ಬೆಂಗಳೂರು: ಸಿನಿಮಾ ಶೈಲಿಯಲ್ಲಿ ಹೊಯ್ಸಳ (Hoysala) ಪೊಲೀಸರು ಚೇಸಿಂಗ್ (Chasing) ಮಾಡಿ ಕಳ್ಳರನ್ನು ಇಂದಿರಾ ನಗರದ (Indira Nagar) 80 ಅಡಿ ರಸ್ತೆಯಲ್ಲಿ ಸೆರೆ ಹಿಡಿದಿದ್ದಾರೆ.
ರೌಡಿಶೀಟರ್ಗಳಾದ ಗುಂಡಾ ಅಲಿಯಾಸ್ ವಿನೋದ್, ಸ್ಪೀಫನ್ ರಾಜ್ನನ್ನು ಬಂಧಿಸಲಾಗಿದೆ. ಜನವರಿ 31 ರಂದು ರಾತ್ರಿ ಎರಡು ಗಂಟೆ ವೇಳೆಗೆ ಸಿದ್ದೇಶ್ ಎಂಬಾತನ ಕಾರನ್ನು ಅಡ್ಡಗಟ್ಟಿ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪಾಕ್ನ ಸ್ವತಂತ್ರ ಅಭ್ಯರ್ಥಿಯ ಕಚೇರಿಯ ಹೊರಗೆ ಬಾಂಬ್ ಸ್ಫೋಟ: 26 ಮಂದಿ ಸಾವು
ಸಿದ್ದೇಶ್ ಅವರು ಈ ಕುರಿತು ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಹೋಗಿದ್ದಾರೆ. ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ಬೈಕ್ನಲ್ಲಿ ಹೊರಟ್ಟಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿದ್ದಾರೆ. ಇದನ್ನೂ ಓದಿ: ಓದಿನ ಕಡೆ ಗಮನಕೊಡುವಂತೆ ಹೇಳಿದ್ದಕ್ಕೆ ಫುಟ್ಬಾಲ್ ಪ್ಲೇಯರ್ ಸೂಸೈಡ್
ಹೊಯ್ಸಳ ಪೊಲೀಸರಾದ ಜಾರ್ಜ್ ಮತ್ತು ಬೀರಪ್ಪ ಅವರು ಆರೋಪಿಗಳನ್ನು ಬೆನ್ನಟ್ಟಿದು, ಸುಮಾರು ಮೂರು ಕಿಲೋಮಿಟರ್ಗಳವರೆಗೂ ಬೈಕ್ನಲ್ಲಿ ಆರೋಪಿಗಳು ಹೋಗಿದ್ದಾರೆ. ಪಟ್ಟು ಬಿಡದ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿ, ಆರೋಪಿಗಳು ಕಳವು ಮಾಡಿದ್ದ ಏಳು ಮೊಬೈಲ್ ಫೋನ್ಗಳನ್ನು ಸಹ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿದ ಬಿಜೆಪಿ ಕಾರ್ಯಕರ್ತರ ವಶ
ಹೊಯ್ಸಳ ಪೊಲೀಸರ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಬಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ: ಮೋದಿ ವ್ಯಂಗ್ಯ