ಭೋಪಾಲ್: ಸತ್ಯನಾರಾಯಣ ಪೂಜೆ ಮಾಡಿದರೂ ಹುಡುಗಿ ಸಿಗಲಿಲ್ಲ ಎಂದು ಪೂಜಾರಿ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ.
ರಾಜಸ್ಥಾನದ ಕೋಟಾ ನಿವಾಸಿ ಕುಂಜ್ಬಿಹಾರಿ ಶರ್ಮಾ ಹಲ್ಲೆಗೊಳಗಾದ ಅರ್ಚಕ. ಸತ್ಯನಾರಾಯಣ ಪೂಜೆ ವೇಳೆ ಕೆಲವು ತಪ್ಪುಗಳು ನಡೆದಿದೆ ಎಂಬ ಶಂಕೆಯ ಮೇಲೆ ಲಕ್ಷ್ಮಿಕಾಂತ್ ಶರ್ಮಾ (60) ಹಾಗೂ ಮಕ್ಕಳಾದ ವಿಪುಲ್ ಹಾಗೂ ಅರುಣ್ ಸೇರಿ ಥಳಿಸಿ ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಲಕ್ಷ್ಮಿಕಾಂತ್ ಶರ್ಮಾ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆಯನ್ನು ನಡೆಸಲು ಅರ್ಚಕ ಕುಂಜ್ ಬಿಹಾರಿ ಶರ್ಮಾರನ್ನು ಆಹ್ವಾನಿಸಿದ್ದರು. ಆ ಪ್ರಕಾರವಾಗಿಯೇ ಅರ್ಚಕರು ಪೂಜೆ ಮಾಡಿ ಮನೆಗೆ ತೆರಳಿದ್ದಾರೆ. ಆದರೆ ತಡರಾತ್ರಿ ಲಕ್ಷ್ಮಿಕಾಂತ್ ಶರ್ಮಾ ಹಾಗೂ ಆತನ ಮಗ ವಿಪುಲ್ ಹಾಗೂ ಅರುಣ್ ಅರ್ಚಕನ ಮನೆಗೆ ಬಂದಿದ್ದಾರೆ. ಪೂಜೆ ಸರಿಯಾಗಿಲ್ಲ ಎಂದು ಕೋಪಿಸಿಕೊಂಡು ಆ ಮೂವರು ಸೇರಿ ಅರ್ಚಕರಿಗೆ ಹೊಡೆದಿದ್ದಾರೆ. ಈ ವೇಳೆ ವಿಪುಲ್ ಅರ್ಚಕನ ಕಿವಿಯನ್ನು ಕಚ್ಚಿ ಹಲ್ಲೆ ನಡೆಸಿದ್ದಾನೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಹಿಮಪಾತ – 20 ಮಂದಿ ನಾಪತ್ತೆ
ಘಟನೆಗೆ ಸಂಬಂಧಿಸಿ ಅರ್ಚಕನನ್ನು ನೆರೆಹೊರೆಯವರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಗೆ ಕುರಿತು ಅರ್ಚಕ ಶರ್ಮಾ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಲಕ್ಷ್ಮಿಕಾಂತ್ ಶರ್ಮಾ ಹಾಗೂ ಆತನ ಮಕ್ಕಳಾದ ವಿಪುಲ್, ಅರುಣ್ನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಈಗ ಭಾರತಕ್ಕೆ 2ನೇ ಅತಿ ದೊಡ್ಡ ತೈಲ ಪೂರೈಕೆದಾರ