ನವದೆಹಲಿ: ವಿಶ್ವಕಪ್ 2023 ಟೂರ್ನಿಯಲ್ಲಿ (World Cup 2023) ಜವಾಬ್ದಾರಿಯುತ ಕ್ಯಾಪ್ಟನ್ಶಿಪ್ ಹಾಗೂ ಉತ್ತಮ ಪ್ರದರ್ಶನದೊಂದಿಗೆ ರೋಹಿತ್ ಶರ್ಮಾ (Rohit Sharma) ಸುದ್ದಿಯಲ್ಲಿದ್ದಾರೆ. ಯಶಸ್ಸಿನ ಓಟದೊಂದಿಗೆ ಭಾರತ ತಂಡವನ್ನು ಮುನ್ನಡೆಸುತ್ತಿರುವ ಇದೇ ಹಿಟ್ಮ್ಯಾನ್ ಬಾಲ್ಯ ಜೀವನ ಅಷ್ಟೇನು ಸುಖಕರವಾಗಿರಲಿಲ್ಲ. ಕಷ್ಟ ಜೀವನದ ಮೆಟ್ಟಿಲುಗಳನ್ನು ಏರಿ ಈಗ ಇಡೀ ಜಗತ್ತೇ ತನ್ನತ್ತ ನೋಡುವಂತೆ ಮಾಡಿದ್ದಾರೆ. ಅವರ ಬಾಲ್ಯ ಹೇಗಿತ್ತು ಎಂಬುದಕ್ಕೆ ಉದಾಹರಣೆಯೊಂದಿದೆ.
ಇಲ್ಲಿಯವರೆಗೆ ಅನುಭವಿಸಿದ ಸುಪ್ರಸಿದ್ಧ ವೃತ್ತಿಜೀವನವು ಒಂದು ರೋಚಕ ಕಥೆಯಂತೆ ತೋರುತ್ತದೆಯಾದರೂ, ರೋಹಿತ್ ಶರ್ಮಾ ಸ್ಟಾರ್ಡಮ್ನ ಪ್ರಯಾಣವು 1999 ರಲ್ಲಿ ಅವರ ಜೀವನವನ್ನು ಬದಲಿಸಿದ ಸಮಸ್ಯೆಯೊಂದಿಗೆ ಪ್ರಾರಂಭವಾಗಿತ್ತು. ಅದೇನು ಗೊತ್ತಾ? ಇದನ್ನೂ ಓದಿ: ವಿಶ್ವಕಪ್ ಪಂದ್ಯಕ್ಕೂ ಮುನ್ನ ರಂಗೇರಲಿದೆ ಮೋದಿ ಕ್ರೀಡಾಂಗಣ – ಕಾರ್ಯಕ್ರಮಗಳ ಪಟ್ಟಿ ರಿಲೀಸ್
- Advertisement 2
- Advertisement 3
ರೋಹಿತ್ ತಮ್ಮ ಶಾಲಾ ದಿನಗಳಲ್ಲಿ ಆಫ್ ಸ್ಪಿನ್ನರ್ ಆಗಿದ್ದರು. ಪಂದ್ಯಾವಳಿಯ ಸಮಯದಲ್ಲಿ ಶರ್ಮಾ ಪ್ರದರ್ಶನವನ್ನು ಮುಂಬೈ ಕ್ರಿಕೆಟಿಗ ಸಿದ್ಧೇಶ್ ಲಾಡ್ ಅವರ ತಂದೆ ಕೋಚ್ ದಿನೇಶ್ ಲಾಡ್ ಗಮನಿಸಿದ್ದರು. ರೋಹಿತ್ ಪ್ರದರ್ಶನದಿಂದ ಅವರು ಪ್ರಭಾವಿತರಾಗಿದ್ದರು. ಆಟದಲ್ಲಿ ರೋಹಿತ್ ಭವಿಷ್ಯದ ಬಗ್ಗೆ ಪೋಷಕರೊಂದಿಗೆ ಮಾತನಾಡಿದ್ದರು.
