ಬಾಗಲಕೋಟೆ: ಭೀಕರ ಬರಗಾಲದಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, 24 ಗಂಟೆಯಲ್ಲಿ ಮೂರು ಮೊಸಳೆಗಳು ಸಾವನ್ನಪ್ಪಿವೆ.
ಜಿಲ್ಲೆಯ ಬೀಳಗಿ ತಾಲೂಕಿನ ಯಡಹಳ್ಳಿ ಹಾಗು ಗುಡಿದಿನ್ನಿ ಗ್ರಾಮದ ಕೃಷ್ಣಾ ನದಿಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು, ಜಲಚರಗಳು ಜೀವವನ್ನು ಕಳೆದುಕೊಳ್ಳುತ್ತಿವೆ. ಶುಕ್ರವಾರ ಸಂಜೆಯಿಂದ ಈವರೆಗೆ ಮೂರು ಮೊಸಳೆಗಳು ಸಾವನ್ನಪ್ಪಿವೆ. ಇದುವರೆಗೂ ನೀರಿಲ್ಲದೇ ಐದು ಮೊಸಳೆಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಮಣ್ಣಲ್ಲಿ ಸಿಲುಕಿದ್ದ 8 ಮೊಸಳೆಗಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳಕ್ಕೆ ಪಶು ವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ವೈದ್ಯಾಧಿಕಾರಿಗಳು ಸಾವನ್ನಪ್ಪಿದ ಮೊಸಳೆಗಳ ಶವ ಪರೀಕ್ಷೆ ನಡೆಸಿದ್ದಾರೆ. ಶವ ಪರೀಕ್ಷೆಯ ನಂತರ ಮೊಸಳೆಗಳ ಅಂತ್ಯಕ್ರಿಯೆ ಮಡಲಾಗಿದೆ.
ಇದನ್ನೂ ಓದಿ: ಬರಿದಾದ ಕೃಷ್ಣೆಯ ಒಡಲು: ಬಾಗಲಕೋಟೆಯಲ್ಲಿ ಆಹಾರವಿಲ್ಲದೇ ಮೃತಪಟ್ಟ ಮೊಸಳೆ