ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಕಿಚ್ಚನ ಕ್ಲಾಸ್ ಬಳಿಕ ಎಲ್ಲಾ ಸ್ಪರ್ಧಿಗಳು ಎಚ್ಚೆತ್ತು ಆಟವಾಡುತ್ತಿದ್ದಾರೆ. ಇದೀಗ ಗೆಲ್ಲೋ ಕುದುರೆ ವಿನಯ್ ಎಂದು ಬೆಟ್ಟು ತೋರಿಸಿದ ನೀತುಗೆ (Neethu Vanajakshi) ಮೈಕಲ್ ಠಕ್ಕರ್ ಕೊಟ್ಟಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಾಂಗ್ ಲೀಕ್: ಕೇಡಿಗಳ ಅರೆಸ್ಟ್
- Advertisement 2
ಟಾಸ್ಕ್ವೊಂದರಲ್ಲಿ ಒಂದಿಷ್ಟು ಪದಗಳನ್ನ ಸ್ಪರ್ಧಿಗಳಿಗೆ ನೀಡಿದ್ದರು. ಆ ಪದದ ಅನುಸಾರ ಸ್ಪರ್ಧಿಗಳನ್ನ ಅತೀ ಹೆಚ್ಚು ಮತ್ತು ಅತೀ ಕಡಿಮೆ ಅದನ್ನ ಹೈಲೆಟ್ ಮಾಡಿ ನಿಲ್ಲಿಸಬೇಕಿತ್ತು. ಅದರಂತೆ ನೀತು ವನಜಾಕ್ಷಿ ಅವರಿಗೆ ‘ಗೆಲ್ಲೋ ಕುದುರೆ’ ಎಂಬ ಪದ ಸಿಕ್ಕಿತ್ತು. ಈ ಅನುಸಾರ ನೀತು, ಮೊದಲ ಸ್ಥಾನದಲ್ಲಿ ವಿನಯ್ (Vinay Gowda) ನಿಲ್ಲಿಸಿದ್ದರೆ, ಕಡೆಯ ಸ್ಥಾನದಲ್ಲಿ ಇಶಾನಿಯನ್ನು ನಿಲ್ಲಿಸಿದ್ದರು.
- Advertisement 3
- Advertisement 4
ನೀತು ನಿರ್ಣಯಕ್ಕೆ ಮೈಕಲ್, ಕಾರ್ತಿಕ್ (Karthika Mahesh) ಸೇರಿದಂತೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಗೆಲ್ಲೋ ಕುದುರೆ ಪಟ್ಟಿಯಲ್ಲಿ ವಿನಯ್ ಗೌಡ ಒಬ್ಬರೇ ಓಡ್ತಿರೋದು ಅಂತ ಹೇಳಿದ್ದಕ್ಕಾಗಿ ನೀತುಗೆ ಠಕ್ಕರ್ ನೀಡಿದ ಮೈಕೆಲ್, ನೀವೀಗ ಹೇಳಿದ್ದೀರಿ, ಒಂದೇ ಒಂದು ಗೆಲ್ಲೋ ಕುದುರೆ ಆಟ ಆಡ್ತಾ ಇದೆ ಅಂತ. ಹಾಗಾದರೆ, ನೀವು ನಿಮ್ಮನ್ನೇ ಕನ್ಸಿಡರ್ ಮಾಡಿಕೊಂಡಿಲ್ಲ ಅಂತ ಅರ್ಥ. ಅಂದರೆ ನೀವಿಲ್ಲಿ ಸುಮ್ನೇ ಇದ್ದೀರಿ. ಸುಮ್ನೇ ಇರೋದಾದ್ರೆ ನೀವ್ಯಾಕೆ ಬಿಗ್ ಬಾಸ್ನಲ್ಲಿ ಯಾಕೆ ಇದ್ದೀರಾ? ಗೊಂದಲದಲ್ಲಿ ಇದ್ದೀರಾ ಅಂತೆಲ್ಲ ಕೇಳಿದರು. ಈ ಮಾತು ಕೇಳಿದ ನೀತು, ಸಮರ್ಥನೆ ಕೊಡೋದ್ರಲ್ಲಿ ಸೋತರು. ಮೈಕೆಲ್ ಮಾತಿಗೆ ಬೆಂಬಲಿಸುತ್ತ ಮನೆಮಂದಿ ನಕ್ಕರು. ಸದಾ ಕನ್ಫೂಷನ್ನಲ್ಲಿರೋ ನೀತು, ಮೈಕಲ್ ಈ ಮೂಲಕ ಕ್ಲಾಸ್ ತೆಗೆದುಕೊಂಡರು.
ಸ್ನೇಕ್ ಶ್ಯಾಮ್, ಗೌರೀಶ್, ರಕ್ಷಕ್ ಬುಲೆಟ್ ಅವರು ಎಲಿಮಿನೇಟ್ ಆಗಿ ಈಗಾಗಲೇ ಬಿಗ್ ಬಾಸ್ ಮನೆಯಿಂದ (Bigg Boss House) ಹೊರಬಂದಿದ್ದಾರೆ. 5ನೇ ವಾರಕ್ಕೆ ಯಾರು ಎಲಿಮಿನೇಟ್ ಆಗುತ್ತಾರೆ ಕಾದುನೋಡಬೇಕಿದೆ.