ನವದೆಹಲಿ: ಮಹದಾಯಿ ವಿಚಾರವಾಗಿ ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಅವರನ್ನ ರಾಜ್ಯ ರೈತರ ನಿಯೋಗ ಭೇಟಿ ಮಾಡಿತು.
ಮಹದಾಯಿ ವ್ಯಾಪ್ತಿಯ ಮೂರು ಜಿಲ್ಲೆಯ 23 ಮಂದಿ ರೈತರ ನಿಯೋಗ ನವದೆಹಲಿಯ ಸಾರಿಗೆ ಭವನದಲ್ಲಿ ಸಚಿವರನ್ನ ಭೇಟಿಯಾದ್ರು. ಭೇಟಿ ವೇಳೆ ಮಹಾದಾಯಿ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಬೇಕು ಜೊತೆಗೆ ನ್ಯಾಯಾಧೀಕರಣದಲ್ಲಿರುವ ವ್ಯಾಜ್ಯದ ತೀರ್ಪು ಶೀಘ್ರ ನೀಡುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ನಿತಿನ್ ಗಡ್ಕರಿ ನ್ಯಾಯಾಧೀಕರಣದಲ್ಲಿ ವಿವಾದ ತೀರ್ಪಿನ ಹಂತದಲ್ಲಿದೆ. ಈ ವೇಳೆ ಮಧ್ಯ ಪ್ರವೇಶ ಸಾಧ್ಯವಿಲ್ಲ. ಜುಲೈಯೊಳಗೆ ಮಹದಾಯಿ ತೀರ್ಪು ಬರಲಿದೆ. ಒಂದು ವೇಳೆ ಬಾರದಿದ್ದಲ್ಲಿ ಆಗಸ್ಟ್ ಒಂದರ ಬಳಿಕ ಮತ್ತೊಮ್ಮೆ ಭೇಟಿಯಾಗುವಂತೆ ರಾಜ್ಯ ರೈತ ನಿಯೋಗಕ್ಕೆ ಸೂಚಿಸಿದ್ದಾರೆ.
ರೈತ ನಿಯೋಗದ ನೇತೃತ್ವ ವಹಿಸಿದ್ದ ಸಹ್ಯಾದ್ರಿ ಜಲಜನ ಸೊಸೈಟಿ ಮಹದಾಯಿ ಸಣ್ಣ ನೀರಾವರಿ ಯೋಜನೆ ಕುರಿತಾದ ಪ್ಲಾನ್ ಸಿದ್ಧಪಡಿಸಿ ಕೇಂದ್ರ ಜಲ ಸಂಪನ್ಮೂಲ ಇಲಾಖೆಗೆ ಸಲ್ಲಿಸಿತು. ಪ್ಲಾನ್ ಸ್ವೀಕರಿಸಿದ ನಿತಿನ್ ಗಡ್ಕರಿ ತೀರ್ಪಿನ ಬಳಿಕ ಪರಿಶೀಲಿಸುವ ಭರವಸೆ ನೀಡಿದರು.ಇದನ್ನೂ ಓದಿ:ಕಳಸಾ ಬಂಡೂರಿ ವಿವಾದ – ಚರ್ಚೆಗೆ ಪ್ರಧಾನಮಂತ್ರಿಗಳಿಂದ ರೈತರಿಗೆ ಬುಲಾವ್