Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?

Bengaluru City

ಮಕರ ಸಂಕ್ರಾಂತಿ – ಉತ್ತರಾಯಣದಲ್ಲೇ ಭೀಷ್ಮ ದೇಹ ತ್ಯಜಿಸಿದ್ದು ಯಾಕೆ?

Public TV
Last updated: January 15, 2026 7:35 am
Public TV
Share
3 Min Read
Makar Sankranti 2026 Why did Bhishma leave his body on Uttarayana
SHARE

ಮಹಾಭಾರತ ಯುದ್ಧದ 10 ದಿನ ಶಿಖಂಡಿ ಮುಂದೆ ಸೋತ ಭೀಷ್ಮ (Bhishma) ಮರಣಶಯ್ಯೆಯಲ್ಲಿ ಮಲಗಿ 58 ದಿನದ ಬಳಿಕ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. ತಂದೆ ಸಂತನು ಮಹಾರಾಜ ನೀಡಿದ ಇಚ್ಛಾ ಮರಣ (Iccha Mrityu) ವರದಿಂದ ಭೀಷ್ಮ ಶರದಲ್ಲಿ ಮಲಗಿ 58 ದಿನ ಕಳೆದಿದ್ದ.

ಭೀಷ್ಮ ಯಾವಾಗ ಬೇಕಾದರೂ ಪ್ರಾಣ ತ್ಯಾಗ ಮಾಡಬಹುದಿತ್ತು. ಆದರೆ 58ನೇ ದಿನಕ್ಕೆ ಪ್ರಾಣತ್ಯಾಗ ಮಾಡಿದ್ದು ಯಾಕೆ ಎನ್ನುವುದಕ್ಕೂ ಕಾರಣ ಇದೆ. ಹಿಂದೂ ಪಂಚಾಂಗದ ಪ್ರಕಾರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸೂರ್ಯ ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಮಣ ಅಥವಾ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಮೇಷಾದಿ ರಾಶಿಗಳಲ್ಲಿ ಸೂರ್ಯನ ಪರಿಭ್ರಮಣೆಯ ಚಲನೆಯನ್ನವಲಂಬಿಸಿ 12 ಮಾಸಗಳನ್ನಾಗಿ ವಿಂಗಡಿಸಲಾಗಿದೆ. ಧನು ಮಾಸ ಕೊನೆಯಾಗಿ ಸಂಕ್ರಮಣದಂದು ಮಕರ ಮಾಸಕ್ಕೆ ಸೂರ್ಯ ಪ್ರವೇಶಿಸುತ್ತಾನೆ. ಇಲ್ಲಿಯವರೆಗೆ ದಕ್ಷಿಣದತ್ತ ವಾಲಿ ಚಲಿಸುತ್ತಿದ್ದ ಸೂರ್ಯ, ಇಂದಿನಿಂದ ಉತ್ತರ ದಿಕ್ಕಿಗೆ ಚಲಿಸುತ್ತಾನೆ.

