ಚಿಕ್ಕೋಡಿ: ಅತ್ತೆ, ಮಾವ ಹಾಗೂ ಗಂಡ ಸೇರಿಕೊಂಡು ಸೊಸೆಯನ್ನು ಉಸಿರುಗಟ್ಟಿಸಿ ಕೊಂದ (Murder) ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ಶ್ರೀದೇವಿ ದೀಪಕ್ ಬೇವಿನಕಟ್ಟಿ (31) ಅವರನ್ನು ವರದಕ್ಷಿಣೆಗಾಗಿ (Dowry) ಅತ್ತೆ, ಮಾವ ಹಾಗೂ ಅವರ ಗಂಡ ಉಸಿರುಗಟ್ಟಿಸಿ ಕೊಂದಿದ್ದಾರೆ. ದೀಪಕ್ ಬೇವಿನಕಟ್ಟಿ (34), ರಾಮಚಂದ್ರ ಬೇವಿನಕಟ್ಟಿ (64) ಹಾಗೂ ಪದ್ಮಾವತಿ ಬೇವಿನಕಟ್ಟಿ (50) ಸೊಸೆಯನ್ನು ಹತ್ಯೆಗೈದ ಆರೋಪಿಗಳು. ಇದನ್ನೂ ಓದಿ: ಕುಡಿದು ಮಧ್ಯರಾತ್ರಿ ಯುವಕರ ಡೆಡ್ಲಿ ಡ್ರೈವಿಂಗ್- ಅಮಾಯಕ ಜೀವಗಳು ಜಸ್ಟ್ ಮಿಸ್
ಮದುವೆಯಾಗಿ 3 ವರ್ಷಗಳಾದರೂ ಶ್ರೀದೇವಿಗೆ ಮಕ್ಕಳಾಗಿರಲಿಲ್ಲ. ಅಲ್ಲದೇ ತವರು ಮನೆಯಿಂದ ಹಣ ತರುವಂತೆ ಶ್ರೀದೇವಿ ಗಂಡ ಪೀಡಿಸುತ್ತಿದ್ದ. ಈ ಹಿನ್ನೆಲೆ ಪತಿ, ಅತ್ತೆ ಹಾಗೂ ಮಾವ ಸೇರಿಕೊಂಡು ಸೊಸೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಂತಿದ್ದ ಲಾರಿಗೆ ಶವ ಸಾಗಿಸ್ತಿದ್ದ ಅಂಬುಲೆನ್ಸ್ ಡಿಕ್ಕಿ- ಮೂವರ ದುರ್ಮರಣ!