ನಿರ್ದೇಶಕರ ದಿನದಂದು ಖ್ಯಾತ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ವಿಭಿನ್ನವಾಗಿ ವಿಶ್ ಮಾಡಿದ್ದಾರೆ. ಕನ್ನಡದ ಹೆಸರಾಂತ ನಿರ್ದೇಶಕ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ಅವರನ್ನು ವೀರಪ್ಪನ್ ಗೆ ಹೋಲಿಸಿದ್ದಾರೆ ಆರ್.ಜಿ.ವಿ. ಈ ಟ್ವಿಟ್ ಭಾರತೀಯ ಸಿನಿಮಾ ರಂಗದಲ್ಲೇ ಸಂಚಲನ ಮೂಡಿಸಿದೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ
ಕೆಜಿಎಫ್ ಸಿನಿಮಾ ಕಾರಣದಿಂದಾಗಿ ಪ್ರಶಾಂತ್ ನೀಲ್ ಅವರನ್ನು ಭಾರತೀಯ ಸಿನಿಮಾ ರಂಗವೇ ಹೊಗಳುತ್ತಿರುವಾಗ, ರಾಮ್ ಗೋಪಾಲ್ ವರ್ಮಾ ಬೇರೆ ರೀತಿಯಲ್ಲೇ ಪ್ರಶಾಂತ್ ನೀಲ್ ಅವರಿಗೆ ಬೆನ್ನು ತಟ್ಟಿದ್ದಾರೆ. “ಪ್ರಶಾಂತ್ ನೀಲ್ ಅವರಿಂದಾಗಿ ಭಾರತೀಯ ಸಿನಿಮಾ ರಂಗಕ್ಕೆ ನೂರಾರು ಕೋಟಿ ನಷ್ಟವಾಗಿದೆ’ ಎಂದು ಹಿಂದಿ ಸಿನಿಮಾ ರಂಗವನ್ನು ಕಾಲೆಳೆದಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ
ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಎಲ್ಲ ನಿರ್ದೇಶಕರ ತಲೆ ಕೆಡಿಸಿದ್ದಕ್ಕಾಗಿ ಪ್ರಶಾಂತ್ ನೀಲ್ ಅವರಿಗೆ ಅನ್ ಹ್ಯಾಪಿ ಡೈರೆಕ್ಟರ್ಸ್ ಡೇ ಎಂದು ವರ್ಮಾ ಟ್ವಿಟ್ ಮಾಡಿದ್ದಾರೆ. ಮುಂದುವರೆದು ಅವರು ನೀವು ಭಾರತೀಯ ಸಿನಿಮಾ ರಂಗದ ವೀರಪ್ಪನ್ ಎಂದು ಕಾಲೆಳೆದಿದ್ದಾರೆ. ಕ್ವಿಂಟಲ್ ಗಟ್ಟಲೆ ಪ್ರಶಾಂತ್ ನೀಲ್ ಅವರು ಹಣ ಮಾಡಿದ್ದಾರೆ. ಇದರಿಂದಾಗಿ ಬೇರೆ ಸಿನಿಮಾಗಳ ನಿರ್ಮಾಪಕರು ಟನ್ ಗಟ್ಟಲೆ ಹಣವನ್ನು ನಷ್ಟ ಮಾಡಿಕೊಳ್ಳಲಿದ್ದಾರೆ. ನಿಮ್ಮಂತೆಯೇ ಅವರೂ ಈಗ ಹಣ ಖರ್ಚು ಮಾಡಬೇಕಾಗಬಹುದು ಎಂದಿದ್ದಾರೆ ವರ್ಮಾ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ
ಪ್ರಶಾಂತ್ ನೀಲ್ ಕುರಿತಾಗಿ ವರ್ಮಾ ಸರಣಿಯಾಗಿ ಟ್ವಿಟ್ ಮಾಡಿದ್ದು, ಪ್ರಶಾಂತ್ ನೀಲ್ ಅಭಿಮಾನಿಗಳು ವರ್ಮಾ ಟ್ವಿಟ್ ಗೆ ಖುಷ್ ಆಗಿದ್ದಾರೆ. ಕನ್ನಡದ ಹೆಮ್ಮೆಯ ನಿರ್ದೇಶಕ ಎಂದು ಪ್ರಶಾಂತ್ ನೀಲ್ ಅವರನ್ನು ಹಾಡಿಹೊಗಳಿದ್ದಾರೆ. ಅಧಿಕೃತವಾಗಿ ಕೆಜಿಎಫ್ 2 ಸಿನಿಮಾ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದ್ದು, ಇನ್ನೂ ಶರವೇಗದಲ್ಲೇ ಬಾಕ್ಸ್ ಆಫೀಸಿನಲ್ಲಿ ಮುನ್ನುಗ್ಗುತ್ತಿದೆ.