ಬೆಂಗಳೂರು: ಆರ್ಸಿಬಿ (RCB) ಹಾಗೂ ಕೆಕೆಆರ್ (KKR) ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ವರುಣ್ ಚಕ್ರವರ್ತಿ (Varun Chakravarthy) ತಮ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು (Player of the Match) ಪತ್ನಿ ಹಾಗೂ ನವಜಾತ ಮಗನಿಗೆ ಅರ್ಪಿಸಿದ್ದಾರೆ.
ಪಂದ್ಯ ಮುಗಿದ ಬಳಿಕ ನಡೆದ ಬಳಿಕ ಹರ್ಷ ಬೋಗ್ಲೆ ಅವರನ್ನು ಮಾತನಾಡಿಸಿದರು. ಈ ವೇಳೆ ಐಪಿಎಲ್ ಮುಗಿದ ಬಳಿಕ ಮಗನನ್ನು ನೋಡುವುದಾಗಿ ಹೇಳಿ ಭಾವುಕರಾದರು. ಇದನ್ನೂ ಓದಿ: IPL 2023: ವಾಷಿಂಗ್ಟನ್ ಸುಂದರ್ ಔಟ್ – SRHಗೆ ಗಾಯದ ಮೇಲೆ ಬರೆ
ಬುಧವಾರದ ಪಂದ್ಯದಲ್ಲಿ 4 ಓವರ್ನಲ್ಲಿ 27 ರನ್ ನೀಡಿ 3 ವಿಕೆಟ್ಗಳನ್ನು ಪಡೆದ ವರುಣ್ ತಮ್ಮ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದರು. ತಮ್ಮ ಬೌಲಿಂಗ್ ಕೌಶಲ್ಯ ಪ್ರತಿ ಪಂದ್ಯದಿಂದ ಪಂದ್ಯಕ್ಕೆ ಸುಧಾರಣೆಯಾಗುತ್ತಿರುವುದಕ್ಕೆ ವರುಣ್ ಚಕ್ರವರ್ತಿ ಹೆಮ್ಮೆ ಪಟ್ಟಿದ್ದಾರೆ.
ವರುಣ್ ಅವರನ್ನು ಸಂದರ್ಶಿದ ಹರ್ಷ ಬೋಗ್ಲೆ ಕೊನೆಗೆ ಐಪಿಎಲ್ ನಡುವೆ ಚಕ್ರವರ್ತಿಯವರಿಗೆ ಮಗನನ್ನು ನೋಡಲು ಅವಕಾಶ ನೀಡುವಂತೆ ಕೆಕೆಆರ್ ಸಿಇಒ ವೆಂಕ್ ಮೈಸೂರ್ ಅವರಿಗೆ ಮನವಿ ಮಾಡಿಕೊಂಡರು.
ಕಳೆದ 4 ಪಂದ್ಯಗಳನ್ನು ಸೋತಿದ್ದ ಕೆಕೆಆರ್ ಈ ಐಪಿಎಲ್ ಆವೃತ್ತಿಯಲ್ಲಿ ಆರ್ಸಿಬಿ ವಿರುದ್ಧ ತಾನು ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವುದು ವಿಶೇಷ. ಈ ಜಯದೊಂದಿಗೆ ಅಂಕ ಪಟ್ಟಿಯಲ್ಲಿ ಕೆಕೆಆರ್ 7ನೇ ಸ್ಥಾನಕ್ಕೆ ಜಿಗಿದಿದೆ. ಇದನ್ನೂ ಓದಿ: ನಾವು ಸೋಲೋದಕ್ಕೆ ಅರ್ಹರು – ಕಿಂಗ್ ಕೊಹ್ಲಿ ಹತಾಶೆ