ಹುಬ್ಬಳ್ಳಿ: ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನವಾಗಿದೆ. ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಸಹೋದರಿಯರು ತನ್ನ ಸಹೋದರರಿಗೆ ರಾಖಿ ಕಟ್ಟಿ ಹಬ್ಬ ಆಚರಣೆ ಮಾಡುತ್ತಾರೆ. ಆದರೆ ಹುಬ್ಬಳ್ಳಿಯಲ್ಲಿ ರಕ್ಷಾ ಬಂಧನದಂದು ಗಿಡ ನೆಡುವ ಮೂಲಕವಾಗಿ ವಿನೂತನವಾಗಿ ಹಬ್ಬ ಆಚರಣೆ ಮಾಡಲಾಗಿದೆ.
ಹುಬ್ಬಳ್ಳಿಯ ಅಮರಗೋಳದ ಕುಬೇರ ಗೌಡ್ರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ಷಾ ಬಂಧನ ದಿನದಂದು ನೂರಾರು ಗಿಡಗಳನ್ನ ನೆಟ್ಟು ರಕ್ಷಾ ಬಂಧನ ಜೊತೆಗೆ ವೃಕ್ಷ ಬಂಧನ ಆಚರಣೆ ಮಾಡಿದ್ದಾರೆ. ಇದನ್ನೂ ಓದಿ: ವಿಶೇಷವಾದ ಬಂಧ, ಪ್ರೀತಿಯ ಶುದ್ಧ ರೂಪ: ರಾಧಿಕಾ ಪಂಡಿತ್
ಅಮರಗೋಳದ ನೂರಕ್ಕೂ ಅಧಿಕ ಮನೆಗಳಿಗೆ ಟ್ರಸ್ಟ್ ವತಿಯಿಂದ ಸಸಿಗಳನ್ನ ವಿತರಿಸಲಾಗಿದೆ. ಸಹೋದರರಿಗೆ ರಾಖಿ ಕಟ್ಟಿದ ಟ್ರಸ್ಟ್ನ ಅಧ್ಯಕ್ಷೆ ರೇಖಾ ಹೊಸೂರು ಹಾಗೂ ಸದಸ್ಯರು ವಿನೂತನವಾಗಿ ಹಬ್ಬ ಆಚರಣೆ ಮಾಡಿದ್ದು, ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ರೇಖಾ ಹೊಸೂರ್, ಮಾಲಾ ಗಡದ, ರವಿ ದಾಸನೂರು, ಷಣ್ಮುಖ ಬೆಟಿಗೇರಿ, ಫೈರೋಜ್ ಮಾಂತೇಶ್, ಮಂಜು, ಉಮೇಶ್ ದೊಡ್ಮನಿ, ಗಿರೀಶ್ ಪಾಟೀಲ್ ಮುಂತಾದವರು ಭಾಗವಹಿಸಿದ್ದರು