- Advertisement 4
ರೋಹಿತ್ ಮುಂಬೈನ ಬೊರಿವಲಿ ಪ್ರದೇಶದಲ್ಲಿ ತನ್ನ ಚಿಕ್ಕಪ್ಪ ಮತ್ತು ಅಜ್ಜಿಯೊಂದಿಗೆ ವಾಸವಾಗಿದ್ದರು. ರೋಹಿತ್ ಚಿಕ್ಕಪ್ಪ, ಲಾಡ್ ಅವರನ್ನು ಭೇಟಿ ಮಾಡಿದಾಗ, ರೋಹಿತ್ನನ್ನು ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿಸಬೇಕೆಂದು ಕೋಚ್ ಲಾಡ್ ಸಲಹೆ ನೀಡಿದ್ದರು. ಇದನ್ನೂ ಓದಿ: ಆಸೀಸ್ ಫಾರ್ಮ್ ಬಗ್ಗೆ ನೋ ಟೆನ್ಷನ್, ನಮ್ಮ ಶಕ್ತಿ ಏನೆಂಬುದು ನಾಳೆ ಗೊತ್ತಾಗುತ್ತೆ: ರೋಹಿತ್ ಶರ್ಮಾ
ರೋಹಿತ್ ಆಗ ಓದುತ್ತಿದ್ದ ಶಾಲೆಗೆ ಕೇವಲ 30 ರೂ. ಶುಲ್ಕವಿತ್ತು. ಆದರೆ ನನ್ನ ಮಾತು ಕೇಳಿದ ರೋಹಿತ್ ಚಿಕ್ಕಪ್ಪ, ಸ್ವಾಮಿ ವಿವೇಕಾನಂದ ಶಾಲೆಗೆ ಸೇರಿಸಲು 275 ರೂ. ಶುಲ್ಕ ಭರವಿಸುವಷ್ಟು ನಾವು ಶಕ್ತರಲ್ಲ ಎಂದು ಹೇಳಿಕೊಂಡಿದ್ದರು. ಆಗ ನಾನೇ ಮುತುವರ್ಜಿ ವಹಿಸಿ ಫ್ರೀಶಿಪ್ (ಆರ್ಥಿಕವಾಗಿ ದುರ್ಬಲವಾಗಿರುವ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು) ನೀಡುವಂತೆ ಶಾಲಾ ನಿರ್ದೇಶಕರನ್ನು ಕೇಳಿಕೊಂಡೆ. ಈ ವಿದ್ಯಾರ್ಥಿಯನ್ನು ಬೆಂಬಲಿಸಿ ನೀವೇಕೆ ಫ್ರೀಶಿಪ್ಗಾಗಿ ಮನವಿ ಮಾಡುತ್ತಿದ್ದೀರಿ ಎಂದು ನಿರ್ದೇಶಕರು ನನ್ನನ್ನು ಪ್ರಶ್ನಿಸಿದ್ದರು. ಆಗ, ರೋಹಿತ್ನ ಉತ್ತಮ ಕ್ರಿಕೆಟ್ ಪ್ರದರ್ಶನ ಕುರಿತು ತಿಳಿಸಿದ್ದೆ ಎಂದು ಲಾಡ್ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ.
ದಿನೇಶ್ ಲಾಡ್ ಅವರ ಕೋಚಿಂಗ್ ಅಡಿಯಲ್ಲಿ ರೋಹಿತ್ ಶರ್ಮಾ ಪ್ರವರ್ಧಮಾನಕ್ಕೆ ಬಂದು, ಮುಂದೆ ಅವರ ವೃತ್ತಿಜೀವನ ಮಹತ್ವದ ತಿರುವು ಪಡೆಯಲು ಸಾಧ್ಯವಾಯಿತು. ಬಾಲ್ಯದಲ್ಲಿ ಕಷ್ಟದ ದಿನಗಳನ್ನು ಅನುಭವಿಸಿದ್ದ ರೋಹಿತ್ ಶರ್ಮಾ ಈಗ ಟೀಂ ಇಂಡಿಯಾದ ನಾಯಕನಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾನುವಾರ ಭಾರತ ತಂಡ ಸೆಣಸಲಿದೆ. ಇದನ್ನೂ ಓದಿ: 1.30 ಲಕ್ಷ ಅಭಿಮಾನಿಗಳನ್ನ ದಿಗ್ಭ್ರಮೆಗೊಳಿಸುತ್ತೇವೆ – ಟೀಂ ಇಂಡಿಯಾ ಸೋಲಿಸುವ ಎಚ್ಚರಿಕೆ ನೀಡಿದ ಪ್ಯಾಟ್ ಕಮ್ಮಿನ್ಸ್