ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಗೆ ತಮ್ಮ ಪಕ್ಷದಲ್ಲಿಯೇ ವಿರೋಧಿಗಳಿದ್ದು, ಅವರೇ ತಮ್ಮನ್ನ ಸೋಲಿಸುವ ಭಯ ಸಿದ್ದರಾಮಯ್ಯಗೆ ಕಾಡುತ್ತಿದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪದ್ಮನಾಭನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ (Congress) ನಲ್ಲಿ ಶಾಸಕಾಂಗ ನಾಯಕ, ವಿಪಕ್ಷ ನಾಯಕರಿಗೆ ಕ್ಷೇತ್ರ ಸಿಗದ ಸ್ಥಿತಿ ನಿರ್ಮಾಣ ಆಗಿದೆ. ವಿಪಕ್ಷ ನಾಯಕರು ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಅಂತ ಚರ್ಚೆ ಆಗುತ್ತಿದೆ. ರಾಷ್ಟ್ರೀಯ ಪಕ್ಷ, ಆ ಪಕ್ಷದ ಲೀಡರ್ ಅನ್ನು ಈ ಪರಿಸ್ಥಿತಿಗೆ ದೂಡಿದೆ ಅಂತ ಲೇವಡಿ ಮಾಡಿದ್ರು.
ಸಿದ್ದರಾಮಯ್ಯ (Siddaramaiah) ಗೆ ವಿರೋಧ ಪಕ್ಷಕ್ಕಿಂತ ಅವರ ಪಕ್ಷದವರೇ ವಿರೋಧಿಗಳು ಇದ್ದಾರೆ. ಅದಕ್ಕೆ ಅವರಿಗೂ ಆತಂಕ ಆಗಿದೆ. ಸಿದ್ದರಾಮಯ್ಯಗೆ ಅವರ ಪಕ್ಷದಲ್ಲಿ ವಿರೋಧಿಗಳು ಇದ್ದಾರೆ. ಆ ವಿರೋಧಿ ಟೀಂ ಸಿದ್ದರಾಮಯ್ಯ ಅವರನ್ನು ಮುಗಿಸುವ ಭಯ ಅವರಿಗೆ ಕಾಡುತ್ತಿದೆ. ಹೀಗಾಗಿ ಕ್ಷೇತ್ರದ ಗೊಂದಲ ಇದೆ. ಆದರೆ ನಮಗೆ ಅಂತಹ ಗೊಂದಲ ಇಲ್ಲ. 123 ಗುರಿಗೆ ಬೇಕಾದ ಅಭ್ಯರ್ಥಿಗಳು ನಮಗೆ ಇದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೇಂದ್ರ ಗೃಹ ಇಲಾಖೆಯೊಂದಿಗಿನ ಸಂಘರ್ಷದ ಬಳಿಕ ದೆಹಲಿ ಬಜೆಟ್ ಮಂಡಿಸಿದ ಆಮ್ ಆದ್ಮಿ
ಚುನಾವಣೆಯ ಗುಂಗಲ್ಲಿ ಎಲ್ಲರೂ ಇದ್ದಾರೆ. 45 ದಿನ ಚುನಾವಣೆ ನಡೆಯುತ್ತೆ. ಎಲ್ಲಾ ಪಕ್ಷದಲ್ಲಿ ಅದರ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಪಕ್ಷ ಕೂಡಾ ಚುನಾವಣೆ ಸಿದ್ಧತೆ ಮಾಡುತ್ತಿದೆ. 26ರಕ್ಕೆ ಮೈಸೂರಿನಲ್ಲಿ ಪಂಚರತ್ನ ಯಾತ್ರೆ ಸಮಾರೋಪ ಇದೆ. ಸಭೆಗೆ ಅಗತ್ಯ ಸಿದ್ಧತೆಗಳನ್ನ ಮಾಡಿಕೊಳ್ತಿದ್ದೇವೆ. 26 ಕ್ಕೆ ಪಕ್ಷದ ಎರಡನೇ ಪಟ್ಟಿ ರಿಲೀಸ್ ಮಾಡ್ತೀವಿ. ಸುಮಾರು 50-60 ಜನರ ಎರಡನೇ ಪಟ್ಟಿ ರಿಲೀಸ್ ಮಾಡ್ತೀವಿ. ಬೇರೆ ಪಕ್ಷದಂತೆ ಕಾಯುವ ತಂತ್ರಗಾರಿಕೆ ನಾನು ಮಾಡಲ್ಲ ಎಂದರು.
ನಮ್ಮ 123 ಗುರಿಗೆ ಸಮರ್ಥ ಅಭ್ಯರ್ಥಿ ನಮ್ಮ ಬಳಿ ಇದ್ದಾರೆ. ಈಗಾಗಲೇ 123 ಅಭ್ಯರ್ಥಿಗಳು ಫೈನಲ್ ಆಗಿ ಹೋಗಿದ್ದಾರೆ. 10-15 ಕ್ಷೇತ್ರದಲ್ಲಿ ನಮಗೆ ಶಕ್ತಿ ಇರಬಹುದು ಅಷ್ಟೆ. ಅಲ್ಲೂ ಕೂಡಾ ಮತ ಇವೆ. ಆದರೆ ಅದನ್ನ ಸಂಘಟನಾತ್ಮವಾಗಿ ಮತ ಹಾಕಿಸಿಕೊಳ್ಳೋ ಶಕ್ತಿ ಇಲ್ಲ. ಬಿಜೆಪಿ- ಕಾಂಗ್ರೆಸ್ ನಿಂದ ಜೆಡಿಎಸ್ ಗೆ ಸೇರ್ಪಡೆ ಆಗೋರಿ ಇದ್ದಾರೆ. ಆ ಎರಡು ಪಕ್ಷದಲ್ಲಿ ಟಿಕೆಟ್ ಘೋಷಣೆ ಆಗಲಿ ಅಂತ ಕಾಯ್ತಿದ್ದಾರೆ. ನಮ್ಮ ಪಕ್ಷದಿಂದ ಹೊಗೋರು ಹೋಗಿ ಆಯ್ತು. ಇನ್ಯಾರು ಹೋಗೋದಿಲ್ಲ ಎಂದು ಹೇಳಿದರು.
ಎರಡು ಪಕ್ಷಗಳು ಟಿಕೆಟ್ ಘೋಷಣೆ ಮಾಡಿದ ಬಳಿಕ ಎಲ್ಲಾ ಪ್ರಕ್ರಿಯೆ ಪ್ರಾರಂಭ ಆಗುತ್ತೆ. ಕಾಂಗ್ರೆಸ್ ನವರು ಇಬ್ಬರು ಎಂಎಲ್ಸಿಗಳು ರಾಜೀನಾಮೆ ಕೊಟ್ಟು ಯಾಕೆ ಕರೆದಿದ್ದಾರೆ. ಅವರಿಗೆ ಟಿಕೆಟ್ ಕೊಡೋಕೆ ಅಲ್ಲವಾ?. ನಮಗೂ 10-15 ಕ್ಷೇತ್ರದಲ್ಲಿ ಸ್ವಲ್ಪ ಕೊರತೆ ಇದ್ದರೆ. ಅಲ್ಲಿಗೆ ಬಂದರೆ ಅವರ ಸೇರ್ಪಡೆ ಮಾಡಿಕೊಂಡ್ರೆ ನಮಗೂ ಅನುಕೂಲ ಆಗುತ್ತೆ ಎಂದು ತಿಳಿಸಿದರು.