ಮಂಗಳಮುಖಿಗೆ ಫೋನ್ ಮಾಡಿ ಕಿರುಕುಳ – ಖಾಸಗಿ ಬಸ್ ಚಾಲಕನಿಗೆ ಬಿತ್ತು ಧರ್ಮದೇಟು

Public TV
1 Min Read
YGR TRANSGENDER

– ಮಂಗಳಮುಖಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕ

ಯಾದಗಿರಿ: ಮಂಗಳಮುಖಿಗೆ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ ಖಾಸಗಿ ಬಸ್ ಚಾಲಕನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಕೇಂದ್ರಿಯ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಓರ್ವ ಖಾಸಗಿ ಬಸ್ ಚಾಲಕ ಮಂಗಳಮುಖಿಯ ನಂಬರ್ ಪಡೆದುಕೊಂಡು ನಿತ್ಯ ಕರೆ ಮಾಡಿ ಅಸಭ್ಯವಾಗಿ ಮಾತನಾಡಿ, ಲೈಂಗಿಕ ಕಿರುಕುಳ ನೀಡುತ್ತಿದ್ದ. ಚಾಲಕನಿಗೆ ಮಂಗಳಮುಖಿ ಎಷ್ಟು ತಿಳಿಸಿ ಹೇಳಿದರು, ಚಾಲಕ ಮಾತ್ರ ತನ್ನ ಚಾಳಿ ಮುಂದುವರಿಸಿದ್ದ. ಇದನ್ನೂ ಓದಿ: ಅಪ್ಪನಂತೆ ನಾನೂ ವಾಯುಪಡೆ ಸೇರ್ತೀನಿ: ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ವಿಂಗ್ ಕಮಾಂಡರ್ ಪುತ್ರಿ ಆಸೆ

IPHONE 2

ಕಳೆದ ಎರಡು ತಿಂಗಳುಗಳಿಂದ ಇದೇ ಕಿರುಕುಳವನ್ನು ಚಾಲಕ ನೀಡ್ತಾಯಿದ್ದ. ಇದರಿಂದಾಗಿ ಕೋಪಗೊಂಡ ಮಂಗಳಮುಖಿ ಚಾಲಕನಿಗೆ ಫೋನ್ ಮಾಡಿ ಬಸ್ ನಿಲ್ದಾಣಕ್ಕೆ ಕರೆದು ತನ್ನ ಸ್ನೇಹಿತರಿಂದ ಬಿಸಿಬಿಸಿ ಕಜ್ಜಾಯ ನೀಡಿಸಿದ್ದಾಳೆ. ಧರ್ಮದೇಟು ತಿಂದ ಬಳಿಕ ಚಾಲಕ ಮಂಗಮುಖಿ ಕಾಲಿಗೆ ಬಿದ್ದ ಕ್ಷಮೆ ಕೇಳಿದ್ದಾನೆ. ಇದನ್ನೂ ಓದಿ: ಮಾಜಿ ಶಾಸಕ ಎನ್.ಎಚ್ ಕೋನರೆಡ್ಡಿ ನಾಳೆ ಕಾಂಗ್ರೆಸ್‍ಗೆ ಸೇರ್ಪಡೆ

Share This Article
Leave a Comment

Leave a Reply

Your email address will not be published. Required fields are marked *