ಚಾಮರಾಜನಗರ: ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ (Palar Blast Case) ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕಾಡುಗಳ್ಳ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಜಾಮೀನಿನ ಮೇಲೆ ಮೈಸೂರು ಜೈಲಿನಿಂದ (Mysuru Jail) ಬಿಡುಗಡೆಯಾಗಿದ್ದಾನೆ.
- Advertisement 2
ಶ್ವಾಸಕೋಶದ ಕ್ಯಾನ್ಸರ್ (Lung Cancer) ನಿಂದ ಬಳಲುತ್ತಿದ್ದ ಜ್ಞಾನಪ್ರಕಾಶ್ಗೆ (Jnanaprakash) ಸುಪ್ರೀಂ ಕೋರ್ಟ್ (Supreme Court) ಮಾನವೀಯತೆ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿತ್ತು. ಇದನ್ನೂ ಓದಿ: ಹೊಸವರ್ಷದ ಮೊದಲ ವಾರದಲ್ಲೇ KPTCL ಎಇ, ಜೆಇ ನೇಮಕ ಪರೀಕ್ಷೆ ಫಲಿತಾಂಶ: ಸುನೀಲ್ ಕುಮಾರ್
- Advertisement 3
- Advertisement 4
ಪಾಲಾರ್ ಬಾಂಬ್ ಸ್ಫೋಟದಲ್ಲಿ (Palar Blast) ಬಾತ್ಮೀದಾರರು ಸೇರಿದಂತೆ ತಮಿಳುನಾಡು ಪೊಲೀಸ್ (Tamil Nadu Police) ಹಾಗೂ ಅರಣ್ಯ ಇಲಾಖೆಯ (Forest Department) 22 ಮಂದಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ವೀರಪ್ಪನ್ ಸಹಚರರಾದ ಸೈಮನ್, ಬಿಲವೇಂದ್ರ, ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್ಗೆ 1997 ರಲ್ಲಿ ಟಾಡಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ 2014 ರಲ್ಲಿ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ ತೀರ್ಪು ನೀಡಿತ್ತು. ಇದನ್ನೂ ಓದಿ: ಬುರ್ಕಾ ಧರಿಸಿ ಮಹದೇಶ್ವರನ ಭಕ್ತಿಗೀತೆ ಹಾಡಿದ ವಿದ್ಯಾರ್ಥಿನಿ – ಗೀತೆಗೆ ಶಿಳ್ಳೆ, ಚಪ್ಪಾಳೆ