ಚೆನ್ನೈ: ಸಾರ್ವಜನಿಕ ಕೊಳದಲ್ಲಿ (Public Pond) ಸ್ನಾನ ಮಾಡುತ್ತಿದ್ದ ದಲಿತ ಮಹಿಳೆ ವಿರುದ್ಧ ಜಾತಿ (Scheduled Caste) ನಿಂದನೆ ಮಾಡಿ, ಆಕೆಯನ್ನು ಅರೆಬರೆ ಬಟ್ಟೆಯಲ್ಲೇ ಓಡಿಸಿದ ಘಟನೆ ತಮಿಳುನಾಡಿನ (TamilNadu) ಪುದುಕೊಟ್ಟೈ ಜಿಲ್ಲೆಯ ಕುತ್ತಂಕುಡಿ ಗ್ರಾಮದಲ್ಲಿ ನಡೆದಿದೆ.
ಸಂತ್ರಸ್ತ ಮಹಿಳೆಯೊಂದಿಗೆ (Women) ಗ್ರಾಮಸ್ಥರು ಜಾತಿ ನಿಂದನೆ ಮಾಡಿದ ವ್ಯಕ್ತಿ ಅಯ್ಯಪ್ಪನ್ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಟಿಪ್ಪು ನಿಜಕನಸುಗಳು ಮಾದರಿಯಲ್ಲಿ ಸಿದ್ದು ನಿಜಕನಸುಗಳು ಪುಸ್ತಕ ಇಂದು ಬಿಡುಗಡೆ
ನಡೆದಿದ್ದೇನು?: ಇದೇ ಜನವರಿ 1ರಂದು ಮಹಿಳೆ ಕುತ್ತಂಕುಡಿ ಗ್ರಾಮದ ಸಾರ್ವಜನಿಕ ಕೊಳದಲ್ಲಿ ಸ್ನಾನ ಮಾಡಲು ಹೋಗಿದ್ದರು. ಈ ವೇಳೆ ಮಹಿಳೆಯನ್ನು ನೋಡಿದ ಅಯ್ಯಪ್ಪನ್ ಎಂಬ ವ್ಯಕ್ತಿ ಆಕೆಯನ್ನ ತಡೆದು ಗದರಿಸಿದ್ದಾನೆ. ಮಹಿಳೆ ಏಕೆ ಸ್ನಾನ ಮಾಡಬಾರದು ಎಂದು ಪ್ರಶ್ನಿಸಿದಾಗ ಮೀನು ಸಾಕಾಣಿಕೆಗಾಗಿ (Fish Breeding) ಈಗಾಗಲೇ ಕೆರೆಯನ್ನು ಹರಾಜು ಮಾಡಲಾಗಿದೆ ಎಂದು ಅಯ್ಯಪ್ಪನ್ ಹೇಳಿದ್ದಾನೆ. ಇದನ್ನೂ ಓದಿ: ಏರ್ ಇಂಡಿಯಾದಲ್ಲಿ ಮೂತ್ರವಿಸರ್ಜನೆ ಪ್ರಕರಣ ಬಳಿಕ ಗೋ ಫಸ್ಟ್ನಲ್ಲಿ ಗಗನಸಖಿಗೆ ವಿದೇಶಿಗನಿಂದ ಕಿರುಕುಳ
ನಂತರ ಮಹಿಳೆ ಅರೆಬರೆ ಬಟ್ಟೆ ತೊಟ್ಟಿದ್ದರೂ ಹಾಗೆಯೇ ಓಡಿಸಿದ್ದಾನೆ. ಮಹಿಳೆಯ ಬಟ್ಟೆಯನ್ನು ಮುಳ್ಳಿನ ಪೊದೆ ಮೇಲೆ ಎಸೆದಿದ್ದಾನೆ. ಬಳಿಕ ಗ್ರಾಮಸ್ಥರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: 98 ವರ್ಷದ ವೃದ್ಧ ಜೈಲಿನಿಂದ ಬಿಡುಗಡೆ – ಎಸ್ಕಾರ್ಟ್ ನೀಡಿ ಮನೆಗೆ ಕಳುಹಿಸಿದ ಪೊಲೀಸರು
ಅಯ್ಯಪ್ಪನ್ ಡಿಎಂಕೆ ಸದಸ್ಯ ಹಾಗೂ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಎಂದು ಮಹಿಳೆ ಶ್ರೀದೇವಿ ಪತಿ ವಡಿವೇಶ್ವರನ್ ಹೇಳಿದ್ದಾರೆ. ಅಲ್ಲದೇ ಮಹಿಳೆ ಸ್ನಾನ ಮಾಡುವಾಗ ಅಯ್ಯಪ್ಪನ್ ಜೊತೆಗೆ ಮುತ್ತುರಾಮನ್ ಎಂಬ ಇನ್ನೊಬ್ಬ ವ್ಯಕ್ತಿಯೂ ಇದ್ದ ಎಂದು ಆರೋಪಿಸಿದ್ದಾರೆ.
ಪುದುಕೊಟ್ಟೈ ಜಿಲ್ಲೆಯಲ್ಲಿ ಜಾತಿ ನಿಂದನೆ ಸಂಬಂಧಿತ ನಡೆದ 2ನೇ ಪ್ರಕರಣ ಇದಾಗಿದೆ. ಕಳೆದ ಡಿಸೆಂಬರ್ 26ರಂದು ವೆಂಗೈವಾಯಲ್ನ ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಗಳು ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಮಾನವನ ಮಲ ಬೆರಸಿದ್ದ ಪ್ರಕರಣ ಪತ್ತೆಯಾಗಿತ್ತು. ಈ ಸಂಬಂಧ ಕೇಸ್ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಿಲ್ಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k