ಪ್ರಾಣಿಗಳಿಗಾಗಿ ಬೆತ್ತಲಾಗುವಂತೆ ರಣವೀರ್ ಸಿಂಗ್ ಗೆ ಮನವಿ ಮಾಡಿದ ಪೇಟಾ

Public TV
1 Min Read
RANVEER SINGH

ಬಾಲಿವುಡ್ ನಟ ರಣವೀರ್ ಸಿಂಗ್ ಬೆತ್ತಲಾಗಿದ್ದೆ ಬಂತು ಆಫರ್ ಗಳ ಮೇಲೆ ಆಫರ್ ಬರುತ್ತಿವೆಯಂತೆ. ಮೊದ ಮೊದಲು ಈ ನಟ ಯಾಕೆ ಹೀಗೆ ಮಾಡಿದರು ಎನ್ನುವ ಮಾತುಗಳು ಕೇಳಿ ಬಂದವು. ಹಲವರು ರಣವೀರ್ ವಿರುದ್ಧ ಸಿಡಿದು ಬಿದ್ದರು, ಕೆಲವರು ಗೇಲಿ ಮಾಡಿದರು. ಇನ್ನೂ ಕೆಲವರು ತಾವೂ ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡು ಸಂಭ್ರಮಿಸಿದರು. ಇಷ್ಟೆಲ್ಲಗಳ ನಡುವೆ ರಣವೀರ್ ತಮ್ಮ ಪಾಡಿಗೆ ತಾವು ಸುಮ್ಮನಿದ್ದರು. ಈಗ ಅವರು ಮಾತನಾಡಬೇಕಾದ ಸಂದರ್ಭ ಬಂದಿದೆ.

ranveer singh deepika padukone 2

ಪ್ರಾಣಿಗಳ ದಯಾ ಸಂಘ ಪೇಟಾ ರಣವೀರ್ ಸಿಂಗ್ ಅವರಿಗೆ ಹೀಗೊಂದು ಮನವಿ ಮಾಡಿದ್ದು, ಪ್ರಾಣಿಗಳ ರಕ್ಷಣೆಗಾಗಿ ನೀವು ಬೆತ್ತಲಾಗಬೇಕೆಂದು ಮನವಿ ಮಾಡಿದೆ. ಈ ಬೆತ್ತಲೆ ಆಗುವುದಕ್ಕೂ ಪ್ರಾಣಿಗಳ ರಕ್ಷಣೆಗೂ ಏನು ಸಂಬಂಧ ಎನ್ನುವ ಪ್ರಶ್ನೆ ಮೂಡುವುದು ಸಹಜ. ಬೆತ್ತಲೆಯಾದರೆ, ಜನರ ಗಮನ ಸೆಳೆಯುವುದು ಸಲೀಸು. ಈ ಸಮಯದಲ್ಲಿ ಪ್ರಾಣಿಗಳ ರಕ್ಷಣೆ ಕುರಿತು ರಣವೀರ್ ಮಾತನಾಡಬಹುದು ಎನ್ನುವ ಉಪಾಯ ಇದರ ಹಿಂದಿದೆ. ಇದನ್ನೂ ಓದಿ:ಲಂಡನ್ ಸ್ಟುಡಿಯೋದಲ್ಲಿ ಕನ್ನಡ ಚಿತ್ರಕ್ಕೆ ಹಿನ್ನೆಲೆ ಸಂಗೀತ

RANVEER PIC 1

ಪೇಟಾ ಈ ಹಿಂದೆ ಇಂತಹ ಅನೇಕ ಪ್ರಯೋಗಗಳನ್ನು ಮಾಡಿದೆ. ಅದರಲ್ಲಿ ಗೆಲುವು ಕೂಡ ಕಂಡಿದೆ. ಪ್ರಾಣಿಗಳ ದಯೆ ವಿಷಯದಲ್ಲಿ ಅನೇಕ ಬಾರಿ ಸಿನಿಮಾಗಳ ವಿರುದ್ಧವೇ ಇದು ದಾವೆ ಹೂಡಿದೆ. ಆದರೂ, ಈ ಬಾರಿ ಸಿನಿಮಾ ಕಲಾವಿದರ ಮೂಲಕ ಪ್ರಾಣಿಗಳ ರಕ್ಷಣೆ ಕುರಿತಾಗಿ ಅಭಿಯಾನ ಮಾಡಲು ಹೊರಟಿದೆ. ಪೇಟಾ ಏನೋ ಇಂಥದ್ದೊಂದು ಕನಸು ಕಂಡಿದೆ. ಅದಕ್ಕೆ ರಣವೀರ್ ಸಿಂಗ್ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *