Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ

Cinema

ಐವತ್ತರ ಸಂಭ್ರಮದಲ್ಲಿ ಕೆರೆಬೇಟೆ: ನೆಲದ ಘಮಲಿನ ಕಥೆಗೆ ಜೈ ಹೋ

Public TV
Last updated: May 30, 2024 5:37 pm
Public TV
Share
2 Min Read
Kerebete 1
SHARE

ಗೌರಿಶಂಕರ್ (Gowrishankar) ನಾಯಕನಾಗಿ ನಟಿಸಿದ್ದ ಕೆರೆಬೇಟೆ (Kerebete) ಚಿತ್ರಕ್ಕೆ ಎದುರಾಗಿದ್ದ ಸಂಕಷ್ಟಗಳು ಒಂದೆರಡಲ್ಲ. ಇಲ್ಲಿ ನೋಡಿದವರಿಗೆಲ್ಲ ಇಷ್ಟವಾದ ಚಿತ್ರವೊಂದನ್ನು ಉಳಿಸಿಕೊಳ್ಳುವುದು ಅದೆಷ್ಟು ಕಷ್ಟ ಎಂಬುದಕ್ಕೆ ಈ ಸಿನಿಮಾ ಕಣ್ಣೆದುರಿನ ಉದಾಹರಣೆ. ಬಹುಶಃ ಬೇರೆ ಯಾರೇ ಆಗಿದ್ದರೂ ಕೆರೆಬೇಟೆ ಬಿಡುಗಡೆಗೊಂಡ ಎರಡನೇ ವಾರದ ಹೊತ್ತಿಗೆಲ್ಲ ಕಣ್ಮರೆಯಾಗುತ್ತಿತ್ತು. ಆದರೆ ನಾಯಕ ನಟ ಗೌರಿಶಂಕರ್, ನಿರ್ಮಾಪಕ ಜೈಶಂಕರ್ ಹಾಗೂ ನಿರ್ದೇಶಕ ರಾಜ್ ಗುರು ಅವಿರತವಾಗಿ ಪ್ರಯತ್ನಿಸಿದ್ದಾರೆ. ಜಿದ್ದಿಗೆ ಬಿದ್ದಂತೆ ಪ್ರೇಕ್ಷಕರನ್ನು ತಲುಪುತ್ತಾ, ಸಿನಿಮಾ ಮಂದಿರಗಳಲ್ಲಿ ಉಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅದರ ಫಲವಾಗಿಯೇ ಇದೀಗ ಕೆರೆಬೇಟೆ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿಕೊಂಡಿದೆ.

Kerebete 3

ಒಂದು ಅಚ್ಚುಕಟ್ಟಾದ ಕಾರ್ಯಕ್ರಮದ ಮೂಲಕ ಐವತ್ತು ದಿನ ದಾಟಿದ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಸಿನಿಮಾ ಭಾಗವಾಗಿ ಕಾರ್ಯನಿರ್ವಹಿಸಿದವರಿಗೆಲ್ಲ ನೆನಪಿನ ಕಾಣಿಕೆ ಕೊಡುವ ಮೂಲಕ ಅರ್ಥವತ್ತಾದ ನಡೆ ಅನುಸರಿಸಲಾಗಿದೆ. ಇದೇ ವೇದಿಕೆಯಲ್ಲಿ ಗೌರಿಶಂಕರ್ ಮಹತ್ವದ ಘೋಷಣೆ ಮಾಡಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮ ಬ್ಯಾನರಿನಲ್ಲಿ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಅಂದಿದ್ದಾರೆ. ಈ ಅವಧಿಯಲ್ಲಿ ಒಳ್ಳೆ ನಿರ್ದೇಶನ, ಕಥೆ, ಒಂದೊಳ್ಳೆ ಬ್ಯಾನರ್ ಸಿಕ್ಕರೆ ನಾಯಕ ನಟನಾಗಿ ಮುಂದುವರೆಯುವುದಾಗಿ ಹೇಳಿಕೊಂಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ರಾಜಹಂಸದಿಂದ ಇಲ್ಲೀವರೆಗೆ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಇನ್ನು ಮೂರು ವರ್ಷಗಳ ಕಾಲ ತಮ್ಮಾಸೆಯಂತೆ ನಟನಾಗಿ ಮುಂದುವರೆಯಲು ಅವರು ತೀರ್ಮಾನಿಸಿದ್ದಾರೆ. ಈ ಐವತ್ತು ದಿನಗಳ ಮೈಲಿಗಲ್ಲು ತಲುಪಿಕೊಂಡ ಯಾನ ಸಾಮಾನ್ಯದ್ದೇನಲ್ಲ. ಗೌರಿಶಂಕರ್ ಕೆರೆಬೇಟೆಯನ್ನು ಸೋಲಲು ಬಿಡದಂತೆ ಶಕ್ತಿ ಮೀರಿ ಶ್ರಮಿಸಿದ್ದರು. ಅವರ ಒಂದೊಂದು ಪಟ್ಟುಗಳೂ ಕೂಡಾ ಪ್ರೇಕ್ಷಕರನ್ನು ಮುಟ್ಟಿ ಮೋಡಿ ಮಾಡಿದ್ದು ಸತ್ಯ. ಒಂದು ಸಮಸ್ಯೆ ಬಗೆಹರಿದಾಕ್ಷಣವೇ ಮತ್ತೊಂದು ಸವಾಲೆದುರಾಗೋ ಸ್ಥಿತಿಯನ್ನೆಲ್ಲ ಚಿತ್ರತಂಡ ಒಗ್ಗಟ್ಟಿನಿಂದ ಎದುರಿಸಿದೆ. ಈ ಕಾರಣದಿಂದಲೇ ಐವತ್ತರ ಸಂಭ್ರಮ ಸಾಧ್ಯವಾಗಿದೆ.

Kerebete 2

ಕನ್ನಡ ಚಿತ್ರರಂಗದಲ್ಲೀಗ ಪ್ರತಿಕೂಲ ವಾತಾವರಣವಿದೆ. ಅದೆಲ್ಲವನ್ನೂ ಹೇಗೆ ಅವುಡುಗಚ್ಚಿ ಎದುರಿಸಬೇಕು, ಜೈಸಿಕೊಳ್ಳಬೇಕೆಂಬುದಕ್ಕೆ ಕೆರೆಬೇಟೆ ಚಿತ್ರತಂಡ ತಾಜಾ ಉದಾಹರಣೆಯಾಗಿ ಕಾಣಿಸುತ್ತದೆ. ಇದೆಲ್ಲವೂ ಸಾಧ್ಯವಾಗಿದ್ದರ ಹಿಂದಿರೋದು ಈ ಸಿನಿಮಾದೊಳಗಿರುವ ಗಟ್ಟಿ ಕಂಟೆಂಟಿನ ಕಾರಣದಿಂದಲೇ. ಮಲೆನಾಡಿನ ಅಸ್ಮಿತೆಯಂತಿರೋ ಕೆರೆಬೇಟೆಯೆಂಬ ಆಚರಣೆಯ ಸುತ್ತ ರೂಪುಗೊಂಡ ಈ ಚಿತ್ರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಡೆಗೂ ಸೋಲು ಗೆಲುವಿನಾಚೆಗೆ ಒಂದೊಳ್ಳೆ ಚಿತ್ರವಾಗಿ ಕೆರೆಬೇಟೆ ದಾಖಲಾಗಿದೆ. ಕಷ್ಟಪಟ್ಟು ಇದೆಲ್ಲವನ್ನೂ ಸಾಧ್ಯವಾಗಿಸಿಕೊಂಡ ಚಿತ್ರತಂಡವನ್ನು ಅಭಿನಂದಿಸದಿರಲು ಸಾಧ್ಯವೇ?

 

ಜನಮನ ಟಾಕೀಸ್ ಮೂಲಕ ಜೈಶಂಕರ್ ಪಟೇಲ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜಗುರು ಬಿ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಘಶಕರಾಗಿ ಬರವಸೆ ಮೂಡಿಸಿದ್ದಾರೆ. ಬಿಂದು ಶಿವರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ, ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ತನ್ನೊಳಗಿನ ಕಸುವು, ಕೊಂಚವೂ ಆಚೀಚೆ ಕದಲದ ಶತಪ್ರಯತ್ನಗಳಿಂದಲೇ ಕೆರೆಬೇಟೆ ಐವತ್ತು ದಿನಗಳನ್ನು ದಾಟಿಕೊಂಡಿದೆ.

TAGGED:celebrationGowrishankarKerebeteRajguruಕೇರೆಬೇಟೆಗೌರಿಶಂಕರ್ಸೆಲೆಬ್ರೇಷನ್ ರಾಜ್ ಗುರು
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

accident death
Bengaluru City

ಚಿಕನ್ ತರಲು ಹೋಗುತ್ತಿದ್ದವನಿಗೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸಾವು

Public TV
By Public TV
18 minutes ago
Nepal Accident
Latest

ನೇಪಾಳದ ರೋಲ್ಪಾದಲ್ಲಿ ಪ್ರಪಾತಕ್ಕೆ ಬಿದ್ದ ಜೀಪ್ – 20 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ

Public TV
By Public TV
48 minutes ago
siddaramaiah
Bengaluru City

ಇದು ಆಡಳಿತವಲ್ಲ, ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Public TV
By Public TV
1 hour ago
IndiGo Flight
Districts

ಶಿವಮೊಗ್ಗ – ಬೆಂಗಳೂರು ನಡುವಿನ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನ

Public TV
By Public TV
1 hour ago
Hajj
Latest

ಹಜ್‌ ಯಾತ್ರೆಯ ವಿಮಾನ ದರ 10,000 ರೂ. ಹೆಚ್ಚಳ

Public TV
By Public TV
1 hour ago
SRH Player Heinrich Klaasen Loses Cool
Cricket

ಇನ್ನೊಮ್ಮೆ ಈ ರೀತಿ ಮಾಡಿದ್ರೆ ನೀನು ನೆಲದ ಮೇಲೆ ಬೀಳಬೇಕಾಗುತ್ತೆ: ಅಭಿಮಾನಿ ವಿರುದ್ಧ ಕ್ಲಾಸೆನ್ ಕೆಂಡಾಮಂಡಲ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?