ಮಂಡ್ಯ: ನನ್ನ ಚುನಾವಣೆ ವೆಚ್ಚಕ್ಕೆ ಮೂರು ರೂಪಾಯಿ ಬಡ್ಡಿಗೆ ತಂದಿದ್ದ ಹಣವನ್ನು ನಾರಾಯಣಗೌಡರಿಗೆ ಕೊಟ್ಟು ತಪ್ಪು ಮಾಡಿಬಿಟ್ಟೆ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತಾಲೂಕಿನ ಪಕ್ಷದ ಕಾರ್ಯಕರ್ತರ ಈ ಸ್ಥಿತಿಗೆ ನಾನೂ ಕಾರಣ. ನಾರಾಯಣಗೌಡರ ಮೇಲೆ ಕುಮಾರಣ್ಣ ನಂಬಿಕೆ ಇಟ್ಟಿದ್ದರು. ಈ ನಂಬಿಕೆಯನ್ನು ಅವರು ಹಾಳುಮಾಡಿಕೊಂಡರು ಎಂದು ಹೇಳಿದ್ದಾರೆ.
- Advertisement 2
- Advertisement 3
2018ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಣ್ಣ ಅವರ ಆಜ್ಞೆ ಪಾಲಿಸುವ ಸಲುವಾಗಿ ನಾರಾಯಣಗೌಡ ಅವರಿಗೆ ಟಿಕೆಟ್ ಕೊಡಿಸಲು ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದೆ. ಆ ಸಮಯದಲ್ಲಿ ಅವರು ಚುನಾವಣೆಗೆ ಖರ್ಚು ಮಾಡಲು ಹಣ ಇಲ್ಲ ಎಂದು ನಮ್ಮ ಬಳಿ ಬಂದಿದ್ದರು. ನನ್ನ ಚುನಾವಣೆ ವೆಚ್ಚಕ್ಕೆ ಮೂರು ರೂಪಾಯಿ ಬಡ್ಡಿಗೆ ತಂದಿದ್ದ ಹಣವನ್ನು ನಾರಾಯಣಗೌಡರಿಗೆ ಕೊಟ್ಟು ತಪ್ಪು ಮಾಡಿಬಿಟ್ಟೆ. ಆ ಕಾರಣಕ್ಕೆ ಕ್ಷಮೆ ಇರಲಿ ಎಂದು ಜನರಲ್ಲಿ ಕೇಳಿಕೊಂಡರು.
- Advertisement 4
ಮಾಧ್ಯಮಗಳಲ್ಲಿ ಬರುತ್ತಿರುವ ಬೆಳವಣಿಗೆ ಕೆ.ಆರ್ ಪೇಟೆಯಲ್ಲಿ ಆಗುತ್ತಿಲ್ಲ. ನಿಮ್ಮೆಲ್ಲರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನು ಚುನಾವಣೆ ಬಂದಾಗ ನಿರ್ಧರಿಸುತ್ತೇವೆ ಎಂದು ಪರೋಕ್ಷವಾಗಿ ನಿಖಿಲ್ ಸ್ಪರ್ಧೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ತಿಳಿಸಿದರು.