ತನ್ನ ಮತ್ತು ತನ್ನ ತಾಯಿಯ ಬಗ್ಗೆ ಸಲ್ಲದ ಆರೋಪ ಮಾಡಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ (Bigg Boss) ವರ್ತೂರು ಸಂತೋಷ್ (Varthur Santhosh) ಕಣ್ಣೀರಿಟ್ಟಿದ್ದಾರೆ. ತಂದೆ ನಿಧನದ ನಂತರ ತನ್ನನ್ನು ತಾಯಿ ಉತ್ತಮವಾಗಿಯೇ ಸಾಕಿದ್ದಾರೆ. ಆದರೆ, ಕೆಲವರು ಏನೇನೋ ಆರೋಪ ಮಾಡುತ್ತಿದ್ದಾರೆ ಎಂದು ವರ್ತೂರು ಸಂತೋಷ್ ಕಣ್ಣೀರು ಹಾಕಿದ್ದಾರೆ.
ನಿಮ್ಮ ಮಾತುಗಳಿಂದ ನನ್ನ ತಾಯಿ ಸರಿಯಾಗಿ ಊಟ ಮಾಡುತ್ತಿಲ್ಲ. ಅವರು ಊಟವನ್ನೇ ಬಿಟ್ಟಿದ್ದಾರೆ. ನಾನು ಮತ್ತು ನನ್ನ ತಾಯಿ ತಪ್ಪು ಏನು ಮಾಡಿದ್ದೇವೆ ಎಂದು ತಿಳಿಸಿ. ನಮ್ಮ ತಪ್ಪನ್ನು ಸಾಬೀತು ಪಡಿಸಿದರೆ ಕ್ಷಮೆ ಕೇಳುತ್ತೇನೆ. ಆದರೆ, ಇಲ್ಲದೇ ಇರೋ ಆರೋಪದಿಂದಾಗಿ ನಾವು ನೊಂದಿದ್ದೇವೆ ಎಂದು ಸಂತೋಷ್ ಹೇಳಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಬಂದ ನಂತರ ಸಂತೋಷ್ ಅವರಿಗೆ ತುಂಬಾನೇ ಅಭಿಮಾನಿಗಳು ಹುಟ್ಟಿದ್ದಾರೆ. ಅದನ್ನು ಸಹಿಸೋಕೆ ಆಗದೇ ಕೆಲವರು ಅಪಪ್ರಚಾರ ಮಾಡುತ್ತಿದ್ದಾರಂತೆ. ಅದರಿಂದಾಗಿ ಮನಸ್ಸಿಗೆ ತುಂಬಾನೇ ನೋವಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಅತ್ತಿದ್ದಾರೆ.