನ್ನು ಉರಗತಜ್ಞರ ಸಹಾಯದಿಂದ ಸೆರೆ ಹಿಡಿದು ಸ್ಥಳಾಂತರ ಮಾಡಲಾಗಿದೆ.
ಉರಗತಜ್ಞ ಚೇತನ್ ಅವರ ಸಹಾಯದಿಂದ ನಾಗರವನ್ನು ಸೆರೆ ಹಿಡಿದಿದ್ದು, ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಆವರಣದಿಂದ ಸ್ಥಳಾಂತರಿಸಿ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಮೃಗಾಲಯದ ಆವರಣದಲ್ಲಿ ಈ ಹಾವು ಹಲವು ದಿನಗಳಿಂದ ನಿರ್ಭಯವಾಗಿ ಓಡಾಡುತ್ತಾ, ಪಕ್ಷಿ ಹಾಗೂ ಅವುಗಳ ಮೊಟ್ಟೆಯನ್ನು ನುಂಗಿತ್ತಿತ್ತು. ಇದರಿಂದ ಮೃಗಾಲಯದಲ್ಲಿರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿತ್ತು. ಅಲ್ಲದೇ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಹಾಗೂ ಸಿಬ್ಬಂದಿಗಳಲ್ಲಿ ಭಾರೀ ಆತಂಕ ಸೃಷ್ಟಿಸಿತ್ತು.
ಇದೀಗ ನಾಗರಹಾವುವನ್ನು ಸುರಕ್ಷಿತವಾಗಿ ಸೆರೆ ಹಿಡಿದಿರುವುದರಿಂದ ಮೃಗಾಲಯಕ್ಕೆ ನಾಗರಹಾವಿನಿಂದ ಮುಕ್ತಿ ಸಿಕ್ಕಂತಾಗಿದೆ. ಸೆರೆ ಹಿಡಿದ ಹಾವನ್ನು ಜೋಗಿಮಟ್ಟಿ ಅರಣ್ಯಕ್ಕೆ ಬಿಡಲಾಗಿತು. ಹೀಗಾಗಿ ನಾಗರಹಾವಿನ ಭಯದಿಂದ ಪ್ರವಾಸಿಗರಲ್ಲಿ ಏರ್ಪಟ್ಟಿದ್ದ ಆತಂಕ ಕೂಡ ಶಮನವಾಗಿದೆ.