ಸೂರ್ಯನ ಚಲನೆಗೆ ಅನುಸಾರವಾಗಿ ಎರಡು ಆಯನಗಳಿವೆ. ಆಯನ ಎಂದರೆ ಚಲಿಸುವುದು ಎಂದರ್ಥ. ಸೂರ್ಯನು ಮಕರ ರಾಶಿಯಿಂದ ಮಿಥುನ ಮಾಸಾಂತ್ಯದವರೆಗೆ ಸಂಚರಿಸುವಾಗ ಉತ್ತರಾಯಣವಾಗುತ್ತದೆ. ಕರ್ಕಾಟಾದಿ ಧನುರಾಂತ್ಯದವರೆಗೆ ಸೂರ್ಯನು ಸಂಚರಿಸುವಾಗ ದಕ್ಷಿಣಾಯಣವಾಗುತ್ತದೆ. ಪ್ರತಿ ವರ್ಷ ಜನವರಿ 14 ಅಥವಾ 15 ರಿಂದ ಜುಲೈ 15ರವರೆಗಿನ ಅವಧಿಯನ್ನು ʼಉತ್ತರಾಯಣʼ ಹಾಗೂ ಜುಲೈ 16 ರಿಂದ ಜನವರಿ 14ರ ಅವಧಿಯನ್ನು ʼದಕ್ಷಿಣಾಯನʼ ಎಂದು ಕರೆಯಲಾಗುತ್ತದೆ. ಪುಷ್ಯಮಾಸದಲ್ಲಿಬರುವ(ಜನವರಿ 14 ಅಥವಾ 15) ಬರುವ ಸಂಕ್ರಮಣವನ್ನು (Makar Sankranti) ʼಉತ್ತರಾಯಣ ಪುಣ್ಯಕಾಲʼ ಎಂದು ಕರೆಯಲಾಗುತ್ತದೆ. ದೇವರ ಆರಾಧನೆ, ದಾನ, ಧರ್ಮ, ಮತ್ತು ವಿವಾಹಗಳಂತಹ ಕಾರ್ಯಗಳಿಗೆ ಮಂಗಳಕರ ಅವಧಿ ಎಂದು ಕರೆಯಲಾಗುತ್ತದೆ.  ಇದನ್ನೂ ಓದಿ:  ವರ್ಷದ ಮೊದಲ ಹಬ್ಬ; ವಿವಿಧ ರಾಜ್ಯಗಳಲ್ಲಿ ಮಕರ ಸಂಕ್ರಾಂತಿ ಆಚರಣೆ ಹೇಗೆ?

 

ಕೇವಲ ಬದುಕುಕುವುದಕ್ಕೆ ಮಾತ್ರವೇ ಅಲ್ಲ, ಸಾಯುವುದಕ್ಕೂ ಉತ್ತರಾಯಣ ಪುಣ್ಯಕಾಲ. ಉತ್ತರಾಯಣ ಪುಣ್ಯ ಕಾಲದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂಬ ನಂಬಿಕೆಯಿದೆ. ಅದಕ್ಕಾಗಿಯೇ ಭೀಷ್ಮ ದೇಹ ತ್ಯಜಿಸಲು, ಉತ್ತರಾಯಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದ. ಉತ್ತರಾಯಣ, ದೇವತೆಗಳ ಕಾಲ, ದಕ್ಷಿಣಾಯನ ಪಿತೃಗಳ ಕಾಲವಾಗಿರುತ್ತದೆ. ಆದ್ದರಿಂದ ಯಜ್ಞ ಯಾಗಾದಿಗಳಿಗೆ, ಸಮಸ್ತ ದೇವತಾ ಕಾರ್ಯ ಶುಭಕಾರ್ಯಗಳಿಗೆ ಉತ್ತರಾಯಣ ಕಾಲ ಶ್ರೇಷ್ಠ ಕಾಲವೆಂದು ಕರೆಯಲಾಗುತ್ತದೆ.

