ತಿರುವನಂತಪುರಂ: ಇವತ್ತು ಕೇರಳದಲ್ಲಿ ಅಪಹರಣ ಹಾಗೂ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತ ನಟಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಘಟನೆ ಬಳಿಕ ತೀವ್ರ ನೊಂದಿದ್ದ ನಟಿ ಇಂದು ಮಾಧ್ಯಮಗಳ ಮುಂದೆ ಪ್ರತ್ಯಕ್ಷವಾಗುತ್ತಿದ್ದಾರೆ. ಫೆಬ್ರವರಿ 17ರ ರಾತ್ರಿ ನಡೆದ ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಟಿ ಹೊರ ಹಾಕಲಿದ್ದಾರೆ. ಶನಿವಾರದಂದೇ ಸುದ್ದಿಗೋಷ್ಠಿ ನಡೆಸಬೇಕಿತ್ತು. ಆದ್ರೆ ಐಡೆಂಟಿಫಿಕೇಷನ್ ಪೆರೇಡ್(ಸಂಸತ್ರಸ್ತೆಯಿಂದ ಆರೋಪಿಯ ಗುರುತು ಪತ್ತೆ ಹಚ್ಚುವುದು) ಇದ್ದಿದ್ದರಿಂದ ಸುದ್ದಿಗೋಷ್ಠಿಯನ್ನು ಇಂದಿಗೆ ಮುಂದೂಡಲಾಗಿತ್ತು.
ಇದನ್ನೂ ಓದಿ: ಶಾಕಿಂಗ್: ಅಪಹರಣ, ಅತ್ಯಾಚಾರಕ್ಕೆ ಸುಪಾರಿ? ಬಹುಭಾಷಾ ನಟಿ ಹೇಳಿದ್ದೇನು?
ಈಗಾಗಲೇ ಕಾಮುಕ ಆರೋಪಿಗಳ ಬಂಧನವಾಗಿದ್ದು, ಪ್ರಮುಖ ಆರೋಪಿ ಪಲ್ಸರ್ ಸುನಿ ದಿನಕ್ಕೊಂದು ಹೇಳಿಕೆ ನೀಡ್ತಿದ್ದಾನೆ. ಕೇರಳ ಪೊಲೀಸರು ಈತನ ಕಾಲ್ ಡಿಟೇಲ್ಸ್ ಆಧರಿಸಿ ತೀವ್ರ ತನಿಖೆ ನಡೆಸುತ್ತಿದ್ದಾರೆ.
ಈ ಮಧ್ಯೆ ಸಂತ್ರಸ್ತ ನಟಿ ಮತ್ತೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ ಎನ್ನಲಾಗಿದೆ. ಈ ಬಗ್ಗೆ ನಟ ಪೃಥ್ವಿರಾಜ್ ಸ್ಪಷ್ಟನೆ ನೀಡಿದ್ದಾರೆ. ಜಿನು ಅಬ್ರಹಮ್ ಅವರ ಆಡಮ್ ಚಿತ್ರದ ಶೂಟಿಂಗ್ ಸದ್ಯದಲ್ಲೇ ಶುರುವಾಗ್ತಿದ್ದು ನಟಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಲವರ್ಗಳಿಗಾಗಿ ಬಹುಭಾಷಾ ನಟಿ ಕಿಡ್ನಾಪ್: ಪೊಲೀಸರ ವಿಚಾರಣೆಯಲ್ಲಿ ಪಲ್ಸರ್ ಸುನಿ ಹೇಳಿದ್ದೇನು?