ತುಮಕೂರು: ಕ್ಷುಲ್ಲಕ ಕಾರಣಕ್ಕೆ ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ತಿಪಟೂರಿನ (Tiptur) ಕನ್ನುಘಟ್ಟ ಗ್ರಾಮದಲ್ಲಿ ನಡೆದಿದೆ.
ವಸಂತಕುಮಾರ್ (24) ಕೊಲೆಯಾದ ಯುವಕ. ಜಯಮ್ಮ ಎಂಬವರ ಮನೆಯ ಪಾತ್ರೆ ತೊಳೆಯುವ ನೀರು ಪಕ್ಕದ ಮನೆಯ ಬಸವಲಿಂಗಯ್ಯ ಅವರ ಮನೆಯತ್ತ ಹರಿಯುತ್ತಿತ್ತು. ಇದನ್ನು ಪ್ರಶ್ನಿಸಿ ಬಸವಲಿಂಗಯ್ಯ ಅವರ ಕುಟುಂಬ ಜಗಳ ಆರಂಭಿಸಿದೆ. ಇದನ್ನೂ ಓದಿ: ಮೂರು ತಿಂಗಳೊಳಗೆ 108 ಆರೋಗ್ಯ ಸೇವೆಗೆ ಹೊಸ ರೂಪ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬಳಿಕ ಜಯಮ್ಮನ ಪತಿ ಶಿವಬಸವಯ್ಯ, ಮಗ ವಸಂತಕುಮಾರ್ ಮೇಲೆ ಬಸವಲಿಂಗಯ್ಯ ಮತ್ತು ಅವರ ಮಗ ಕುಮಾರ್ ದೊಣ್ಣೆ ಮತ್ತು ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತೀವ್ರವಾಗಿ ಗಾಯಗೊಂಡ ವಸಂತ್ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಸಂಬಂಧ ನೊಣವಿನಕೆರೆ (Nonavinakere) ಪೊಲೀಸ್ ಠಾಣೆಯಲ್ಲಿ ಕುಮಾರ್ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಅನ್ನಭಾಗ್ಯ ಅಕ್ಕಿ ಟೆನ್ಷನ್- ತೆಲಂಗಾಣದಲ್ಲೂ ಅಕ್ಕಿ ಸಿಗ್ತಿಲ್ಲ ಎಂದ ಸಿಎಂ