ಧಾರವಾಡ: ಮಿನಿ ಲಾರಿ ಚಾಲಕನೋರ್ವ (Lorry Driver) ಲಾರಿಯಲ್ಲಿ ಮಲಗಿದ್ದಲ್ಲೇ ಅಸುನೀಗಿರುವ ಘಟನೆ ಧಾರವಾಡ (Dharwad) ಸಮೀಪದ ರಾಯಾಪುರದ ಬಳಿ ನಡೆದಿದೆ.
ಮೂಲತಃ ತಮಿಳುನಾಡಿನ ರಾಜೇಂದ್ರ ಚೋಜಾನ್ ಕಲಿಯಾಪೆರುಮಾಳ (41) ಸಾವನ್ನಪ್ಪಿದ ಚಾಲಕ. ತಮಿಳುನಾಡಿನಿಂದ ರಾಯಾಪುರದ ಕೃಷ್ಣ ವೇರ್ಹೌಸ್ಗೆ ವಾಷಿಂಗ್ ಮಶಿನ್ ಬಿಡಿ ಭಾಗಗಳನ್ನು ಈ ಚಾಲಕ ತಂದಿದ್ದ. ರಾತ್ರಿ ಲಾರಿಯಲ್ಲಿ ಮಲಗಿದ್ದ ಚಾಲಕನಿಗೆ ಅಲ್ಲೇ ಹೃದಯಾಘಾತವಾಗಿದೆ. ಇದನ್ನೂ ಓದಿ: ವ್ಯಸನ ಮುಕ್ತನಾಗಲು ಬಂದು ಲಕ್ಷಗಟ್ಟಲೆ ಹಣ ಎಗರಿಸಿದ ಭೂಪ!
ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆ ನಂತರ ಶವವನ್ನು ತಮಿಳುನಾಡಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಇದನ್ನೂ ಓದಿ: ಎಕ್ಸ್ಪ್ರೆಸ್ ವೇಯಲ್ಲಿ ಭೀಕರ ಅಪಘಾತ – ಮಾಜಿ ಸೈನಿಕ ಸಾವು, ನಾಲ್ವರಿಗೆ ಗಂಭೀರ ಗಾಯ
Web Stories