ಭೀಷ್ಮ ಸೋತಿದ್ದು ಹೇಗೆ?
ಮಹಾಭಾರತ ಯುದ್ಧದಲ್ಲಿ ಭೀಷ್ಮ ಸಾವಿರಾರು ಸೈನಿಕರನ್ನು ಹತ್ಯೆ ಮಾಡುತ್ತಿದ್ದಾಗ ಕಂಗಾಲಾದ ಧರ್ಮರಾಯ 9ನೇ ದಿನದ ರಾತ್ರಿ ಅಜ್ಜನನ್ನು ಭೇಟಿಯಾಗುತ್ತಾನೆ. ಕೌರವ ಮಾಡುತ್ತಿರುವುದು ತಪ್ಪು, ಅಧರ್ಮ ಎನ್ನುವುದು ನಿಮಗೆ ತಿಳಿದಿದ್ದರೂ ನೀವು ಹೋರಾಟ ಮಾಡಿ ಸೈನಿಕರನ್ನು ಕೊಲ್ಲುತ್ತಿದ್ದೀರಿ ಇದು ಸರಿಯೇ ಎಂದು ಧರ್ಮದ ಬಗ್ಗೆ ಪ್ರಶ್ನೆ ಕೇಳುತ್ತೇನೆ. ಈ ಸಂದರ್ಭದಲ್ಲಿ ಭೀಷ್ಮ ತನ್ನ ಹಿಂದಿನ ಕಥೆಯನ್ನು ಹೇಳಿ ತಂದೆ ನೀಡಿದ ಇಚ್ಛಾಮರಣ ವರದ ಬಗ್ಗೆ ಹೇಳುತ್ತಾನೆ. ಅಷ್ಟೇ ಅಲ್ಲದೇ ಸ್ತ್ರೀಯಾಗಿ ಜನಿಸಿ ಪುರುಷನಾಗಿರುವ ವ್ಯಕ್ತಿ ಜೊತೆ ನಾನು ಯುದ್ಧ ಮಾಡುವುದಿಲ್ಲ. ಹೀಗಾಗಿ ನೀವು ಶಿಖಂಡಿಯನ್ನು ಮುಂದೆ ತಂದರೆ ನಾನು ಶಸ್ತ್ರತ್ಯಾಗ ಮಾಡುತ್ತೇನೆ ಎಂದು ಹೇಳುತ್ತಾನೆ. ಇದನ್ನೂ ಓದಿ: ಸಂಕ್ರಾಂತಿ ಭವಿಷ್ಯ – ಯಾವ ರಾಶಿಯವರಿಗೆ ಏನು?

ಈ ಶಿಖಂಡಿ ಯಾರು ಎನ್ನುವುಕ್ಕೂ ಕಥೆಯಿದೆ. ಹಿಂದಿನ ಜನ್ಮದಲ್ಲಿ ಅಂಬೆಯಾಗಿ ಜನಿಸಿದ್ದ ಈಕೆಯನ್ನು ಭೀಷ್ಮ ಸ್ವಯಂವರಲ್ಲಿ ಗೆದ್ದಿದ್ದ. ಆದರೆ ತಂದೆ ಸಂತನು ಮಹಾರಾಜನ ಮುಂದೆ ನಾನು ಬ್ರಹ್ಮಚಾರಿಯಾಗಿ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದರಿಂದ ಈತ ಅಂಬೆಯನ್ನು ಮದುವೆಯಾಗಿರಲಿಲ್ಲ. ಮದುವೆಯಾಗದೇ ಮೋಸ ಮಾಡಿದ್ದಕ್ಕೆ ಅಂಬೆ ಮುಂದಿನ ಜನ್ಮದಲ್ಲಿ ಶಿಖಂಡಿಯಾಗಿ ಜನಿಸಿ ಭೀಷ್ಮನ ವಿರುದ್ಧ ಸೇಡು ತೀರಿಸುವ ಪ್ರತಿಜ್ಞೆ ಮಾಡಿದ್ದಳು. ಈ ವಿಚಾರ ಭೀಷ್ಮನಿಗೆ ತಿಳಿದ ಕಾರಣ ಆಕೆಯನ್ನು ಮುಂದೆ ತರುವಂತೆ ಹೇಳಿದ. 10ನೇ ದಿನದ ಯುದ್ಧದಲ್ಲಿ ಆಕೆ ಮುಂದೆ ಕಾಣಿಸುತ್ತಿದ್ದಂತೆ ಭೀಷ್ಮ ಶಸ್ತ್ರವನ್ನು ತ್ಯಾಗ ಮಾಡಿದ. ನಂತರ ಅರ್ಜುನನು ಶಿಖಂಡಿಯ ಹಿಂದೆ ನಿಂತು ಭೀಷ್ಮನ ಮೇಲೆ ಬಾಣಗಳ ಬಿಡುತ್ತಾನೆ. ಕೊನೆಗೆ ಅರ್ಜುನ ನಿರ್ಮಿಸಿದ ಶರದ ಹಾಸಿಗೆಯಲ್ಲಿ ಭೀಷ್ಮ ಮಲಗುತ್ತಾನೆ.

