ದಾವಣಗೆರೆ: ಬಗ್ಗಿ ಬಗ್ಗಿ ನಮಸ್ಕಾರ ಮಾಡೋರನ್ನು ದೂರ ಇಡಿ. ನಿಮ್ಮ ಸುತ್ತಮುತ್ತ ಗಮನ ಇರಲಿ, ಹುಷಾರಾಗಿರಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿವಿಮಾತೊಂದು ಹೇಳಿದ್ದಾರೆ.
ನಗರದಲ್ಲಿ ಇಂದು ನಡೆದ ಸಿದ್ದರಾಮೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಎಂದಿನಂತೆ ಹಾಸ್ಯ ಚಟಾಕಿ ಹಾರಿಸಿದರು. ಐದು ಲಕ್ಷ ಮೈಸೂರು ಪಾರ್ಕ್ ಮಾಡಿಸಿದ್ದಾರೆ. ನನಗೆ ಒಂದೂ ಸಿಗಲಿಲ್ಲ ಎಂದರು. ಅಲ್ಲದೆ ನಿಮ್ಮ ಮುಂದೆ ಬಗ್ಗಿ ಬಗ್ಗಿ ನಮಸ್ಕಾರ ಮಾಡೋರನ್ನು ದೂರ ಇಡಿ. ನಿಮ್ಮ ಸುತ್ತಮುತ್ತ ಗಮನ ಇರಲಿ, ಹುಷಾರಾಗಿರಿ. ನೀವು ನಮಗೆಲ್ಲರಿಗೂ ಸೇರಿದವರು. ನಿಮ್ಮ ಕುಟುಂಬಕ್ಕೆ ಮಾತ್ರ ನೀವು ಸೇರಿದವರಲ್ಲ ಎಂದು ಹೇಳಿದರು.
ಒಂದು ವೇಳೆ ಸಿದ್ದರಾಮಯ್ಯ ಅಧಿಕಾರದಲ್ಲಿ ಇರುತ್ತಿದ್ದರೆ ಹುಟ್ಟುಹಬ್ಬವನ್ನು ಬೇರೆ ಥರ ಮಾತಾಡಿಕೊಳ್ಳುತ್ತಿದ್ದರು. ಅಧಿಕಾರದಲ್ಲಿ ಇದ್ದರೆ ಹೇಗೆ ಏರ್ಪಾಡು ಮಾಡುತ್ತಿದ್ದರು ಅಂತ ಮಾತಾಡ್ಕೊಳ್ತಿದ್ರು. ಅಧಿಕಾರದಲ್ಲಿ ಇಲ್ಲದಿದ್ರೂ ಜನ ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ಬಂದಿದ್ದಾರೆ. ಈ ಕಾರ್ಯಕ್ರಮದ ಮೂಲಕ ನಮ್ಮ ಮೂಲ ಉದ್ದೇಶ ಈಡೇರಿದೆ ಎಂದು ತಿಳಿಸಿದರು. ಇದನ್ನೂ ಓದಿ: ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ರಾಹುಲ್ ಗಾಂಧಿ ಹೇಳಿದ್ದಾರೆ: ಮುರುಘಾ ಶ್ರೀ
ಮುಂದೆ ಕಾಂಗ್ರೆಸ್ ಗೆ ಅಧಿಕಾರ ಸಿಕ್ಕಿದರೆ ಶಿಕ್ಷಣ, ಆರೋಗ್ಯವನ್ನು ಖಾಸಗಿಯವರ ಕಪಿಮುಷ್ಠಿಯಿಂದ ಬಿಡಿಸುವ ಕೆಲಸ ಮಾಡಬೇಕು. ಈ ಮೂಲಕ ಸಾಮಾನ್ಯ ಜನರಿಗೆ ನೆರವಾಗುತ್ತೆ. ಈ ಕಾರ್ಯಕ್ರಮ ಯಾರನ್ನೂ ವೈಭವೀಕರಿಸಲು ಮಾಡಿಲ್ಲ. ಹೆಪ್ಪುಗಟ್ಟಿದ ನೋವಲ್ಲಿ ಜನರ ನೆಪದಲ್ಲಿ ಈ ಕಾರ್ಯಕ್ರಮ ಮಾಡಿದ್ದೀವಿ ಎಂದರು. ಇದನ್ನೂ ಓದಿ: ರಾಹುಲ್ ಗಾಂಧಿಗೆ ವಿಭೂತಿ ಹಚ್ಚಿ ಮುರುಘಾಶ್ರೀಗಳಿಂದ ಲಿಂಗಧಾರಣೆ