– ವೇಲು ನಾಯ್ಕರ್ ಡಿ.ಕೆ ಸುರೇಶ್ – ಕುಸುಮಾ ಬಗ್ಗೆ ಮಾತಾಡಿದ್ದ
ಬೆಂಗಳೂರು: ಮುನಿರತ್ನ (Munirathna) ಅವರು ಸಚಿವರಾಗಿದ್ದಾಗ ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಅನ್ನೋ ಆರೋಪ ಕೇಳಿಬಂದಿದ್ದು, ಇದಕ್ಕೆ ಮಾಜಿ ಸಚಿವರೂ ಆಗಿರುವ ಹಾಲಿ ಶಾಸಕ ಮುನಿರತ್ನ ಅವರು ತಿರುಗೇಟು ನೀಡಿದ್ದಾರೆ.
`ಪಬ್ಲಿಕ್ ಟಿವಿ’ (Public TV) ಜೊತೆಗೆ ಮಾತನಾಡಿದ ಅವರು, ಸಚಿವರಾಗಿದ್ದ ಮುನಿರತ್ನ ಅವರು ಹನಿಟ್ರ್ಯಾಪ್ ಮಾಡಿಸುತ್ತಿದ್ದರು ಎಂಬ ಮುನಿರತ್ನ ಬೆಂಬಲಿಗ ವೇಲು ನಾಯ್ಕರ್ ಗಂಭೀರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಬಾಡಿಗೆ ಮನೆಯಲ್ಲಿದ್ದುಕೊಂಡೇ ಡ್ರಗ್ಸ್ ಸಪ್ಲೈ ಮಾಡ್ತಿದ್ದ ನೈಜೀರಿಯನ್ ಪ್ರಜೆ ಅರೆಸ್ಟ್!
ಇದೇ ವ್ಯಕ್ತಿ ನನ್ನ ಬಳಿ ಇದ್ದಾಗ ಡಿ.ಕೆ ಶಿವಕುಮಾರ್ ಬಗ್ಗೆ ಹೇಳಿದ್ದ. ಡಿ.ಕೆ ಶಿವಕುಮಾರ್ ಅವರು ರಮೇಶ್ ಜಾರಕಿಹೊಳಿ ಅವರನ್ನ ಹನಿಟ್ರ್ಯಾಪ್ ಮಾಡಿಸಿ ಹಾಳು ಮಾಡಿಬಿಟ್ರು ಸರ್ ಅಂತಾ ಹೇಳಿದ್ದ. ಜೊತೆಗೆ ಸಂಸದ ಡಿ.ಕೆ ಸುರೇಶ್ ಮತ್ತು ಡಿ.ಕೆ ರವಿ ಪತ್ನಿ ಕುಸುಮಾ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದ. ನಾನೇ ಆಗ ಇದೆಲ್ಲ ನನ್ನ ಬಳಿ ಹೇಳಬೇಡ ಅಂತಾ ಬೈದು ಕಳಿಸಿದ್ದೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ವೇಲ್ ನಾಯ್ಕರ್ ಆರೋಪ ಮಾಡಿಲ್ಲ. ಡಿ.ಕೆ ಸುರೇಶ್ (DK Suresh) ಮತ್ತು ಡಿ.ಕೆ ಶಿವಕುಮಾರ್ (DK Shivakumar) ಆರೋಪ ಮಾಡಿಸಿದ್ದಾರೆ. ವೇಲ್ ನಾಯ್ಕರ್ ನಮ್ಮವನು ಅಂತಾ ನಂಬಿಕೆ ಬರಬೇಕಾದ್ರೆ ಇಂತಹದ್ದೇನಾದರೂ ಮಾಡಬೇಕಲ್ಲ. ಅದಕ್ಕೆ ದಾಖಲೆಯಾಗಿ ಈ ಆರೋಪ ಮಾಡಿದ್ದಾರೆ ಅಷ್ಟೇ ಇದೆಲ್ಲವೂ ಶುದ್ಧ ಸುಳ್ಳು ಎಂದು ಆರೋಪಗಳನ್ನ ತಳ್ಳಿಹಾಕಿದ್ದಾರೆ.
ಬಿಜೆಪಿ ನಗರಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಮೀಸಲಾತಿ ಉದ್ದೇಶದಿಂದ ಹೋಗಿದ್ದಾರೆ. ಈ ಮುನಿರತ್ನ ಅವರ ಬಳಿ ಅಧಿಕಾರ ಇಲ್ಲ. ಹಾಗಾಗಿ ಹೋಗ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಹಿಂದೆ ಹುಂಡಿಯಲ್ಲಿತ್ತು 247 ರೂ. – ಈಗ ಅಂಜನಾದ್ರಿಗೆ 6 ಕೋಟಿಗೂ ಅಧಿಕ ಆದಾಯ
Web Stories