ಭೀಷ್ಮನು ಶರದ ಹಾಸಿಗೆಯ ಮೇಲೆ ಮಲಗಿದ್ದರೂ ಯುದ್ಧ 10 ದಿನಗಳ ಕಾಲ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಯುಧಿಷ್ಠಿರನಿಗೆ ರಾಜಧರ್ಮ, ಮೋಕ್ಷಧರ್ಮ ಮತ್ತು ಆಪದ್ಧರ್ಮ ಇತ್ಯಾದಿಗಳ ಅಮೂಲ್ಯವಾದ ಉಪದೇಶಗಳನ್ನು ನೀಡುತ್ತಾನೆ. ಈ ಉಪದೇಶವನ್ನು ಕೇಳಿದ್ದರಿಂದ ಯುಧಿಷ್ಠಿರನು ಅಪರಾಧ ಮತ್ತು ಪಶ್ಚಾತ್ತಾಪದಿಂದ ಮುಕ್ತನಾಗುತ್ತಾನೆ. ಭೀಷ್ಮನ ಈ ಬೋಧನೆಯನ್ನು ಈಗ ʼಭೀಷ್ಮ ನೀತಿʼ ಎಂದು ಕರೆಯಲಾಗುತ್ತದೆ. ಕೊನೆಗೆ ಸೂರ್ಯ ಉತ್ತರಾಯಣ ಪ್ರವೇಶಿಸಿದ ದಿನ ಭೀಷ್ಮ ದೇಹ ತ್ಯಾಗ ಮಾಡುತ್ತಾನೆ.

TAGGED:BheeshmaMahabharataMakar Sankrantiಭೀಷ್ಮಮಕರ ಸಂಕ್ರಾಂತಿಮಹಾಭಾರತ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Rajanna Naseer next Zameer Ahmed CM Siddaramaiahs close circle friends is the big target Karnataka Politics
Bengaluru City

ರಾಜಣ್ಣ, ನಸೀರ್‌ ಆಯ್ತು ಮುಂದೆ ಜಮೀರ್‌? – ಸಿಎಂ ಆಪ್ತರೇ ಬಿಗ್‌ ಟಾರ್ಗೆಟ್‌

Public TV
By Public TV
11 minutes ago
leopard rescue udupi
Latest

ಉಡುಪಿ| ಬಾವಿಗೆ ಬಿದ್ದಿದ್ದ ಚಿರತೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

Public TV
By Public TV
37 minutes ago
Strait of Hormuz 1
Latest

ಅಮೆರಿಕ ದಿಗ್ಭಂಧನಕ್ಕೆ ಸೆಡ್ಡು – ಹಾರ್ಮುಜ್‌ ದಾಟಿದ ಇರಾನ್‌ ಬಂದರಿನಿಂದ ಬಂದ 2 ಹಡಗು

Public TV
By Public TV
1 hour ago
Marathi mandatory for rickshaw and taxi drivers in Maharashtra from May 1 Pratap Sarnaik RTO
Latest

ಮೇ 1 ರಿಂದ ಮಹಾರಾಷ್ಟ್ರದಲ್ಲಿ ಆಟೋ, ಟ್ಯಾಕ್ಸಿ ಚಾಲಕರಿಗೆ ಮರಾಠಿ ಕಡ್ಡಾಯ – ಇಲ್ಲದಿದ್ದರೆ ಲೈಸೆನ್ಸ್‌ ರದ್ದು

Public TV
By Public TV
1 hour ago
Vedanta power plant boiler blast
Latest

ಛತ್ತೀಸ್‌ಗಢದ ವೇದಾಂತ ವಿದ್ಯುತ್ ಸ್ಥಾವರದಲ್ಲಿ ಬಾಯ್ಲರ್ ಸ್ಫೋಟ – 9 ಕಾರ್ಮಿಕರು ದುರ್ಮರಣ

Public TV
By Public TV
1 hour ago
Tamil Nadu Poll BJP Manifesto
Latest

ಮಹಿಳೆಯರಿಗೆ ಮಾಸಿಕ 2,000 ರೂ., ವರ್ಷಕ್ಕೆ 3 ಸಿಲಿಂಡರ್ ಉಚಿತ – ತಮಿಳುನಾಡಲ್ಲಿ ಬಿಜೆಪಿ ಗ್ಯಾರಂಟಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?