Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೋಟಿ ಕೋಟಿ ಲೂಟಿ-ಕಸ ಗುಡಿಸೋರ ಕೂಲಿ ದುಡ್ಡನ್ನು ಬಿಡ್ತಿಲ್ಲ ಭ್ರಷ್ಟರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಕೋಟಿ ಕೋಟಿ ಲೂಟಿ-ಕಸ ಗುಡಿಸೋರ ಕೂಲಿ ದುಡ್ಡನ್ನು ಬಿಡ್ತಿಲ್ಲ ಭ್ರಷ್ಟರು

Bengaluru City

ಕೋಟಿ ಕೋಟಿ ಲೂಟಿ-ಕಸ ಗುಡಿಸೋರ ಕೂಲಿ ದುಡ್ಡನ್ನು ಬಿಡ್ತಿಲ್ಲ ಭ್ರಷ್ಟರು

Public TV
Last updated: February 29, 2020 11:36 am
Public TV
Share
5 Min Read
Poura Karmika 6
SHARE

-ಕೊಳ್ಳೆ ಹೊಡೆಯೋರ ‘ಬೇಟೆ’ ಆಡಿದ ನಿಮ್ಮ ಪಬ್ಲಿಕ್ ಟಿವಿ

ಬೆಂಗಳೂರು: ಕೋಟಿ ಕೋಟಿ ದುಡ್ಡಿನ ದಂಧೆಯನ್ನ ನಿಮ್ಮ ಪಬ್ಲಿಕ್ ಟಿವಿ ಬೆನ್ನತ್ತಿದೆ. ಬಡವರ ಹಣವನ್ನು ನುಂಗುವವರನ್ನು ನಿಮ್ಮ ಪಬ್ಲಿಕ್ ಟಿವಿ ನೇರ ನೇರ ಎದುರಿಸಿದೆ. ಪೌರ ಕಾರ್ಮಿಕರ ಬಳಿ ಮಾಮೂಲಿ ವಸೂಲಿ ಮಾಡುವರರ ಕರಾಳ ಮುಖ ನಿಮ್ಮ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Poura Karmika 5

ಒಂದೊಮ್ಮೆ ಕಸದ ಸಮಸ್ಯೆಯಿಂದ ಬೆಂಗಳೂರು ಗಾರ್ಬೇಜ್ ಸಿಟಿ ಅನ್ನೋ ಕುಖ್ಯಾತಿಗೆ ಒಳಗಾಗಿತ್ತು. ಬಿಬಿಎಂಪಿಯ ಅದೇ ಕಸದಲ್ಲಿ ಕೋಟಿ ಕೋಟಿ ದುಡ್ಡು ಅಡಗಿದೆ ಅನ್ನೋದು ಎಲ್ಲರಿಗೂ ಗೊತ್ತಿರೋ ಸತ್ಯ. ಹೀಗಾಗಿ ಬಿಬಿಎಂಪಿಯ ತ್ಯಾಜ್ಯ ವಿಲೇವಾರಿ, ಪೌರ ಕಾರ್ಮಿಕರ ವಿಭಾಗಕ್ಕೆ ಅಧಿಕಾರಿಗಳು ಲಾಬಿ ಮಾಡಿಯೋ, ದುಡ್ಡು ಚೆಲ್ಲಿಯೋ ಸೇರಿಕೊಳ್ತಾರೆ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬರುತ್ತಿವೆ. ಇವರೆಲ್ಲಾ ಕಸವನ್ನು ಬಳಸಿಕೊಂಡು ಹೇಗೆ ದುಂಡಗಾಗ್ತಾರೆ, ಹೆಂಗೆಲ್ಲಾ ಲೂಟಿ ಮಾಡ್ತಾರೆ ಅನ್ನೋ ರಹಸ್ಯ ಬೇಧಿಸಲು ಮುಂದಾದ ನಿಮ್ಮ ಪಬ್ಲಿಕ್ ಟಿವಿಗೆ ಗೋಚರವಾದ ಸತ್ಯ ಇಲ್ಲಿದೆ.

Poura Karmika 2

ಬಿಬಿಎಂಪಿಯಲ್ಲಿ ಹೆಚ್ಚು ಕಡಿಮೆ 20 ಸಾವಿರ ಪೌರ ಕಾರ್ಮಿಕರಿದ್ದಾರೆ. ನಗರ ಸ್ವಚ್ಛ ಕೆಲಸ ಮಾಡುವ ಈ ಪೌರ ಕಾರ್ಮಿಕರ ದುಡ್ಡನ್ನು ಬಿಬಿಎಂಪಿ ಅಧಿಕಾರಿಗಳು ಬಿಡುತ್ತಿಲ್ಲ. ಪೌರಕಾರ್ಮಿಕರು ಸಂಬಳ ಖಾತೆಗೆ ಬಂದರೆ ನಡುಗುತ್ತಾರೆ. ಕಾರಣ ಮೇಸ್ತ್ರಿ, ಇನ್‍ಸ್ಪೆಕ್ಟರ್ ಅಂತ ಎಲ್ಲರಿಗೂ ಹಫ್ತಾ ಕೊಡಬೇಕು.

ಕಷ್ಟ ಪಟ್ಟು ಮಾಡಿದ ಕೆಲಸಕ್ಕೆ ಪ್ರತಿಯಾಗಿ ಪೌರಕಾರ್ಮಿಕರಿಗೆ ಸಿಗುವ ಸಂಬಳದಲ್ಲಿ ತಿಂಗಳ ಕಮಿಷನ್ ನೀಡಿ ಭ್ರಷ್ಟ ಅಧಿಕಾರಿಗಳನ್ನು ಪೋಷಿಸಬೇಕಾದ ಸ್ಥಿತಿ ಏರ್ಪಟ್ಟಿದೆ. ಅಧಿಕಾರಿಗಳು, ಪೌರಕಾರ್ಮಿಕರಿಂದ ಮಾಮೂಲಿ ವಸೂಲಿ ಮಾಡುವ ದೃಶ್ಯಗಳು ಪಬ್ಲಿಕ್ ಟಿವಿಯ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ದೃಶ್ಯ 1: ಬೆಂಗಳೂರಿನ ಕರಿಸಂದ್ರ ವಾರ್ಡ್

ಮೇಸ್ತ್ರಿ: ಎಲ್ಲಿ ಮಾಮೂಲಿ?
ಪೌರಕಾರ್ಮಿಕ: ಈಗ ಕಲೆಕ್ಟ್ ಮಾಡ್ತಾ ಇದೀನಿ
ಮೇಸ್ತ್ರಿ: ಇನ್ಯಾರು ಕೊಡಬೇಕು?
ಪೌರಕಾರ್ಮಿಕ: ಯಾರೂ ಕೊಡಲಿಲ್ಲ
ಮೇಸ್ತ್ರಿ: ಏನಮ್ಮ ನಿನ್ನದು?
ಪೌರಕಾರ್ಮಿಕ: ನನ್ನದು ಕೊಟ್ಡಿದ್ದೀನಿ?
ಮೇಸ್ತ್ರಿ: ಹೌದು, ಅದನ್ನೇ ಬರೆದುಕೊಳ್ತಾ ಇದೀನಿ
ಪೌರಕಾರ್ಮಿಕ: ಬರಿ, ನನ್ನದು ಬರೆದುಕೋ
ಮೇಸ್ತ್ರಿ: ಅದ್ ಬೇರೆ ಮಾಡಿ, ಯಾರು ಕೊಟ್ಟಿಲ್ಲ ಬೇಗ ಹೇಳಿ… ಬರ್ಕೋಬೇಕು
ಪೌರಕಾರ್ಮಿಕ: ನನ್ನದು 400 ರೂಪಾಯಿ
ಮೇಸ್ತ್ರಿ: ಇನ್ಯಾರು..?
ಪೌರಕಾರ್ಮಿಕ: ವೈಷ್ಣವಿ.. ಇನ್ಯಾರು..? ಇನ್ಯಾರು..? ಇನ್ಯಾರು..?
ಪೌರಕಾರ್ಮಿಕ: ಓ ಕಲೆಕ್ಷನ್ ಮಾಡಿ ಚೀಲದಲ್ಲಿ ಇಟ್ಟಿದ್ದೀಯಾ..? ಇರಲಿ ಇರಲಿ
ಪೌರಕಾರ್ಮಿಕ: ನನ್ನದು.. ಮಂಗಳ, ಯಶೋದಮ್ಮದು.. ಇನ್ನು ಈ ಯಮ್ಮನದು 300 ರೂಪಾಯಿ ಮಾತ್ರ
ಪೌರಕಾರ್ಮಿಕ: ಅಯ್ಯೋ ನಿನ್ನ ಹೆಸರು ಹೇಳಿಲ್ಲ.. ಎಲ್ಲರೂ ಹೆಸ್ರು ಹೇಳಿದ್ರಿ.. ಈಗ ನನ್ ಹೆಸರ ಯಾಕೆ ಹೇಳಿಲ್ಲ ಅಂತ ಕೇಳಿದೆ
ಮೇಸ್ತ್ರಿ: ಏಲ್ಲಿ ನಿನ್ನದು..?
ಪೌರಕಾರ್ಮಿಕ: ಮತ್ತೆ ಕೊಡ್ತೀನಿ ಖರ್ಚಾಯ್ತು

Poura Karmika 3

ಪೌರಕಾರ್ಮಿಕರಿಂದ ಸತ್ಯ ಬಾಯಿಬಿಡಿಸೋ ಸಲುವಾಗಿ ಸುಮ್ಮನೇ ಅವರನ್ನು ನೀವೇ ಅಪರಾಧಿಗಳು, ನೀವೇ ರೌಡಿಸಂ ಮಾಡ್ತಿದ್ದೀರಾ ಅಂತ ಪ್ರಶ್ನೆ ಮಾಡಲಾಯ್ತು. ಮೊದಲಿಗೆ ಏನಿಲ್ಲ, ದುಡ್ಡು ವಸೂಲಿ ಮಾಡಿಲ್ಲ ಎಂದವರು ನಿಧಾನಕ್ಕೆ ಅದು ಚೀಟಿ ಅಂತ ಕೆಲವರು ಬಾಯಿ ತೆರೆದರು. ಕಡೆಗೆ ಮೇಸ್ತ್ರಿ ಮೂಲಕ ಎಲ್ಲರಿಗೂ ಹಫ್ತಾ ಕೊಡುತ್ತಿದ್ದೇವೆ ಎಂದು ಪೌರ ಕಾರ್ಮಿಕರು ಒಪ್ಪಿಕೊಂಡರು.

Poura Karmika

ಯಾರಿಗೆ ಹೋಗುತ್ತೆ ಮಾಮೂಲಿ?: ಪೌರಕಾರ್ಮಿಕರ ಖಾತೆಗೆ ಸಂಬಳ ಬಂದ ಕೂಡ್ಲೇ ಭ್ರಷ್ಟ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ತಿಂಗಳ ಕಮೀಷನ್ ಕೊಡಲೇಬೇಕು. ಲೆಕ್ಕಾಧಿಕಾರಿ, ಇನ್‍ಸ್ಪೆಕ್ಟರ್, ಆಫೀಸರ್ಸ್, ಜನಪ್ರತಿನಿಧಿಗೆ ಹಫ್ತಾ ದುಡ್ಡು ಕೊಡಬೇಕು. ಕಡೆಗೆ ಸರ್ಕಾರಕ್ಕೆ ಹಫ್ತಾ ಕೊಡ್ಬೇಕು ಅಂತ ಕೆಲ ಕಾರ್ಮಿಕರು ಬೊಬ್ಬೆ ಹೊಡೆಯುತ್ತಾರೆ. ಬಿಬಿಎಂಪಿಯ ಸಂಪಂಗಿರಾಮನಗರದ ಕಿರಿಯ ಆರೋಗ್ಯ ಇನ್‍ಸ್ಪೆಕ್ಟರ್ ಶ್ರೀನಿವಾಸ್ ವಸೂಲಿ ದೌಲತ್ತು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೃಶ್ಯ 2: ಸಂಪಂಗಿರಾಮನಗರ

ಪೌರಕಾರ್ಮಿಕ: ನನಗೂ ನಿನಗೂ ಏನಾದ್ರೂ ದ್ವೇಷನಾ..?
ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಈಗ ತಾನೇ ರವಿಗೆ ಅಂತ ಕಾಸು ಕೇಳ್ತಾ ಇದ್ದೀಯಾ?
ಪೌರಕಾರ್ಮಿಕ: ನಿನ್ನೆನೇ 5 ಸಾವಿರ ಕೊಟ್ಟಿದ್ದಾರೆ
ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಈಗ ಬೇರೆ ಹೇಳ್ತಿಯಾ.. ಆಗ ಬೇರೆ ಹೇಳ್ತಿಯಾ..?
ಪೌರಕಾರ್ಮಿಕ: ಎಷ್ಟು ವಸೂಲಿ ಆಗುತ್ತೆ? ಇಷ್ಟೇ ಇಲ್ಲೇ ಇದೆ ನೋಡಿ, ಈಗ ಬೈದರೇ ಏನು ?
ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಏನಿದು ಕಡಿಮೆ ಆಗಿದೆ..?
ಪೌರಕಾರ್ಮಿಕ: ಎಷ್ಟು ಕಲೆಕ್ಷನ್ ಆಗಿದೆಯೋ ಅದು ಕೊಟ್ಡಿದ್ದೀನಿ. ಈಗ ಎಷ್ಟೇ ಸಾರಿ ಏಣಿಸಿದ್ರು ಅಷ್ಟೇ. ನಾ ಇಷ್ಟೇ ಹೇಳೊದು. ನಿನಗೆ ಕೊಡಬೇಕಾಗಿರೊದು ಕೊಡ್ತಾನೆ ಇದ್ದೀನಲ್ಲ.
ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ನನಗೆ ಅವಸರ ಬಂದಿದೆ ಕೇಳ್ತಾ ಇದೀನಿ ಕಣೊ.. ನೋಡು ಇವ್ರಿಗೆ 5, 10 ಅಂತ ಹಂಚಿ ಬಿಡು, ಯಾರಿಗೊ ದುಡ್ಡು ಕಟ್ಟಬೇಕು. 60 ಸಾವಿರ ಬೇಕು. ಬರ್ತಿನಿ .

BBMP
ಪೌರಕಾರ್ಮಿಕ: ಇಬ್ಬರದು ಸೇರಿ 17 ಜನರ ಕಲೆಕ್ಷನ್ ಇದು
ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ನಿನ್ನೆವರೆಗೂ 16 ಇತ್ತು.. ಈಗ ದೇವಿ ಕೊಟ್ಟಿರೊದು ಸೇರಿ 17 ಆಗಿದೆ ಅಂತ ಹೇಳಿದ್ದೀನಿ
ಪೌರಕಾರ್ಮಿಕ: ಮುಚ್ಚಿಡೊದು ಏನು ಇಲ್ಲ
ಜ್ಯೂ. ಹೆಲ್ತ್ ಇನ್‍ಸ್ಪೆಕ್ಟರ್: ಇನ್ನೂ 6 ಜನ ಕೊಟ್ಟಿಲ್ಲ.. ಕೊಡಬೇಕು. ಕೊಡಿಸೊದು ನನ್ ಜವಾಬ್ದಾರಿ.. ಕೊಟ್ಟಿಲ್ಲ ಅಂದ್ರೂ ನಾನೇ ಜವಾಬ್ದಾರಿ ತಗೊಂಡು ಕೊಡಿಸ್ತೀನಿ. ನೋಡು ಸರ್ಫರಾಜ್ ಖಾನ್ ಫೋನ್ ಮಾಡ್ತಾ ಅವನೇ. ದೇವರಾಣೆ, ಏನಿಲ್ಲ.. ನಮ್ಮದು ದುಡ್ಡು ಅಂತ ಹೇಳಬೇಕು ನೀನು

ಜ್ಯೂನಿಯರ್ ಹೆಲ್ತ್ ಇನ್‍ಸ್ಪೆಕ್ಟರ್‍ಗೆ ಘನತ್ಯಾಜ್ಯ ವಿಲೇವಾರಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಕಾಲ್ ಮಾಡ್ತಾರಂತೆ. ಪೌರಕಾರ್ಮಿಕರನ್ನ ಸುಳ್ಳು ಹೇಳಿಸಲು ಹೇಗೆಲ್ಲಾ ಸಿದ್ಧಪಡಿಸ್ತಾ ಇದ್ದಾನೆ ನೋಡಿ ಈ ಭ್ರಷ್ಟ ಹೆಲ್ತ್ ಇನ್‍ಸ್ಪೆಕ್ಟರ್. ಝಣ ಝಣ ಕಾಂಚಾಣ ಮುಂದೆ ಏನು ನಿಲ್ಲಲ್ಲ.

Poura Karmika 1

ಹಫ್ತಾ ತಿಂಗಳ ಲೆಕ್ಕ?
* ಪೌರಕಾರ್ಮಿಕರು ತಿಂಗಳಿಗೆ ತಲಾ 500 ರೂ. ಕೊಡ್ಲೇಬೇಕು
* ವಾರ್ಡ್ ವೊಂದರಲ್ಲಿ ಕನಿಷ್ಠ 80 ಪೌರಕಾರ್ಮಿಕರು ಇರುತ್ತಾರೆ
* ಪ್ರತಿ ವಾರ್ಡ್ ನಿಂದ ತಿಂಗಳಿಗೆ 40 ಸಾವಿರ ಕಲೆಕ್ಷನ್ ಫಿಕ್ಸ್
* 198 ವಾರ್ಡ್ ಗಳಿಂದ 80 ಲಕ್ಷ ರೂಪಾಯಿ ಹಫ್ತಾ ಕಲೆಕ್ಷನ್
* ಮೇಸ್ತ್ರಿ, ಹೆಲ್ತ್ ಇನ್‍ಸ್ಪೆಕ್ಟರ್, ಅಕೌಂಟೆಂಟ್, ರಾಜಕಾರಣಿಗಳು, ಸರ್ಕಾರಕ್ಕೆ ಲಂಚ?

ಇಷ್ಟೆಲ್ಲಾ ನಡೆಯೋದು ಮುಖ್ಯಮಂತ್ರಿಯ ಮೂಗಿನಡಿಯೇ ಎಂಬುವುದು ಅಚ್ಚರಿಯ ವಿಷಯ. ಬೆಂಗಳೂರು ನಗರ ಇಲಾಖೆ ಖಾತೆಯನ್ನು ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಅವರದ್ದೇ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನ ಕಂಡಾಗ ಹಲವು ಪ್ರಶ್ನೆಗಳು ತಾನಾಗಿಯೇ ಉದ್ಭವಿಸುತ್ತವೆ.

Poura Karmika 10

ಸಿಎಂಗೆ ಪ್ರಶ್ನೆ?
1. ಈ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ನಿಮಗೆ ಗೊತ್ತಿದೆಯಾ?
2. ನಿಮ್ಮ ಹೆಸ್ರು ಹೇಳಿ ಪೌರಕಾರ್ಮಿಕರಿಂದ ಪ್ರತಿ ತಿಂಗಳು ವಸೂಲಿ?
3. ನಿಮಗೂ ಕಸ ಗುಡಿಸೋರ ದುಡ್ಡು ತಲುಪುತ್ತಿದ್ದೇಯಾ?
4. ಮುಖ್ಯಮಂತ್ರಿಗಳಿಗೆ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತೀರಾ..?

ಪೌರಕಾರ್ಮಿಕರ ಸಂಬಳದ ಕಮಿಷನ್ ದಂಧೆ ತಪ್ಪಿಸಲು ಕಾಂಗ್ರೆಸ್ ಸರ್ಕಾರ ಖಾತೆಗೆ ಸಂಬಳ ಬರುವಂತೆ ಮಾಡಿತ್ತು. ಮಾಜಿ ಸಿಎಂ ಸಿದ್ದರಾಮಯ್ಯರ ನಡೆಗೆ ಪೌರಕಾರ್ಮಿಕರು ಸಹ ಖುಷಿಯಾಗಿದ್ದರು. ಈಗ ಖಾತೆಗೆ ಸಂಬಳ ಬರುತ್ತಿದ್ದರೂ, ಬೆದರಿಸಿ ದುಡ್ಡು ತೆಗೆದುಕೊಳ್ಳುವುದು ಮಾತ್ರ ನಿಂತಿಲ್ಲ. ನಗರದ ಸ್ವಚ್ಛತೆ ಹೊರೆ ಜತೆಗೆ ಭ್ರಷ್ಟರ ಭಾರವೂ ನಮ್ಮ ಪೌರಕಾರ್ಮಿಕರ ಮೇಲಿದೆ.

TAGGED:bbmpCivil WorkerscorruptionPublic TVPublic TV Sting Operationಪಬ್ಲಿಕ್ ಟಿವಿಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ಪೌರ ಕಾರ್ಮಿಕರುಬಿಬಿಎಂಪಿಭ್ರಷ್ಟಾಚಾರ
Share This Article
Facebook Whatsapp Whatsapp Telegram

Cinema news

Duniya Vijay 1
ಝಾಂಬಿ ಡ್ರಗ್ಸ್ ಕೇಸಲ್ಲಿ ನಟ ದುನಿಯಾ ವಿಜಯ್‌ಗೆ ಸಂಕಷ್ಟ – ಡಿಲೀಟ್ ವಿಡಿಯೋ ರಿಟ್ರೀವ್‌ಗಾಗಿ ಇನ್‌ಸ್ಟಾಗೆ ಪೊಲೀಸರ ಪತ್ರ
Bengaluru City Cinema Districts Karnataka Latest Sandalwood Top Stories
TVK Vijay
ಅಫಿಡವಿಟ್‌ನಲ್ಲಿ 105 ಕೋಟಿ ವ್ಯತ್ಯಾಸ – ನಾಮಪತ್ರ ತಿರಸ್ಕಾರ ಆತಂಕದಲ್ಲಿ ವಿಜಯ್‌
Cinema Court Latest Main Post National
Maharashtra Man Arrest
ಮಹಾರಾಷ್ಟ್ರ ‘ಲವ್ ಟ್ರ್ಯಾಪ್’ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ – ಮತ್ತೋರ್ವ ಆರೋಪಿ ಅಂದರ್
Cinema Latest National Top Stories
Atlee
ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ
Cinema Latest Top Stories

You Might Also Like

Mallikarjun Kharge Narendra Modi
Latest

ಮೋದಿ ಒಬ್ಬ ಭಯೋತ್ಪಾದಕ – ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ

Public TV
By Public TV
9 minutes ago
Operation Sindoor 1
Latest

ಪಹಲ್ಗಾಮ್ ದಾಳಿಯಾಗಿ ನಾಳೆಗೆ 1 ವರ್ಷ – `ಆಪರೇಷನ್ ಸಿಂಧೂರ’ ನೆನಪಿಸಿದ ಭಾರತೀಯ ಸೇನೆ

Public TV
By Public TV
43 minutes ago
Horse Rider
Latest

ಏನೇ ಪರಿಹಾರ ಕೊಟ್ರೂ ಮಗ ಮರಳಿ ಬರೋದಿಲ್ಲ – ಪಹಲ್ಗಾಮ್‌ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಕುದುರೆ ರೈಡರ್‌ ತಂದೆ ಕಣ್ಣೀರು

Public TV
By Public TV
49 minutes ago
Zameer Ahmed Khan
Bengaluru City

ನಾನು ಜೆಡಿಎಸ್‌ಗೆ ಹೋಗ್ತೀನಿ ಅನ್ನೋದು ಊಹಾಪೋಹ – ಜಮೀರ್ ಅಹ್ಮದ್ ಸ್ಪಷ್ಟನೆ

Public TV
By Public TV
2 hours ago
UP teen murder case
Crime

ಲವ್ವರ್‌ ಜೊತೆ ಬ್ರೇಕಪ್‌ ಮಾಡಿಕೊಳ್ಳಲ್ಲ ಎಂದಿದ್ದಕ್ಕೆ ತಂದೆಯಿಂದ ಮಗಳ ಬರ್ಬರ ಹತ್ಯೆ

Public TV
By Public TV
2 hours ago
SN Narayanaswamy Bangarpet MLA
Bengaluru City

ಸಂಪುಟ ಪುನರ್ ರಚನೆ ಮಾಡಲು ಹೈಕಮಾಂಡ್‌ಗೆ ಮನವಿ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
2 hours ago

Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?