ರಾಯಚೂರು: ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಬರಕ್ಕೆ ಹೆದರಿ ಬಿಸಿಲನಾಡು ರಾಯಚೂರಿನ ಕೆಲವು ಗ್ರಾಮಗಳ ಪಂಚಾಯ್ತಿ ಸದ್ಯಸರು ಸೇರಿ ಗ್ರಾಮಸ್ಥರು ಗುಳೆ ಹೋಗುತ್ತಿದ್ದು, ಚುನಾವಣಾ ಮತದಾನದ ಮೇಲೆ ಈ ಬಾರಿಯ ಭೀಕರ ಬರಗಾಲ ಪರಿಣಾಮ ಬೀರುವ ಸಾಧ್ಯತೆಯಿದೆ.
- Advertisement 2
ಬರಕ್ಕೆ ಹೆದರಿ ಲಿಂಗಸುಗೂರು ತಾಲೂಕಿನ ಮಟ್ಟೂರು, ನಾಗಲಾಪೂರ, ಉಪ್ಪರನಂದಿಹಾಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೆಲಸವಿಲ್ಲದೆ ಸುಮಾರು 10 ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರೇ ಗುಳೆ ಹೋಗಿದ್ದಾರೆ. ನೀರು, ಮೇವಿನ ಸಮಸ್ಯೆಯೊಂದಿಗೆ ದುಡಿಯಲು ಕೆಲಸವಿಲ್ಲದೆ ಈಗಾಗಲೇ ಈ ಭಾಗದ ಸಾವಿರಾರು ಜನ ಬೆಂಗಳೂರು, ಪೂನಾ, ಹೈದರಾಬಾದ್ ಸೇರಿ ವಿವಿಧೆಡೆ ಹೋಗಿದ್ದಾರೆ. ಆದ್ರೆ ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸಬೇಕಾದ ಗ್ರಾಮ ಪಂಚಾಯತಿ ಸದಸ್ಯರೇ ಗುಳೆ ಹೋಗಿರುವುದು ಬರಗಾಲದ ತೀವ್ರತೆಯನ್ನು ತೋರಿಸುತ್ತಿದೆ.
- Advertisement 3
- Advertisement 4
ಸದ್ಯ ಹಣ ಕೊಟ್ಟು ಕರೆದುಕೊಂಡು ಬಂದರೆ ಮಾತ್ರ ಗುಳೆ ಹೋದವರು ಮತದಾನ ಮಾಡಲು ಬರುತ್ತಾರೆ ಅಂತ ಗ್ರಾಮಸ್ಥರು ಹೇಳುತ್ತಿದ್ದಾರೆ. ರಾಯಚೂರು ತಾಲೂಕಿನ ಗೋನಾಳ, ಮರ್ಚಡ್ ಸೇರಿದಂತೆ ಜಿಲ್ಲೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಹಳ್ಳಿಗಳಿಂದ ಸಾವಿರಾರು ಜನ ಗುಳೆ ಹೋಗಿದ್ದಾರೆ. ಇದರ ಜೊತೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಜಿಲ್ಲೆಯ ಚಿಕ್ಕವಡ್ಲೂರು, ಹನುಮಾನದೊಡ್ಡಿ, ವಡ್ಲೂರು, ಅಸ್ಕಿಹಾಳ, ಚಿಕ್ಕ ಬೂದೂರು, ಪೋತ್ಗಲ್ ಗ್ರಾಮಸ್ಥರು ಮತದಾನ ಬಹಿಷ್ಕರಿಸುವುದಾಗಿ ಘೋಷಿಸಿದ್ದಾರೆ.