ಯಾದಗಿರಿ: ಹಾವು ಕಂಡ ತಕ್ಷಣ ಜನರು ಭಯದಿಂದ ಓಡಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಆರು ಅಡಿ ವಿಷ ಸರ್ಪದ ಜೊತೆ ಹುಡುಗಾಟವಾಡಿದ್ದಾನೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಮನೆಯೊಂದರಲ್ಲಿ ಏಕಾಏಕಿ ಕ್ಯಾರೆ ಹಾವೊಂದು ಕಾಣಿಸಿಕೊಂಡು ಮನೆಯವರನ್ನು ಮಾತ್ರವಲ್ಲದೆ ಅಕ್ಕಪಕ್ಕದ ಮನೆಯವರನ್ನು ಸಹ ಕೆಲ ಹೊತ್ತು ಭಯಪಡಿಸಿತ್ತು.
ಈ ವೇಳೆ ಅದೇ ಗ್ರಾಮದ ರೇಣುಕಪ್ಪ ಎಂಬವರು ಜೀವ ಭಯ ತೊರೆದು ಹಾವುವನ್ನು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಅರ್ಧ ಗಂಟೆ ಹೆಚ್ಚು ಕಾಲ ಹಾವಿನ ಜೊತೆ ರೇಣುಕಪ್ಪ ಹುಡುಗಾಟ ಸಹವಾಡಿದ್ದಾನೆ. ಇದರಿಂದ ಭಯಬೀತರಾದ ಗ್ರಾಮಸ್ಥರು ರೇಣುಕಪ್ಪನಿಗೆ ಬುದ್ಧಿ ಹೇಳಿ ಹಾವನ್ನು ಕಾಡಿನಲ್ಲಿ ಬಿಡಲು ಹೇಳಿದ್ದಾರೆ.
ರೇಣುಕಪ್ಪ ಹಾವನ್ನು ಹಿಡಿದು ಹುಡುಗಾಟ ಆಡಿರುವ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ.