Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Crime

ಚಿಕ್ಕಪ್ಪನ ಜೊತೆಗೆ ಅನೈತಿಕ ಸಂಬಂಧ- ಬರ್ತ್ ಡೇ ಪಾರ್ಟಿಗೆ ತೆರಳ್ತಿದ್ದವಳು ಬರ್ಬರವಾಗಿ ಹೆಣವಾದ್ಳು!

Public TV
Last updated: September 16, 2021 8:29 pm
Public TV
Share
3 Min Read
MDK MURDER
SHARE

– ಸೇತುವೆ ಮೇಲಿಂದ ತಳ್ಳಿ, ಬಿದ್ದಲ್ಲಿಂದ ಎಳೆದೊಯ್ದು ರೇಪ್ ಮಾಡಿ ಕೊಲೆ
– ಗ್ರಾಮಪಂಚಾಯ್ತಿ ಸದಸ್ಯೆಯ ಭೀಕರ ಮರ್ಡರ್

ಮಡಿಕೇರಿ: ಆಕೆ ಪಂಚಾಯ್ತಿ ಸದಸ್ಯೆ. ಹೊಳೆಯಿಂದ ಆಚೆಯಲ್ಲಿರುವ ಸಂಬಂಧಿಯೊಬ್ಬರ ಮಗುವಿನ ಹುಟ್ಟಿದ ಹಬ್ಬದ ಆಚರಣೆಗೆಂದು ಸಂಜೆ ಮಬ್ಬುಗತ್ತಲಲ್ಲಿ ಹೊರಟಿದ್ದಳು. ಅಷ್ಟರಲ್ಲೇ ಹೊಳೆಯ ಸೇತುವೆ ಮೇಲೆ ಬಂದಿದ್ದ ಕಿರಾತಕ ಆಕೆಯನ್ನು ಹಿಡಿದು ಎಳೆದಾಡಿ ಹೊಳೆಗೆ ದೂಡಿದ್ದ. ಬೆಳಗೆದ್ದು ನೋಡುವಷ್ಟರಲ್ಲಿ ಮಹಾಬೆಟ್ಟದ ತುತ್ತ ತುದಿಯಲ್ಲಿ ಮಹಿಳೆ ಜೊತೆಗೆ ಆ ಕಿರಾತಕನೂ ಮರವೊಂದರಲ್ಲಿ ಶವವಾಗಿ ನೇತಾಡಿದ್ದ.

MDK MURDER SUICIDE 2

ಹೌದು. ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯ್ತಿ ರಾಮನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಂಬಂಧಿಕರ ಮಗುವಿನ ಹುಟ್ಟುಹಬ್ಬಕ್ಕೆ ಅಂತ ಹೋದ ಪತ್ನಿ ಹೆಣವಾಗಿ ಮರದಲ್ಲಿ ನೇತಾಡುತ್ತಿರುವುದನ್ನು ನೋಡಿ ಪತಿ ಕೇಶವ ಕಣ್ಣೀರಾಕಿದ್ದಾರೆ. ಪತಿಯ ಗೋಳಾಟ ಕಂಡು ಅಯ್ಯೋ ಪಾಪ, ಹೇಗೋ ಗಾರೆ ಕೆಲಸ ಮಾಡಿಕೊಂಡು, ಇದ್ದ ಒಂದಷ್ಟು ಭೂಮಿಯಲ್ಲಿ ದುಡಿದು ತಿನ್ನುತ್ತಿದ್ದ ಈತನಿಗೆ ಹೀಗಾಗಬಾರದಿತ್ತು ಎಂದು ಜನ ಮರುಗಿದ್ದಾರೆ. ಆದರೆ ಈ ಪಾಪಿ ಇಂತಹ ಕೆಲಸ ಮಾಡಿದನಲ್ಲ ಎಂದು ಸತ್ತು ಹೆಣವಾಗಿ ನೇತಾಡುತ್ತಿರುವವನಿಗೂ ಅಲ್ಲಿ ನೆರೆದಿದ್ದ ಜನರು ಹಿಡಿ ಶಾಪ ಹಾಕಿದ್ದಾರೆ.

MDK MURDER SUICIDE 3

ಅಷ್ಟಕ್ಕೂ ಗ್ರಾಮ ಪಂಚಾಯ್ತಿ ಸದಸ್ಯೆ ಕಮಲಳನ್ನು ಕೊಂದಿದ್ದಾರೂ ಯಾಕೆ ಎಂದು ಪ್ರಶ್ನಿಸಿದರೆ ಒಂದೊಂದೇ ಸುಳಿವು ಬಿಚ್ಚಿಕೊಳ್ಳುತ್ತವೆ. ಅಷ್ಟಕ್ಕೂ ಕಮಲಳನ್ನು ಹೀಗೆ ಹೀನಾಯವಾಗಿ ಸಾಯಿಸಿ ತಾನೂ ನೇಣಿಗೆ ಕೊರಳೊಡ್ಡಿರೋ ಈ ಪಾಪಿ ಬೇರ್ಯಾರು ಅಲ್ಲ, ವರಸೆಯಿಂದ ಮೃತ ಕಮಲಗೆ ಚಿಕ್ಕಪ್ಪನೇ ಆಗಬೇಕಾಗಿರುವ 52 ವರ್ಷದ ಮುತ್ತು. ಇದನ್ನೂ ಓದಿ: ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ

MDK MURDER SUICIDE 4

ಬುಧವಾರ ಸಂಜೆ 7 ಗಂಟೆ ವೇಳೆಗೆ ಕಮಲ ತನ್ನ 9 ವರ್ಷದ ಮಗಳನ್ನು ಕರೆದುಕೊಂಡು ರಾಮನಹಳ್ಳಿಯ ಹೊಳೆಯಿಂದ ಆಚೆಗೆ ಇರುವ ಸಂಬಂಧಿಕರ ಮನೆಗೆ ಹೋಗೋದಕ್ಕೆ ಸೇತುವೆಯನ್ನು ದಾಟಿದ್ದಾರೆ. ಆದರೆ ಹೊಳೆಯ ಮತ್ತೊಂದು ದಂಡೆಯಲ್ಲೇ ಇರುವ ಮನೆಯಿಂದ ಬಂದ ಈ ಪಾಪಿ ಮುತ್ತು, ನೀನು ಇಲ್ಲಿ ಬರಲೇಬಾರದು. ನಿನ್ನನ್ನು ಸುಮ್ಮನೇ ಬಿಡೋದಿಲ್ಲ ಎಂದು ಹಿಡಿದು ಎಳೆದಾಡಿ ಹೊಳೆಗೆ ನೂಕೇ ಬಿಟ್ಟಿದ್ದಾನೆ. ಕಾರಣ ಇವರಿಬ್ಬರು ಅನೈತಿಕ ಸಂಬಂಧ ಹೊಂದಿದ್ದು, ಮುತ್ತು ಆಗಾಗ ಆಕೆಯ ಮನೆಗೆ ಹೋಗಿ ಬರುತ್ತಿದ್ದ. ಕೆಲ ಸಮಯದಿಂದ ಅಕೆಯ ಗಂಡನೊಂದಿಗೆ ಜಗಳ ಅಗಿರುವುದಿಂದ ಮನೆಗೆ ಹೋಗಿ ಬರುವುದು ಕಡಿಮೆ ಅಗಿದೆ. ಹೀಗಾಗಿ ನಿನ್ನೆ ಆಕೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುವ ಸಂದರ್ಭ ಅಕೆಯನ್ನು ಎಳೆದಾಡಿದ್ದಾನೆ. ಆಕೆಯೊಂದಿಗೆ ಇದ್ದ ಕುಟುಂಬಸ್ಥರಿಗೂ ಮುತ್ತು ಕೊಲೆ ಬೆದರಿಕೆ ಹಾಕಿ, ಅಲ್ಲಿಂದ ಜೊತೆಯಲ್ಲಿ ಇರುವವರನ್ನು ಕಳುಹಿಸಿದ್ದಾನೆ.

vlcsnap 2021 09 16 20h24m33s85 e1631804141691

ಸಂಜೆ ಸೇತುವೆ ಬಳಿ ಕಮಲ ಹಾಗೂ ಮುತ್ತು ಜಗಳ ಆಡಿದ್ದಾರೆ. ಕೋಪದಿಂದ ಮುತ್ತು ಆಕೆಯನ್ನು ಸೇತುವೆ ಕೆಳಗೆ ಹಾಕಿದ್ದಾನೆ. ಗ್ರಾಮದಲ್ಲಿ ಕತ್ತಲು ಆಗಿರುವುದರಿಂದ ಯಾರಿಗೂ ಆಕೆ ಸೇತುವೆ ಬಳಿ ಜಗಳ ಆಡಿರುವುದು ಅಷ್ಟು ಗೊತ್ತಾಗಿಲ್ಲ. ಇತ್ತ ಸೇತುವೆಗೆ ಬಿದ್ದ ಕಮಲಳನ್ನು ಎಳೆದುಕೊಂಡು ಹೋಗಿ, ಕತ್ತಿ ತೋರಿಸಿ ಬೆಟ್ಟದ ತುದಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ. ನಂತರ ಬೆಳಗ್ಗೆ ಗ್ರಾಮಸ್ಥರಿಗೆ ಈ ವಿಚಾರ ಗೊತ್ತಾಗುತ್ತದೆ ಎಂಬ ಭಯದಿಂದ ಆಕೆಯನ್ನು ಬೆಟ್ಟದ ಮೇಲೆ ಹತ್ಯೆ ಮಾಡಿ ನೇಣು ಹಾಕಿದ್ದಾನೆ. ಇಷ್ಟು ಮಾತ್ರವಲ್ಲದೆ ಕಮಲಳನ್ನು ಕೊಲೆಗೈದ ಬಳಿಕ ಆಕೆಯನ್ನು ಬಿಟ್ಟು ಬದುಕುವ ಶಕ್ತಿ ಇಲ್ಲ ಎಂದು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ರಾಮನಗರ ಗ್ರಾಮಕ್ಕೆ ತೆರಳಿ ರಸ್ತೆ ಪರಿಶೀಲಿಸಿದ ದಾವಣಗೆರೆ ಡಿಸಿ

MDK MURR

ಒಟ್ಟಿನಲ್ಲಿ ಹುಟ್ಟುಹಬ್ಬದ ಪಾರ್ಟಿಗೆ ತೆರಳುತ್ತಿದ್ದ ಕಮಲ, ಮುತ್ತು ಕೋಪಕ್ಕೆ ಬಲಿಯಾಗಿದ್ದಾಳೆ. ಒಂದು ಮಗುವಿನ ತಾಯಿಯಾಗಿರುವ ಕಮಲ ಹಾಗೂ ಸಂಬಂಧಿಯ ಅನೈತಿಕ ಸಂಬಂಧದಿಂದ ಇದೀಗ ಹೆಣ್ಣು ಮಗುಯೊಂದು ತಾಯಿ ಇಲ್ಲದೆ ಕಂಗಾಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

TAGGED:Grama Panchayat MembermadikerimanMurderPublic TVಕೊಲೆಗ್ರಾಮ ಪಂಚಾಯ್ತಿ ಸದಸ್ಯೆಪಬ್ಲಿಕ್ ಟಿವಿಮಡಿಕೇರಿವ್ಯಕ್ತಿ
Share This Article
Facebook Whatsapp Whatsapp Telegram

Cinema Updates

The girl Friend
ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಸಾಂಗ್ ರಿಲೀಸ್
Cinema Latest Top Stories
Actor Darshan At Bengaluru Airpor
ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್
Bengaluru City Cinema Latest Sandalwood Top Stories
Yogaraj Bhat Jayant Kaikini
ಯೋಗರಾಜ್ ಭಟ್ ಗೀತ ಗುಚ್ಛಕ್ಕೆ ಕಾಯ್ಕಿಣಿ ಸಾಥ್
Bengaluru City Cinema Latest Sandalwood
31 Days
ಜಾಲಿಡೇಸ್ ಹುಡುಗನ ಚಿತ್ರಕ್ಕೆ ಮನೋಹರ್ ಸಂಗೀತ : ಇದು 150ನೇ ಸಿನಿಮಾ
Cinema Latest Sandalwood Top Stories
K Manju and Style Shrinu
ಸದ್ಯದಲ್ಲೇ ಕೆ.ಮಂಜು ಮತ್ತು ಸ್ಮೈಲ್ ಶ್ರೀನು ಕಾಂಬಿನೇಶನ್ ಚಿತ್ರ
Cinema Latest Sandalwood Top Stories

You Might Also Like

KSRTC 2
Bengaluru City

ಸರ್ಕಾರ Vs ಸಾರಿಗೆ ನೌಕರರು – ಆ.5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ!

Public TV
By Public TV
3 hours ago
Siddaramaiah 7
Bengaluru City

22 ಸಚಿವರ ಮೀಟಿಂಗ್ ಬೆನ್ನಲ್ಲೇ ಸಿಎಂ-ಡಿಸಿಎಂ ಜೊತೆ ಸುರ್ಜೇವಾಲಾ ಸಭೆ – ಕೆರಳಿದ ಕುತೂಹಲ

Public TV
By Public TV
3 hours ago
PM Modi Meeting
Latest

100 ಕೃಷಿ ಜಿಲ್ಲೆಗಳ ಅಭಿವೃದ್ಧಿಗೆ ನಿರ್ಧಾರ – 24,000 ಕೋಟಿ ವೆಚ್ಚದ ಯೋಜನೆಗೆ ಕೇಂದ್ರ ಸಂಪುಟ ಅಸ್ತು

Public TV
By Public TV
4 hours ago
01 7
Big Bulletin

ಬಿಗ್‌ ಬುಲೆಟಿನ್‌ 16 July 2025 ಭಾಗ-1

Public TV
By Public TV
4 hours ago
02 8
Big Bulletin

ಬಿಗ್‌ ಬುಲೆಟಿನ್‌ 16 July 2025 ಭಾಗ-2

Public TV
By Public TV
4 hours ago
03 4
Big Bulletin

ಬಿಗ್‌ ಬುಲೆಟಿನ್‌ 16 July 2025 ಭಾಗ-3

Public TV
By Public TV
4 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?