ಮೈಸೂರು: ಸಿದ್ದರಾಮಯ್ಯ – ಜಿಟಿಡಿ ನಡುವಿನ ಲವ್ ನಿಂದ ನಮಗೆ ಯಾವ ಎಫೆಕ್ಟ್ ಆಗಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
- Advertisement 2
ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಜಿಟಿಡಿ ನಡುವಿನ ಲವ್ ನಿಂದ ನಮಗೆ ಯಾವ ಎಫೆಕ್ಟ್ ಆಗಲ್ಲ. ಕಾರಣ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತ ನಂತರ ಜಿಟಿಡಿ ಮೇಲೆ ದ್ವೇಷ ಕುದಿಯುತ್ತಿದ್ದಾರೆ. ಈಗ ಜಿಟಿಡಿ ಹೊಸದಾಗಿ ಸಿದ್ದರಾಮಯ್ಯ ಜೊತೆ ಲವ್ ಆರಂಭಿಸಿದ್ದಾರೆ. ಈ ಲವ್ ಕುದುರಿಸಲು, ಸಿದ್ದರಾಮಯ್ಯ ಅವರ ದ್ವೇಷ ಕಡಿಮೆ ಮಾಡಿಸಲು ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಅರ್ಚನೆ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ ಮೃತ ರೈತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ : ಅಖಿಲೇಶ್ ಯಾದವ್
- Advertisement 3
- Advertisement 4
ಸಿದ್ದರಾಮಯ್ಯ ತಮ್ಮ ಲೈಫ್ನಲ್ಲಿ ಯಾವತ್ತಿಗೂ ಕೂಲ್ ಆದವರೇ ಅಲ್ಲ. ಅವರದ್ದು ಯಾವತ್ತಿದ್ದರೂ ದ್ವೇಷ ದ್ವೇಷವೇ, ಜಿಟಿಡಿ ಮೇಲೆ ಅವರಿಗೆ ಬಹಳಷ್ಟು ದ್ವೇಷವಿದೆ. ಈ ದ್ವೇಷ ಕಡಿಮೆ ಆಗುವುದೇ ಇಲ್ಲ. ಅಲ್ಲದೇ ಒಂದೂವರೆ ವರ್ಷದ ನಂತರದ ಚುನಾವಣೆಗೆ ಈಗಲೇ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಜಿಟಿಡಿ ಸಂಕಲ್ಪ ಮಾಡಿಸಿದ್ದಾರೆ. ಒಂದೂವರೆ ವರ್ಷದ ನಂತರ ಇನ್ನೂ ಯಾರಿಗೆ ಸಂಕಲ್ಪ ಮಾಡುತ್ತಾರೋ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ರೂಪಾಂತರಿಯಿಂದ ಜಾಗತಿಕ ಅಪಾಯ ಹೆಚ್ಚು-WHO
ಇದೇ ವೇಳೆ ವಿಧಾನ ಪರಿಷ್ ಚುನಾವಣೆಯ ಮೈಸೂರಿನ ಜೆಡಿಎಸ್ ಅಭ್ಯರ್ಥಿ ಜನರ ಕಿಡ್ನಿ ಕದ್ದು ಮಾರಿದ್ದಾರೆ. ಇವರಿಂದ ನನ್ನ ಕಿಡ್ನಿಯನ್ನು ಜೋಪಾನವಾಗಿ ಇಟ್ಟು ಕೊಳ್ಳಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.