ಸಾಯ್ತೀನಿ ಅಂದವ ಕೊನೆ ಕ್ಷಣದಲ್ಲಿ ಮನಸು ಬದಲಾವಣೆ- ಕೆರೆಗೆ ಹಾರಿ ಕೂಗಿಕೊಂಡ

Public TV
0 Min Read
kere

ಬೆಂಗಳೂರು: ನನಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ, ನಾನು ಬದುಕಿ ಸಾಧಿಸೋದು ಏನು ಇಲ್ಲ, ಸಾಯುವುದೊಂದೆ ಪರಿಹಾರ ಅಂದುಕೊಂಡು ಸಾಯಲು ಕೆರೆಗೆ ಇಳಿದಿದ್ದ ವ್ಯಕ್ತಿ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿದ್ದಾನೆ. ಬಳಿಕ ನನ್ನನ್ನು ಉಳಿಸಿ ಎಂದು ಕೂಗಿಕೊಂಡಿದ್ದಾನೆ.

ಐವತ್ತು ವರ್ಷದ ಸುರೇಶ್ ಹೊಸಕೋಟೆ ಬಳಿಯ ತಾವರೆಕೆರೆ ಕೆರೆಗೆ ಇಳಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ನೀರಿಗೆ ಇಳಿದ ಬಳಿಕ ಮನಸ್ಸು ಬದಲಾಗಿದೆ. ಬದುಕಬೇಕು ಎಂದು ಮೇಲೆ ಬರಲು ಯತ್ನಿಸಿದರೂ ಕೆಸರಿನಲ್ಲಿ ಸಿಲುಕಿ ಬರಲು ಆಗದೇ ಕೂಗಿಕೊಂಡಿದ್ದಾನೆ.

ನೀರಿನಲ್ಲಿ ಸಿಲುಕಿದ್ದ ಸುರೇಶನನ್ನು ಸ್ಥಳೀಯರು ನೀರಿನಿಂದ ಮೇಲೆ ಕರೆತಂದಿದ್ದು, ಗ್ರಾಮಸ್ಥರು ಬುದ್ಧಿವಾದ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *