ರಾಮನಗರ: ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನಗಲಿ ವಾರವೇ ಕಳೆದಿದ್ದು ಅಭಿಮಾನಿಗಳು ಅಂಬಿಯ ನೆನಪಿನಲ್ಲಿ ಪುಣ್ಯಾರಾಧನೆ (ತಿಥಿ) ಕಾರ್ಯವನ್ನ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಮಳೂರಿನಲ್ಲಿ ನಡೆಸಿದ್ದಾರೆ.
ಅಂಬರೀಶ್ ಅಭಿಮಾನಿಗಳು ಹಾಗೂ ಮಳೂರು ಪಟ್ಟಣ ಗ್ರಾಮದ ನಿವಾಸಿಗಳು ಸೇರಿ ಅಂಬರೀಶ್ ಪುಣ್ಯಾರಾಧನೆ ಕಾರ್ಯ ನೆರವೇರಿಸಿದ್ದಾರೆ. ಈ ವೇಳೆ ಅಂಬರೀಶ್ ಫೋಟೋವನ್ನಟ್ಟು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಪುಣ್ಯಾರಾಧನೆ ವೇಳೆ ನಾಟಿ ಕೋಳಿ ಸಾಂಬಾರ್, ರಾಗಿ ಮುದ್ದೆ, ಮಟನ್, ಚಿಕನ್ ಚಾಪ್ಸ್ ಅಡಿಗೆಯನ್ನು ಮಾಡಿ ಗ್ರಾಮಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಊಟ ಬಡಿಸಿದರು.
ತಿಥಿ ಕಾರ್ಯದಂತೆ ಅಂಬಿ ಫೋಟೋ ಮುಂದೆ ಊಟವನ್ನ ಬಡಿಸಿದ್ದಾರೆ. ಅಂಬರೀಶ್ ನಮ್ಮ ಜೊತೆಯಿಲ್ಲ ಆದರೆ ಅವರನ್ನ ಎಂದಿಗೂ ಮರೆಯಲಾಗಲ್ಲ ಹಾಗಾಗಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಗ್ರಾಮಸ್ಥರು ಪ್ರಾರ್ಥಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv