ಕಾರವಾರ: ರಸ್ತೆ ಶಂಕುಸ್ಥಾಪನೆಗೆ ತೆರಳಿದ್ದ ಸ್ಪೀಕರ್ (Speaker) ವಿಶ್ವೇಶ್ವರ ಹೆಗಡೆ ಕಾಗೇರಿಯವರು (Vishweshwar Hegde Kageri) ಸಾರ್ವಜನಿಕರ ಆಕ್ರೋಶ ಎದುರಿಸಿದ ಘಟನೆ ಸಿದ್ದಾಪುರದ (Siddapura) ಬೇಡ್ಕಣಿಯಲ್ಲಿ (Bedkani) ನಡೆದಿದೆ.
ಮಂಜೂರಾದ 300 ಮೀಟರ್ ಸಿಮೆಂಟ್ ರಸ್ತೆ ಬದಲಿಗೆ ಸಂಪೂರ್ಣ ಟಾರ್ ರಸ್ತೆ ಮಾಡುವಂತೆ ಸಾರ್ವಜನಿಕರು ಕಾಗೇರಿಯವರ ಬಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮಾಡಿರುವ ರಸ್ತೆಯ ಗುಣಮಟ್ಟ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಾರ್ವಜನಿಕರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಶಂಕುಸ್ಥಾಪನೆ ನೆರವೇರಿಸದೆ ಕಾಗೇರಿ ಕಾರು ಹತ್ತಿ ತೆರಳಿದ್ದಾರೆ. ಇದನ್ನೂ ಓದಿ: ಕರ್ತವ್ಯನಿರತ ಬಸ್ ಕಂಡಕ್ಟರ್ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